ಆ್ಯಪ್ನಗರ

ಕಿರಾತಕ ಬರೋದು ಖಚಿತ

ಕಿರಾತಕ 2 ಚಿತ್ರ ಸೆಟ್ಟೇರುವುದು ಅನುಮಾನ ಎಂಬ ಸುದ್ದಿ ಹರಡಿರುವ ಬೆನ್ನಲ್ಲೇ ನಟ ಯಶ್‌ ಸ್ವಷ್ಟನೆ ನೀಡಿದ್ದಾರೆ. ಸದ್ಯಕ್ಕೆ ಕೆಲವು ಕಾರಣಗಳಿಗೆ ಶೂಟಿಂಗ್‌ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂದಿದ್ದಾರೆ.

Vijaya Karnataka 18 Jan 2019, 9:19 am
ಐಟಿ ರೈಡ್‌ ಆದ ಹಿನ್ನೆಲೆಯಲ್ಲಿ ಕಿರಾತಕ 2 ಚಿತ್ರ ಸೆಟ್ಟೇರುವುದಿಲ್ಲ ಎಂಬ ಮಾತನ್ನು ನಟ ಯಶ್‌ ಅಲ್ಲಗಳೆದಿದ್ದಾರೆ. ಈಗ ಕೆಜಿಎಫ್‌ ಚಾಪ್ಟರ್‌ 2 ಮತ್ತು ಕಿರಾತಕ 2 ಚಿತ್ರಗಳೆರಡೂ ಇವರ ಮುಂದಿದ್ದು, ಯಾವುದನ್ನು ಮೊದಲು ಪ್ರಾರಂಭಿಸಬೇಕು ಎಂಬ ಬಗ್ಗೆ ಸದ್ಯದಲ್ಲೆ ತೀರ್ಮಾನ ತೆಗೆದುಕೊಳ್ಳಲಿರುವುದಾಗಿ ಅವರು ಹೇಳಿದ್ದಾರೆ. ತಾಂತ್ರಿಕ ಕಾರಣಗಳಿರುವುದರಿಂದ ಚಿತ್ರತಂಡಗಳೊಂದಿಗೆ ಮಾತನಾಡಿ ಯಾವ ಚಿತ್ರವನ್ನು ಮೊದಲು ಪ್ರಾರಂಭಿಸಬಹುದು ಎಂಬ ಬಗ್ಗೆ ನಿರ್ಧರಿಸಲಿದ್ದಾರೆ.
Vijaya Karnataka Web Yash


ಕೆಜಿಎಫ್‌ ಚಿತ್ರೀಕರಣ ಹಂತದಲ್ಲಿರುವಾಗಲೇ ಕಿರಾತಕ 2 ಚಿತ್ರ ಸೆಟ್ಟೇರಲಿದೆ ಎಂಬ ಸುದ್ದಿ ಹರಡಿತ್ತು. ಒಂದು ಮೂಲದ ಪ್ರಕಾರ ಕೆಜಿಎಫ್‌ ರಿಲೀಸ್‌ ಆದ ನಂತರ ಕಿರಾತಕ 2 ಸೆಟ್ಟೇರಲಿದೆ ಎಂದು ತಿಳಿದು ಬಂದಿತ್ತು. ಆದರೆ, ಕೆಜಿಎಫ್‌ ಚಾಪ್ಟರ್‌ 1 ದೊಡ್ಡ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಚಿತ್ರತಂಡ ಕೆಜಿಎಫ್‌ ಚಾಪ್ಟರ್‌ 2 ಚಿತ್ರವನ್ನು ತಕ್ಷಣ ಕೈಗೆತ್ತಿಕೊಂಡಿತ್ತು. ಮಾರ್ಚ್‌ನಲ್ಲಿ ಕೆಜಿಎಫ್‌ 2 ಚಿತ್ರೀಕರಣ ಪ್ರಾರಂಭವಾಗಲಿದೆ ಎಂಬ ಸುದ್ದಿಯೂ ಇದೆ. ಇದೇ ಕಾರಣಕ್ಕೆ ಕೆಜಿಎಫ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ಬೇರೆ ಚಿತ್ರಗಳನ್ನು ಪಕ್ಕಕ್ಕಿಟ್ಟಿದ್ದಾರೆ ಎನ್ನಲಾಗಿದೆ. ಕೆಜಿಎಫ್‌ 2 ಚಿತ್ರದ ಪೂರ್ವಬಾವಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇದೆಲ್ಲದರ ನಡುವೆ ಐಟಿ ರೈಡ್‌ ಒಂದು ರೀತಿಯಲ್ಲಿ ಕಿರಾತಕ 2 ಮತ್ತು ಕೆಜಿಎಫ್‌ 2 ಚಿತ್ರಗಳ ಪ್ರಾರಂಭಕ್ಕೆ ಜರ್ಕ್‌ ಕೊಟ್ಟಂತಾಗಿತ್ತು. ಹಾಗಾಗಿಯೇ ಕಿರಾತಕ 2 ಚಿತ್ರ ಸದ್ಯ ಸೆಟ್ಟೇರುವುದಿಲ್ಲ ಎಂಬ ಮಾತು ಕೇಳಿಬಂದಿತ್ತು. ಆದರೆ, ಯಶ್‌ ಇದನ್ನು ನಿರಾಕರಿಸಿದ್ದಾರೆ. ಕಿರಾತಕ 2 ಚಿತ್ರ ಮಾಡೋದಂತೂ ಖಚಿತ. ಅದಕ್ಕೆ ಸ್ವಲ್ಪ ಸಮಯ ಬೇಕಾಗಿದೆ ಎಂದಿದ್ದಾರೆ.

ಕೆಜಿಎಫ್‌ ಹವಾ ಇರುವಾಗಲೇ ಕೆಜಿಎಫ್‌ 2 ಬಂದರೆ ಚೆನ್ನಾಗಿರುತ್ತದೆ ಎಂಬುದಂತೂ ನಿಜ. ಅಲ್ಲದೆ, ನಿರ್ದೇಶಕ ಪ್ರಶಾಂತ್‌ ನೀಲ್‌ ಶ್ರೀಮುರಳಿ ನಟನೆಯ ಉಗ್ರಂ ವೀರಂ ಚಿತ್ರ ನಿರ್ದೇಶನ ಮಾಡಬೇಕಿದೆ. ಇದರ ಜತೆಯಲ್ಲೇ ಪರಭಾಷೆಗಳಿಂದೂ ಪ್ರಶಾಂತ್‌ ನೀಲ್‌ಗೆ ಭಾರೀ ಬೇಡಿಕೆ ಬಂದಿದೆ. ಹಾಗಾಗಿ ಈಗ ಮಾಡದಿದ್ದರೆ ಕೆಜಿಎಫ್‌ 2 ಬರಲು ಇನ್ನೂ 3-4 ವರ್ಷಗಳಂತೂ ಕಾಯಬೇಕಾಗುತ್ತದೆ. ಇನ್ನೊಂದೆಡೆ ಕಿರಾತಕ 2 ಚಿತ್ರ ನಿರ್ದೇಶನ ಮಾಡಬೇಕಿರುವ ನಿರ್ದೇಶಕ ಅನಿಲ್‌ ಈಗ ದಾರಿ ತಪ್ಪಿದ ಮಗ ಚಿತ್ರದ ಶೂಟಿಂಗ್‌ನಲ್ಲಿ ಬಿಝಿಯಾಗಿದ್ದಾರೆ. ಅದನ್ನು ಮುಗಿಸಿ ಕಿರಾತಕ ಶುರುಮಾಡಲು ಇನ್ನೂ ಕೆಲ ತಿಂಗಳು ಬೇಕಾಗಬಹುದು. ಹೀಗಾಗಿ ಕೆಜಿಎಫ್‌ ಚಾಪ್ಟರ್‌ 2 ಮೊದಲು ಸೆಟ್ಟೇರುವ ಸಾಧ್ಯತೆ ಹೆಚ್ಚಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌