ಆ್ಯಪ್ನಗರ

ರ‍್ಯಾಪಿಡ್ ಫೈರ್‌ ಉತ್ತರ ವಿವಾದವಾಗುತ್ತೆ ಅಂತ ಗೊತ್ತಿರಲಿಲ್ಲ ಎಂದ ಶ್ರದ್ಧಾ

ಕೆಲ ದಿನಗಳ ಹಿಂದೆಯಷ್ಟೇ ಸಮಂತಾ ನಟನೆ ತೆಲುಗು-ತಮಿಳು ಯು ಟರ್ನ್‌ ಚಿತ್ರ ಅಷ್ಟೊಂದು ಇಷ್ಟವಾಗಲಿಲ್ಲ ಎಂದು ಪ್ರತಿಕ್ರಿಯಿಸಿದ್ದ ವಿವಾದಕ್ಕೀಡಾಗಿದ್ದ ಕನ್ನಡ ನಟಿ ಶ್ರದ್ಧಾ ಈಗ ಮತ್ತೊಂದು ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ.

Vijaya Karnataka 24 Apr 2019, 3:53 pm
* ಹರೀಶ್‌ ಬಸವರಾಜ್‌
Vijaya Karnataka Web SHRADHA 01 (2)


ಕೆಲ ದಿನಗಳ ಹಿಂದೆಯಷ್ಟೇ ಸಮಂತಾ ನಟನೆ ತೆಲುಗು-ತಮಿಳು ಯು ಟರ್ನ್‌ ಚಿತ್ರ ಅಷ್ಟೊಂದು ಇಷ್ಟವಾಗಲಿಲ್ಲ ಎಂದು ಪ್ರತಿಕ್ರಿಯಿಸಿದ್ದ ವಿವಾದಕ್ಕೀಡಾಗಿದ್ದ ಕನ್ನಡ ನಟಿ ಶ್ರದ್ಧಾ ಶ್ರೀನಾಥ್‌, ಈಗ ಮತ್ತೊಂದು ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ.

ಯಶ್‌ ಅಥವಾ ಟಾಲಿವುಡ್‌ ಹೀರೋ ನಾನಿ ಇಬ್ಬರಲ್ಲಿ ನೀವು ಯಾರನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬ ಪ್ರಶ್ನೆಯೊಂದಕ್ಕೆ ನಾನಿ ಎಂದು ಉತ್ತರಿಸಿದ್ದ ಶ್ರದ್ಧಾ ಇದೀಗ ಆ ಬಗ್ಗೆ ಮಾತನಾಡಿದ್ದಾರೆ.

ಈ ಬಗ್ಗೆ ಲವಲವಿಕೆ ಜತೆ ಮಾತನಾಡಿದ ಅವರು, 'ಯಶ್‌ ಮತ್ತು ನಾನಿ ಅವರನ್ನು ಆಯ್ಕೆಯಾಗಿ ನೀಡಿದರೆ ನಾನಿಯನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದುಬೇರೆ ಯಾವ ಉದ್ದೇಶದಿಂದಲೂ ಅಲ್ಲ, ಬದಲಿಗೆ ನನಗೆ ನಾನಿ ಈಗ ಸ್ನೇಹಿತರಾಗಿದ್ದಾರೆ. ಯಶ್‌ ಅವರು ಅಷ್ಟೊಂದು ಪರಿಚಯವಿಲ್ಲ ಎಂಬ ಕಾರಣಕ್ಕೆ ಹೀಗೆ ಹೇಳಿದ್ದೆ ಅಷ್ಟೇ' ಎಂದಿದ್ದಾರೆ ಶ್ರದ್ಧಾ.

ನಾನಿ ಜತೆ ತೆಲುಗಿನ 'ಜೆರ್ಸಿ' ಸಿನಿಮಾದಲ್ಲಿ ನಟಿಸಿರುವ ಶ್ರದ್ಧಾ, ಒಂದೇ ಸಿನಿಮಾದಿಂದ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಈ ಸಿನಿಮಾದ ಸಕ್ಸಸ್‌ ಪಾರ್ಟಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದಾಗ ಈ ವಿವಾದ ಸೃಷ್ಟಿಯಾಗಿದೆ. 'ನಾನು ಯಶ್‌ ಅವರ ಜತೆ ಇದುವರೆಗೂ ಕೇವಲ 30 ಸೆಕೆಂಡ್‌ಗಳು ಮಾತ್ರ ಮಾತನಾಡಿದ್ದೇನೆ. ಆದರೆ ನಾನಿ ಅವರು ಈಗ ನನ್ನ ಕೋ ಆ್ಯಕ್ಟರ್‌. ಒಳ್ಳೆಯ ಸ್ನೇಹಿತ ಕೂಡ. ಹಾಗಾಗಿ ನಾನಿಯವರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದೆ. ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ. ಇದು ರ್ಯಾಪಿಡ್ ಫೈರ್‌ನಲ್ಲಿ ಕೇಳಿದ ಪ್ರಶ್ನೆ. ಇಂತಹ ರಾರ‍ಯಪಿಡ್‌ ಫೈರ್‌ನಲ್ಲಿ ಹೀಗೆ ಸಿಕ್ಕಿ ಹಾಕಿಕೊಳ್ಳುತ್ತೇವೆ. ಅಲ್ಲಿ ಹ್ಯೂಮರಸ್‌ ಆಗಿ ಪ್ರಶ್ನೆ ಕೇಳಿರುತ್ತಾರೆ. ಪ್ರೇಕ್ಷಕರು ಕೂಡ ಅದನ್ನು ತಮಾಷೆಯಾಗಿಯೇ ತೆಗೆದುಕೊಳ್ಳಬೇಕು. ಎಲ್ಲವನ್ನು ತಪ್ಪು ಎಂದು ಭಾವಿಸಿದರೆ ಕಷ್ಟವಾಗುತ್ತದೆ. ಇದನ್ನು ನಾನು ಹೇಳಿದಾಗ ಇದು ವಿವಾದ ಆಗುತ್ತದೆ ಎಂಬುದು ನನಗೆ ಗೊತ್ತಿರಲಿಲ್ಲ. ನಾವು ನಮ್ಮ ಕೆಲಸದತ್ತ ಮಾತ್ರ ಗಮನ ಹರಿಸುತ್ತೇವೆ'ಎಂದು ಹೇಳಿದ್ದಾರೆ ಶ್ರದ್ಧಾ.

ಸದ್ಯ 'ಜೆರ್ಸಿ' ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಟಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾಗಳ ಆಫರ್‌ ಸಹ ಬರುತ್ತಿದೆ. ಆದರೆ ನಾನು ಒಳ್ಳೆಯ ಟೀಮ್‌ ನೋಡಿ ಸೆಲೆಕ್ಟ್ ಮಾಡಿಕೊಳ್ಳುತ್ತಿದ್ದೇನೆ. ತೆಲುಗು ಮತ್ತು ತಮಿಳು ಎರಡು ಭಾಷೆಯಲ್ಲಿಯೂ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದೇನೆ. ಸದ್ಯದಲ್ಲೇ 'ಕೆ 13' ಎಂಬ ಚಿತ್ರ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿ 'ರುಸ್ತುಂ' ಇದೆ ಅದರ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ'ಎಂದು ಅವರು ತಿಳಿಸಿದ್ದಾರೆ.

----

ಯಶ್‌ ಅವರ ಸಾಧನೆ ಬಗ್ಗೆ ನನಗೆ ಗೌರವವಿದೆ. ಆದರೆ ಅವರು ನನಗೆ ಹೆಚ್ಚು ಪರಿಚಯವಿಲ್ಲದ ಕಾರಣಕ್ಕೆ ನಾನು ಹಾಗೆ ಹೇಳಿದ್ದೆ. ನಾನಿ ನನಗೆ ಒಳ್ಳೆಯ ಸ್ನೇಹಿತರು. ಹಾಗಾಗಿ ಹೀಗೆ ಹೇಳಿದೆ. ಇದರಲ್ಲಿ ವಿವಾದ ಮಾಡುವಂತಹದ್ದು ಏನೂ ಇಲ್ಲ.

-ಶ್ರದ್ಧಾ ಶ್ರೀನಾಥ್‌ ನಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌