ಆ್ಯಪ್ನಗರ

ಆಫರ್‌ಗಳು ಬರುವುದಿಲ್ಲ ಎಂದು ನಿರೀಕ್ಷಿಸಿದ್ದೆ: ಶ್ರುತಿ ಹರಿಹರನ್‌

'ಮಿಟೂ' ಹಗರಣದ ನಂತರ ನಟಿ ಶ್ರುತಿ ಹರಿಹರನ್‌ಗೆ ಸಿನಿಮಾ ಆಫರ್‌ಗಳು ಬರುವುದು ನಿಂತಿದೆ. ಇದು ಆಶ್ಚರ್ಯದ ಸಂಗತಿ ಏನಲ್ಲ ಎಂದಿದ್ದಾರೆ ನಟಿ ಶ್ರುತಿ ಹರಿಹರನ್‌. 'ಹಿಂದೆ ವಾರಕ್ಕೆ ಮೂರು ಸಿನಿಮಾಗಳಿಗಾದರೂ ಆಫರ್‌ ಬರುತ್ತಿತ್ತು. ಆದರೆ, ಈಗ ಕಡಿಮೆಯಾಗಿದೆ. ಬಹುಶಃ ನನ್ನ ಜತೆ ಕೆಲಸ ಮಾಡಲು ಹಲವರು ಸಿದ್ಧರಿಲ್ಲ. ಇದರಿಂದ ನನಗೆ ಆಶ್ಚರ್ಯವೇನೂ ಆಗಿಲ್ಲ. ನಾನು ಇದನ್ನು ನಿರೀಕ್ಷಿಸಿದ್ದೆ. ಮೊದಲಿನಿಂತೆ ಎಲ್ಲವೂ ಇರೋಲ್ಲ ಅಂತಾನೂ ಗೊತ್ತಿತ್ತು. ಇದೆಲ್ಲಾ ಗೊತ್ತಿದ್ದೇ ನಾನು ಹೋರಾಟಕ್ಕೆ ಮುಂದಾದೆ.

Vijaya Karnataka 14 Dec 2018, 7:44 am
ಸುಮಾರು ಒಂದು ತಿಂಗಳ ಹಿಂದೆ ಮಿಟೂ ಅಭಿಯಾನದಲ್ಲಿ ನಟಿ ಶ್ರುತಿ ಹರಿಹರನ್‌ ನಟ ಅರ್ಜುನ್‌ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಇದಾದ ನಂತರ ಸ್ಯಾಂಡಲ್‌ವುಡ್‌ನಲ್ಲಿ ಶ್ರುತಿಗೆ ಸಿನಿಮಾ ಆಫರ್‌ಗಳು ಬರುವುದು ನಿಂತಿದೆಯಂತೆ. ಇದನ್ನು ಸ್ವತಃ ಅವರೇ ಮಾಧ್ಯಮದೊಂದಿಗೆ ಹೇಳಿಕೊಂಡಿದ್ದಾರೆ.
Vijaya Karnataka Web Shruthi


'ಹಿಂದೆ ವಾರಕ್ಕೆ ಮೂರು ಸಿನಿಮಾಗಳಿಗಾದರೂ ಆಫರ್‌ ಬರುತ್ತಿತ್ತು. ಆದರೆ, ಈಗ ಕಡಿಮೆಯಾಗಿದೆ. ಬಹುಶಃ ನನ್ನ ಜತೆ ಕೆಲಸ ಮಾಡಲು ಹಲವರು ಸಿದ್ಧರಿಲ್ಲ. ಇದರಿಂದ ನನಗೆ ಆಶ್ಚರ್ಯವೇನೂ ಆಗಿಲ್ಲ. ನಾನು ಇದನ್ನು ನಿರೀಕ್ಷಿಸಿದ್ದೆ. ಇದು ಸಹಜ. ಆದರೆ, ನನ್ನ ಜತೆ ಕೆಲಸ ಮಾಡಲು ಬಯಸುವ ನಿರ್ದೇಶಕರು ಹೊಸ ಸಿನಿಮಾದ ಸ್ಕ್ರಿಪ್ಟ್‌ ಕೆಲಸದಲ್ಲಿ ತೊಡಗಿದ್ದಾರೆ. ಈ ಪ್ರಕರಣದಿಂದ ಹಲವರ ದ್ವೇಷ ಕಟ್ಟಿಕೊಳ್ಳುತ್ತೇನೆ ಎಂದು ನನಗೆ ಗೊತ್ತಿತ್ತು. ಮೊದಲಿನಿಂತೆ ಎಲ್ಲವೂ ಇರೋಲ್ಲ ಅಂತಾನೂ ಗೊತ್ತಿತ್ತು. ಇದೆಲ್ಲಾ ಗೊತ್ತಿದ್ದೇ ನಾನು ಹೋರಾಟಕ್ಕೆ ಮುಂದಾದೆ. ಹಾಗೇ ನನ್ನದೇ ದಾರಿಯಲ್ಲಿ ನಾನು ಹೋರಾಟವನ್ನು ಮುಂದುವರಿಸುತ್ತೇನೆ' ಎಂದಿದ್ದಾರೆ ಅವರು.

'ನಾನು ಕಮಿಟೆಡ್‌ ಮತ್ತು ಪ್ರಾಮಾಣಿಕ ನಟಿಯಾಗಿದ್ದರಿಂದಲೇ ಇಲ್ಲಿಯವರೆಗೆ ಬಂದಿದ್ದೇನೆ. ನನ್ನಲ್ಲಿ ನನಗೆ ನಂಬಿಕೆ ಇದೆ. ಬಹುಶಃ ನಾನು ನಟನೆಯನ್ನು ಹೊರತುಪಡಿಸಿ ಮಾಡಬೇಕೆಂದಿರುವ ಉಳಿದ ಕನಸುಗಳನ್ನು ನನಸು ಮಾಡಿಕೊಳ್ಳುವ ಸಮಯ ಈಗ ಬಂದಿದೆ. ಹಾಗಂತ ನಾನು ನಟನೆಯಿಂದ ದೂರ ಉಳಿಯುತ್ತೇನೆ ಎಂದು ಭಾವಿಸಬೇಕಿಲ್ಲ. ಯಾವಾಗ ಬೇಕಾದರೂ ಅವಕಾಶ ಸಿಕ್ಕಾಗ ನಟಿಸುತ್ತೇನೆ' ಎಂದು ದಿಟ್ಟತನದಿಂದ ನುಡಿದಿದ್ದಾರೆ ಶ್ರುತಿ. ಈಗ ಅವರ ನಟನೆಯ 4 ಕನ್ನಡ, 1 ತಮಿಳು ಸಿನಿಮಾಗಳು ರಿಲೀಸ್‌ಗೆ ಸಿದ್ಧವಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌