ಆ್ಯಪ್ನಗರ

ನಟನೆಗೆ ಮರಳಿದ ಶಿವಮಣಿ

ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಿರ್ದೇಶಕ ಶಿವಮಣಿ ಮತ್ತೆ ನಟನೆಗೆ ಮರಳಿದ್ದಾರೆ. ರವಿ ಶ್ರೀವತ್ಸ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಭೂಗತ ಪುಟಗಳಲ್ಲಿ' ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

Vijaya Karnataka Web 21 Jul 2016, 4:00 am

ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಿರ್ದೇಶಕ ಶಿವಮಣಿ ಮತ್ತೆ ನಟನೆಗೆ ಮರಳಿದ್ದಾರೆ. ರವಿ ಶ್ರೀವತ್ಸ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಭೂಗತ ಪುಟಗಳಲ್ಲಿ' ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಉತ್ತರ ಕರ್ನಾಟಕದ ಭೂಗತ ಜಗತ್ತು ಚಿತ್ರದಲ್ಲಿ ಅನಾವರಣಗೊಳ್ಳಲಿದೆಯಂತೆ. ಇಲ್ಲಿ ಎರಡು ಅಂಡರ್‌ವರ್ಲ್ಡ್‌ ತಂಡಗಳಿದ್ದು, ಒಂದು ತಂಡದ ಪ್ರಮುಖನಾಗಿ ಶಿವಮಣಿ ಇರುತ್ತಾರೆ. ಅವರ ಪಾತ್ರದ ಹೆಸರು ಮಹೇಶಪ್ಪ ಸಾಹುಕಾರ. ಇಲ್ಲಿ ತಮ್ಮ ನಿಜ ವಯಸ್ಸಿನ ಪಾತ್ರದಲ್ಲೇ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ವಿಶೇಷ.

ಹಾಗೆ ನೋಡಿದರೆ ಶಿವಮಣಿಗೆ ಅಭಿನಯ ಹೊಸದೇನಲ್ಲ. ಈ ಹಿಂದೆ 'ಲವ್‌ಯೂ', 'ಖಾಕಿ' ಬೆಳ್ಳಿಬೆಟ್ಟ', 'ಅಶೋಕ' ಚಿತ್ರಗಳಲ್ಲಿ ಶಿವಮಣಿ ನಟಿಸಿದ್ದರು. ಆನಂತರ ತಮ್ಮ ಕಾರ್ಯಕ್ಷೇತ್ರವಾದ ನಿರ್ದೇಶನಕ್ಕೆ ಮರಳಿದ್ದ ಅವರು ಇದೀಗ ಮತ್ತೆ ನಟನೆಯತ್ತ ಹೊರಳಿದ್ದಾರೆ. 'ಹಿಂದೆ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದ ನಾನು ನಟನಾಗಬೇಕೆಂದೇ ಸಿನಿಮಾಗೆ ಬಂದವನು. ಅನಿರೀಕ್ಷಿತ ಬೆಳವಣಿಗೆಯಲ್ಲಿ ನಿರ್ದೇಶಕನಾದೆ. ಇದೀಗ ನಟನೆಗೆ ಮರಳಿದ್ದು ಮುಂದೆ ನಿರ್ದೇಶನದ ಜತೆಜತೆಗೆ ನಟನೆಯಲ್ಲೂ ಗಂಭೀರವಾಗಿ ತೊಡಗಿಸಿಕೊಳ್ಳಬೇಕೆಂದು ನಿರ್ಧರಿಸಿದ್ದೇನೆ' ಎನ್ನುತ್ತಾರೆ ಶಿವಮಣಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌