ಆ್ಯಪ್ನಗರ

ದೇಹದಾನ ಮಾಡಿದ ಶಿವರಾಜ್‌ ಕುಮಾರ್ ಮತ್ತು ಸಹೋದರರು

ಡಾ. ರಾಜ್‌ಕುಮಾರ್‌ ನೇತ್ರದಾನ ಮಾಡಿ ಮಾದರಿಯಾದರು ಹಾಗೆಯೇ ಅವರ ಪುತ್ರ ಶಿವರಾಜ್‌ ಕುಮಾರ ಮತ್ತು ಅವರ ಸಹೋದರರು ಕೂಡ ದೇಹದಾನ ಮಾಡಿದ್ದಾರೆ.

Vijaya Karnataka 9 Nov 2018, 8:41 am
ಅಪ್ಪನ ಹಾದಿಯಲ್ಲೇ ನಡೆದು ಇತರರಿಗೆ ಮಾದರಿ ಆಗುತ್ತಿದ್ದಾರೆ ನಟ ಶಿವರಾಜ್‌ ಕುಮಾರ್‌. ತಮ್ಮ ಸಹೋದರರು ಸೇರಿದಂತೆ ತಾವು ಕೂಡ ದೇಹದಾನ ಮಾಡುವುದಾಗಿ ಹೇಳಿದ್ದಾರೆ ಶಿವರಾಜ್‌ ಕುಮಾರ್‌. ಸದ್ಯ ಅವರು ಕವಚ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ಅವರು ಅಂಧನಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಟೀಸರ್‌ ರಿಲೀಸ್‌ ವೇಳೆ, ಇಂಥದ್ದೊಂದು ಮಾದರಿಯ ಕೆಲಸಕ್ಕೆ ಅವರು ಕೈ ಹಾಕಿದ್ದಾರೆ.
Vijaya Karnataka Web Shiv Raj Kumar


'ಅಪ್ಪಾಜಿ (ರಾಜ್‌ಕುಮಾರ್‌) ನೇತ್ರದಾನ ಮಾಡಿ, ಇತರರಿಗೆ ಬೆಳಕಾಗಿದ್ದಾರೆ. ಹಾಗಾಗಿಯೇ ನಾವು ಕೂಡ ದೇಹದಾನಕ್ಕೆ ಮುಂದಾಗಿದ್ದೇವೆ. ಸತ್ತ ನಂತರ ನಮ್ಮ ದೇಹವೂ ಉಪಯೋಗಕ್ಕೆ ಬರಲಿ ಎಂಬುದು ನಮ್ಮ ಆಸೆ ಆಗಿದೆ. ಹಾಗಾಗಿಯೇ ಇಂಥದ್ದೊಂದು ನಿರ್ಧಾರಕ್ಕೆ ಬಂದಿದ್ದೇವೆ' ಅಂದಿದ್ದಾರೆ ಶಿವರಾಜ್‌ಕುಮಾರ್‌.

ಟೀಸರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಅನೇಕ ಅಂಧ ಮಕ್ಕಳು ಹಾಜರಿದ್ದರು. ಅವರ ಸಮ್ಮುಖದಲ್ಲಿಯೇ ಇಂಥದ್ದೊಂದು ಮಾದರಿಯ ಕೆಲಸಕ್ಕೆ ಅವರು ಚಾಲನೆ ನೀಡಿದರು.

ಶಿವರಾಜ್‌ ಕುಮಾರ್‌ರ ಈ ಕೆಲಸಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಮೆಚ್ಚುಗೆಯ ಮಾತು ಕೇಳಿ ಬಂದಿದೆ. 'ಶಿವಣ್ಣ ತುಂಬಾ ಸರಳ ವ್ಯಕ್ತಿ. ಅವರು ಆಗಾಗ್ಗೆ ಇಂತಹ ಸಮಾಜಮುಖಿ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಅವರೆಲ್ಲ ನಮಗೆ ಮಾದರಿ' ಅಂದರು ನಟ ಧನಂಜಯ್‌.

'ಕಣ್ಣಿದ್ದರೂ ಕಣ್ಣಿಲ್ಲದಂತೆ ನಟಿಸುವುದು ತುಂಬಾ ಕಷ್ಟ. ಅವರ ಭಾವನೆಗಳನ್ನು ಕೊಂಚ ಮಟ್ಟಿಗೆ ಅರ್ಥ ಮಾಡಿಕೊಂಡು ಕವಚ ಸಿನಿಮಾದಲ್ಲಿ ನಟಿಸಿದ್ದೇನೆ. ಇಂತಹ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದಕ್ಕೆ ಹೆಮ್ಮೆ ಪಡುತ್ತೇನೆ' ಅಂದಿದ್ದಾರೆ ಶಿವರಾಜ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌