ಆ್ಯಪ್ನಗರ

ಶೆಡ್‌ ಹೊಟೇಲ್‌ನಲ್ಲಿದೊಸೆ ಸವಿದ ಶಿವರಾಜ್‌

ಈ ಹಿಂದೆ ದಾವಣಗೆರೆ ಬೆಣ್ಣೆ ದೋಸೆ ಹೊಟೇಲ್‌ನಲ್ಲಿಸ್ವತಃ ತಾವೇ ದೋಸೆ ತಯಾರಿಸಿ ಸುದ್ದಿ ಆಗಿದ್ದರು ಶಿವರಾಜ್‌ ಕುಮಾರ್‌. ಈಗ ಶೆಡ್‌ ಹೊಟೇಲ್‌ನಲ್ಲಿಹಲಗೂರಿನ ಬೆಣ್ಣೆ ದೋಸೆ ಸವಿದು, ತಾವು ಎಷ್ಟು ಸಿಂಪಲ್‌ ಎನ್ನುವುದನ್ನು ತೋರಿಸಿದ್ದಾರೆ.

Vijaya Karnataka 9 Sep 2019, 5:00 am
ಈ ಹಿಂದೆ ದಾವಣಗೆರೆ ಬೆಣ್ಣೆ ದೋಸೆ ಹೊಟೇಲ್‌ನಲ್ಲಿಸ್ವತಃ ತಾವೇ ದೋಸೆ ತಯಾರಿಸಿ ಸುದ್ದಿ ಆಗಿದ್ದರು ಶಿವರಾಜ್‌ ಕುಮಾರ್‌. ಈಗ ಶೆಡ್‌ ಹೊಟೇಲ್‌ನಲ್ಲಿಹಲಗೂರಿನ ಬೆಣ್ಣೆ ದೋಸೆ ಸವಿದು, ತಾವು ಎಷ್ಟು ಸಿಂಪಲ್‌ ಎನ್ನುವುದನ್ನು ತೋರಿಸಿದ್ದಾರೆ.
Vijaya Karnataka Web shivarajkumar


ಎರಡು ದಿನಗಳ ಹಿಂದೆಯಷ್ಟೇ ಅವರು ಮಲೆ ಮಹದೇಶ್ವರ ಸ್ವಾಮಿ ದರ್ಶನಕ್ಕಾಗಿ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದರು. ಅಲ್ಲಿಂದ ವಾಪಸ್ಸು ಬರುವಾಗ ಮಳವಳ್ಳಿ ಬಳಿಯ ಹಲಗೂರಿನ ಬಾಬು ಎಂಬುವವರ ರಸ್ತೆ ಬದಿಯ ಹೋಟೆಲ್‌ಗೆ ತೆರಳಿ ದೋಸೆ ರುಚಿ ಸವಿದಿದ್ದಾರೆ. ಇವರಿಗೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್‌, ನಿರ್ದೇಶಕ ರಘರಾಮ್‌, ನಟ ಗುರುರಾಜ್‌ ಸಾಥ್‌ ನೀಡಿದ್ದಾರೆ. ಇವರೆಲ್ಲರೂ ದೋಸೆ ತಿನ್ನುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿವೈರಲ್‌ ಆಗಿದೆ.

ರಸ್ತೆ ಬದಿಯ ಹೊಟೇಲ್‌ನಲ್ಲಿಹೆಸರಾಂತ ನಟನೊಬ್ಬ ಸಾಮಾನ್ಯ ವ್ಯಕ್ತಿಯಂತೆ ಬಂದು ದೋಸೆ ತಿಂದಿರುವ ಕುರಿತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅವರ ಸರಳ ಬದುಕು ಎಲ್ಲರಿಗೂ ಮಾದರಿ ಎಂದು ಕೊಂಡಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌