ಆ್ಯಪ್ನಗರ

ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂದ ಶಿವಣ್ಣ

ನಟ ಶಿವರಾಜ್‌ ಕುಮಾರ್‌ ಸರ್ಜರಿ ನಂತರ ಸುಮ್ಮನೆ ಕೂತಿಲ್ಲ. ಬದಲಿಗೆ ಲಂಡನ್‌ ಸುತ್ತುತ್ತಿದ್ದಾರೆ. ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಪತ್ನಿ ಗೀತಾ ಜತೆ ಲಂಡನ್‌ ಬೀದಿಗಳಲ್ಲಿ ಓಡಾಡುತ್ತಿದ್ದಾರೆ. ಆದರೆ, ಕನ್ನಡ ನಾಡಿನಲ್ಲೇ ಹುಟ್ಟಬೇಕು ಎಂದಿದ್ದಾರೆ. ಅವರು ಕರ್ನಾಟಕವನ್ನು ಮಿಸ್‌ ಮಾಡುತ್ತಿರುವುದು ಇದರಿಂದ ವ್ಯಕ್ತವಾಗಿದೆ.

Vijaya Karnataka Web 19 Jul 2019, 5:00 am
ನಟ ಶಿವರಾಜ್‌ ಕುಮಾರ್‌ ಸರ್ಜರಿ ನಂತರ ಸುಮ್ಮನೆ ಕೂತಿಲ್ಲ. ಬದಲಿಗೆ ಲಂಡನ್‌ ಸುತ್ತುತ್ತಿದ್ದಾರೆ. ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಪತ್ನಿ ಗೀತಾ ಜತೆ ಲಂಡನ್‌ ಬೀದಿಗಳಲ್ಲಿ ಓಡಾಡುತ್ತಿದ್ದಾರೆ. ಆದರೆ, ಕನ್ನಡ ನಾಡಿನಲ್ಲೇ ಹುಟ್ಟಬೇಕು ಎಂದಿದ್ದಾರೆ. ಅವರು ಕರ್ನಾಟಕವನ್ನು ಮಿಸ್‌ ಮಾಡುತ್ತಿರುವುದು ಇದರಿಂದ ವ್ಯಕ್ತವಾಗಿದೆ.
Vijaya Karnataka Web shivarajkumar


'ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು.. ಲಂಡನ್‌ ಬಂದ್ಮೇಲೆ ಊರೆಲ್ಲಾ ಸುತ್ತಬೇಕು. ನಾನು ಮತ್ತು ನನ್ನ ಗೀತ' ಎಂದು ಟ್ವೀಟ್‌ ಮಾಡಿದ್ದಾರೆ. ಇದರ ಜತೆ ಪತ್ನಿ ಗೀತಾ ಜತೆ ಕುಳಿತಿರುವ ಫೋಟೋ ಶೇರ್‌ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅವರ ಅಭಿಮಾನಿಗಳು, 'ಜನುಮದ ಜೋಡಿ', ಲವ್ಲೀ ಪೇರ್‌ ಎಂದೆಲ್ಲಾ ಕಾಮೆಂಟ್‌ ಮಾಡಿದ್ದಾರೆ.

ಇತ್ತೀಚೆಗೆ ಫೇಸ್‌ ಬುಕ್‌ಗೆ ಎಂಟ್ರಿಕೊಟ್ಟಿದ್ದ ಶಿವಣ್ಣ ಈಗ ಇನ್‌ಸ್ಟಾಗ್ರಾಂನಲ್ಲೂ ತಮ್ಮ ಖಾತೆ ತೆರೆದಿದ್ದಾರೆ. ಲಂಡನ್‌ನಲ್ಲಿ ಜುಲೈ 10ರಂದು ಅವರ ಭುಜದ ಸರ್ಜರಿ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌