ಆ್ಯಪ್ನಗರ

ಕಾವೇರಿ ವಿವಾದ: ಕನ್ನಡಿಗನ ಹೃದಯ ತಟ್ಟಿದ ತಮಿಳು ನಟ ಶಿಂಬು ಹೇಳಿದ ಮಾತು

ತಮಿಳು ಚಿತ್ರರಂಗ ಕೂಡ ಕಾವೇರಿ ಬೆಂಬಲ ಸೂಚಿಸಿ ಮೌನ ಪ್ರತಿಭಟನೆ ನಡೆಸಿದರು . ಈ ಹೋರಾಟದಲ್ಲಿ ತಮಿಳು ನಟ ಶಿಂಬು ಮಾತನಾಡಿರುವ ರೀತಿ ಮಾತ್ರ ಕನ್ನಡಿಗರೇ ಮೆಚ್ಚುಗೆ ಸೂಚಿಸುತ್ತಿದ್ದಾರೆ.

Vijaya Karnataka Web 9 Apr 2018, 5:19 pm
ತಮಿಳುನಾಡಿನಲ್ಲಿ ಕಾವೇರಿ ಕಾವು ಹೆಚ್ಚಾಗಿದ್ದು, ಈ ಅವಕಾಶವನ್ನು ರಾಜಕೀಯ ವ್ಯಕ್ತಿಗಳು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇನ್ನು ತಮಿಳು ಚಿತ್ರರಂಗದ ಗಣ್ಯರು ಕಾವೇರಿ ಬೆಂಬಲ ಸೂಚಿಸಿ ಮೌನ ಪ್ರತಿಭಟನೆ ನಡೆಸಿದರು .
Vijaya Karnataka Web shimbu


ಈ ಹೋರಾಟದ ಬಗ್ಗೆ ತಮಿಳು ಚಲನಚಿತ್ರ ನಟ ಶಿಂಬು ಮಾಡಿರುವ ಭಾಷಣವೊಂದು ಎರಡೂ ರಾಜ್ಯಗಳ ಜನರ ಹೃದಯ ತಟ್ಟುವಂತೆ ಮಾಡಿದೆ. ಅವರ ಭಾಷಣದ ವೀಡಿಯೊ ಎಲ್ಲೆಡೆ ವೈರಲ್‌ ಆಗಿದೆ

'ಜಾತಿ, ಮತ, ಸ್ಥಳ ಹೀಗೆ ಹಲವಾರು ಕಾರಣ ಹೇಳಿ ಮನುಷ್ಯರನ್ನು ಒಡೆಯುವ ಕಾರ್ಯವಾಗುತ್ತದೆ. ನಾನಿಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಬಗ್ಗೆ ಮಾತನಾಡಲು ಬಂದಿಲ್ಲ, ಕಾವೇರಿ ನಿರ್ವಹಣಾ ಮಂಡಳಿ ಬಗ್ಗೆಯೂ ಮಾತನಾಡಲು ಬಂದಿಲ್ಲ. ನಾನಿಲ್ಲಿ ಕರ್ನಾಟಕದಲ್ಲಿ ಹುಟ್ಟಿಲ್ಲವಾದರೂ ಅಲ್ಲಿನ ತಾಯಿಯ ಮಗನಾಗಿ ಮಾತನಾಡುತ್ತಿದ್ದಾನೆ. ಆ ತಾಯಿ ಬಳಿ ನಿಮ್ಮ ಮಕ್ಕಳು ಬಳಸಿ ಮಿಕ್ಕಿರುವ ನೀರನ್ನು ನಮಗೆ ಕೊಡಿ ಎಂದು ಕೇಳುತ್ತಿದ್ದೇನೆ. ಈ ತಿಂಗಳ 11 ಅಂದರೆ ಬುಧವಾರದಂದು ಅಪರಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯೊಳಗೆ ಕರ್ನಾಟಕದಲ್ಲಿರುವ ನನ್ನ ತಾಯಂದಿರು, ಸಹೋದರರು, ಸಹೋದರಿಯರು. ಬಂಧು ಬಳಗದವರೇ, ಆತ್ಮೀಯ ಕನ್ನಡಿಗರೇ ನೀವೊಂದು ಲೋಟ ನೀರು ತೆಗೆದು ಒಬ್ಬ ತಮಿಳಿಗನಿಗೆ ನೀಡಿ. ಅದನ್ನು ವೀಡಿಯೋ ಮಾಡಿ ಕಳುಹಿಸಿ. ಹಾಗೇ ಮಾಡಲಿಲ್ಲವೋ ನಿಮಗೆ ನೀರು ಕೊಡಲು ಇಷ್ಟವಿಲ್ಲವೆಂದು ನಾವೇ ತಿಳಿದುಕೊಳ್ಳುತ್ತೇವೆ. ನಮಗೆ ಈ ರಾಜಕೀಯ ಬೇಡ' ಎಂದು ಹೇಳಿದ್ದಾರೆ.

ನೀರು ಬೇಕೆಂದು ಇಷ್ಟೆಲ್ಲಾ ಮಾತನಾಡುತ್ತೇವೆ, ಆದರೆ ನಮ್ಮಲ್ಲಿ ಮಳೆ ನೀರು ಬಂದು ಮನೆಗಳೆಲ್ಲಾ ಮುಳುಗಿದಾಗ ಆ ಬಗ್ಗೆ ಯಾರೂ ಮಾತನಾಡಲಿಲ್ಲವೇಕೆ ಎಂದು ಪ್ರಶ್ನಿಸಿದರು.

ಮನುಷ್ಯರನ್ನು ಹಲವಾರು ಕಾರಣಗಳಿಂದ ಪ್ರತ್ಯೇಕಿಸುತ್ತಿರುವುದೇ ದೊಡ್ಡ ಸಮಸ್ಯೆಯಾಗಿದೆ. #UniteForHumanity ಎಂದು ಸಾಮಾಜಿಕ ತಾಣದಲ್ಲಿ ಬರೆದು ಹೋರಾಟ ನಡೆಸೋಣ. ಮಾನವೀಯತೆ ಬೆಳೆಸಿಕೊಳ್ಳೋಣ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌