ಆ್ಯಪ್ನಗರ

ಬೇಸರದಿಂದ ಪತ್ರ ಬರೆದ ಶಾನ್ವಿ ಶ್ರೀವಾಸ್ತವ್; ಯಾರ ಬಗ್ಗೆ ತಕರಾರು?

ನಟಿ ಶಾನ್ವಿ ಶ್ರೀವಾಸ್ತವ್ ಅವರು ಟ್ವಿಟರ್‌ನಲ್ಲಿ ಬೇಸರದಿಂದ ಪತ್ರವೊಂದನ್ನು ಬರೆದಿದ್ದು, ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಬೇಸರ ಯಾರ ಬಗ್ಗೆ ವ್ಯಕ್ತಪಡಿಸಿದ್ದಾರೆ ಎಂಬುದು ಮಾತ್ರ ಗೊತ್ತಾಗಿಲ್ಲ. ಇತ್ತೀಚೆಗೆ ಬಿಡುಗಡೆಯಾದ ಗೀತಾ ಸಿನಿಮಾ ಬೆನ್ನಲ್ಲೇ ಈ ಪತ್ರ ಬರೆದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

Vijaya Karnataka Web 3 Oct 2019, 9:22 pm
ನಟಿ ಶಾನ್ವಿ ಶ್ರೀವಾಸ್ತವ್‌ ಟ್ವಿಟ್ಟರ್‌ನಲ್ಲಿ ಚಿತ್ರರಂಗದ ತಮ್ಮ ಸಹೋದ್ಯೋಗಿಗಳಿಗೆ ಮನವಿಯೊಂದನ್ನು ಮಾಡಿದ್ದಾರೆ. ಟ್ವಿಟ್ಟರ್‌ನಲ್ಲಿ ತಮ್ಮ ಅನಿಸಿಕೆಯನ್ನು ಪೋಸ್ಟ್‌ ಮಾಡಿದ್ದು, ಎಲ್ಲರ ಗಮನ ಸೆಳೆದಿದೆ. ಚಿತ್ರರಂಗದಲ್ಲಿರುವವರಿಗೆ ಅವರು ಪತ್ರವೊಂದನ್ನು ಬರೆದಿದ್ದಾರೆ. ಇದು ಈಗ ಅನೇಕ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ.
Vijaya Karnataka Web shanvi


'ಒಳ್ಳೆಯ ಸಿನಿಮಾಗಳನ್ನು ಯಾರು ಪ್ರೀತಿಸುವುದಿಲ್ಲ? ಒಳ್ಳೇದು.. ನಾವೆಲ್ಲರೂ ಇಷ್ಟಪಡುತ್ತೇವೆ! ಮತ್ತು ಪ್ರೇಕ್ಷಕರಿಗಾಗಿ ಒಳ್ಳೆಯ ಸಿನಿಮಾ ಮಾಡಬೇಕು ಅಂತ ಯಾರು ಬಯಸೋಲ್ಲ? ಪ್ರೇಕ್ಷಕರನ್ನೂ ಲವ್‌ವಲ್ಲಿ ಬಿಳಿಸ್ತಾರಂತೆ ಶಾನ್ವಿ

ಒಂದು ಸಿನಿಮಾ ಅಂತಿಮವಾಗಿ ಹೇಗೆ ಮೂಡಿಬರುತ್ತೋ ಗೊತ್ತಿಲ್ಲ. ಆದರೆ, ಅದಕ್ಕಾಗಿ ಪ್ರಾಮಾಣಿಕವಾದ ಪ್ರಯತ್ನ ಬಹಳ ಅಗತ್ಯವಿದೆ. ಕ್ರೀಡೆಯಲ್ಲಿ ಸೋಲು ಅಥವಾ ಗೆಲುವು ಸಿಗುವ ಕೊನೆ ಕ್ಷಣದವರೆಗೆ ಹೇಗೆ ಜಿದ್ದಿನಿಂದ ಫೈಟ್‌ ಮಾಡುತ್ತಾರೋ ಹಾಗೆ ಪ್ರಯತ್ನ ಪಡಬೇಕಿದೆ. ನಾನು ಬಹಳ ವಿನಯದಿಂದ ಕೇಳಿಕೊಳ್ಳುತ್ತಿದ್ದೇನೆ.. ಒಂದು ಒಳ್ಳೆಯ ಸಿನಿಮಾ ಮಾಡಲು ಬೇಕಾದ್ದನ್ನು ಪ್ರಾಮಾಣಿಕವಾಗಿ, ಶ್ರದ್ಧೆಯಿಂದ, ಕೆಲಸದ ಬಗ್ಗೆ ನೈತಿಕತೆಯಿಂದ ಮಾಡುವುದಕ್ಕೆ ಪ್ರಾಮುಖ್ಯತೆ ನೀಡಿ.

ಪ್ರತಿಯೊಬ್ಬ ನಟನೂ ಆಯಾ ಸಿನಿಮಾದ ಭಾಗ. ಪ್ರಾಮಾಣಿಕವಾಗಿ ಅವರನ್ನು ಅಪ್ರೋಚ್‌ ಮಾಡಬೇಕಿದೆ. ಸ್ಕ್ರೀನ್‌ ಮೇಲೆ ಯಾವ ರೀತಿ ಮೂಡಿಬರಬೇಕು ಎಂದು ಇರುತ್ತದೆಯೋ ಅದೇ ರೀತಿ ಎಕ್ಸಾಟ್ಲೀ ಸ್ಕ್ರಿಪ್ಟ್ ನಿರೂಪಣೆ ಇರಬೇಕು. ಬದಲಾವಣೆ ಏನಾದರೂ ಮಾಡಿಕೊಂಡರೆ ಅದನ್ನು ನಟರಿಗೆ ತಿಳಿಸಬೇಕು. ಬದಲಾವಣೆ ನಿಜಕ್ಕೂ ಪ್ರಾಮಾಣಿಕವಾಗಿದ್ದರೆ ಸಿನಿಮಾದಲ್ಲಿ ಅದರ ಅಗತ್ಯತೆಯನ್ನು ನಟ ಅರ್ಥ ಮಾಡಿಕೊಳ್ಳುತ್ತಾರೆ. ಮತ್ತು ಅದನ್ನು ಗೌರವಿಸುತ್ತಾರೆ. ’ನೋ ಸ್ಟ್ರಾ ಚಾಲೆಂಜ್’ ಆರಂಭಿಸಿದ ಶಾನ್ವಿ ಶ್ರೀವಾಸ್ತವ್

ನಟರನ್ನು ದಿಕ್ಕುತಪ್ಪಿಸುವುದು ನೀತಿಬಾಹಿರ. ಅಲ್ಲದೆ, ಸುಳ್ಳು ಆಶ್ವಾಸನೆಗಳು, ಯಾವುದೇ ರೀತಿಯ ಸಮಜಾಯಿಷಿಗೆ ಪ್ರಯತ್ನಿಸುವುದು, ವೃತ್ತಿಪರತೆ ಇಲ್ಲದಿರುವುದು ಖಡಾಖಂಡಿತವಾಗಿ ಒಪ್ಪತಕ್ಕದ್ದಲ್ಲ. ಬೆಸ್ಟ್‌ಗಾಗಿ ನಮ್ಮ ಕೈಲಾದ ಬೆಸ್ಟ್‌ ಪ್ರಯತ್ನ ಮಾಡೋಣ' ಎಂದು ಟ್ವೀಟ್‌ ಮಾಡಿದ್ದಾರೆ.

ನಟಿ ಶಾನ್ವಿ ಶ್ರೀವಾಸ್ತವ ನಟನೆ ಗೀತಾ ಚಿತ್ರ ಇತ್ತೀಚೆಗೆ ರಿಲೀಸ್‌ ಆಗಿದೆ. ಇದರ ಬೆನ್ನಲ್ಲೇ ಅವರು ಈ ಪತ್ರ ಬರೆದಿರುವುದು ಕುತೂಹಲ ಕೆರಳಿಸಿದೆ. ಈಗ ಅವರು ರವಿಚಂದ್ರ ಮತ್ತು ಅವನೇ ಶ್ರೀಮನ್ನಾರಾಯಣ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕಣ್ಣು ಮಿಟುಕಿಸುವುದು ಎಷ್ಟು ಮುಖ್ಯ ಅಂತ ಕಲಿತೆ: ಶಾನ್ವಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌