ಆ್ಯಪ್ನಗರ

ಹೊಸ ಸಾಹಸಕ್ಕೆ ಅಣಿಯಾದ ಶ್ರುತಿ ನಾಯ್ಡು

ಕಿರುತೆರೆಯಲ್ಲಿ ಸೂಪರ್‌ ಹಿಟ್‌ ಧಾರಾವಾಹಿಗಳನ್ನು ನೀಡಿರುವ ಶ್ರುತಿ ನಾಯ್ಡು, ಮೊದಲ ಬಾರಿಗೆ ಸಿನಿಮಾವೊಂದನ್ನು ನಿರ್ದೇಶನ ಮಾಡಲು ಪ್ಲ್ಯಾನ್‌ ಮಾಡಿಕೊಂಡಿದ್ದಾರೆ.

Vijaya Karnataka 20 May 2019, 7:23 pm
* ಶರಣು ಹುಲ್ಲೂರು
Vijaya Karnataka Web shruti-naidu


ಕಿರುತೆರೆಯಲ್ಲಿ ಧಾರಾವಾಹಿಗಳ ನಿರ್ಮಾಣ, ನಿರ್ದೇಶನ ಮಾಡಿದ್ದ ಶ್ರುತಿ ನಾಯ್ಡು ಇದೀಗ ಸಿನಿಮಾ ನಿರ್ದೇಶನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಅದಕ್ಕಾಗಿ ಅವರು ಪ್ರೇಮಕಥೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ.

'ಪ್ರೀಮಿಯರ್‌ ಪದ್ಮಿನಿ 25 ದಿನಗಳ ಪ್ರದರ್ಶನ ಕಾಣುತ್ತಿದೆ. ಆಸ್ಪ್ರೇಲಿಯಾ, ಸಿಂಗಾಪುರ ಸೇರಿದಂತೆ ಹಲವು ದೇಶಗಳಲ್ಲಿ ರಿಲೀಸ್‌ ಆಗುತ್ತಿದೆ. ಇದೇ ಸಂದರ್ಭದಲ್ಲಿ ನಾನು ನಿರ್ದೇಶನ ಮಾಡುವ ಚಿತ್ರದ ಬಗ್ಗೆ ಹೇಳಬೇಕು ಅನಿಸಿತು. ಮತ್ತೆ ಸದಭಿರುಚಿಯ ಸಿನಿಮಾ ಮಾಡಲು ನಮ್ಮ ತಂಡ ಉತ್ಸುಕವಾಗಿದೆ. ಒಳ್ಳೆಯ ಕಥೆಯೊಂದಿಗೆ ನಾನು ನಿರ್ದೇಶಕಿಯಾಗಿ ಸಿನಿಮಾ ರಂಗಕ್ಕೆ ಬರುತ್ತಿದ್ದೇನೆ' ಎಂದು ಶ್ರುತಿ ತಿಳಿಸಿದ್ದಾರೆ.

'ಸುಂದರವಾದ ಪ್ರೇಮಕಥೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಇಡೀ ಕುಟುಂಬ ಸಮೇತ ಕೂತು ನೋಡುವ ಸಿನಿಮಾ ಮಾಡಬೇಕು ಎನ್ನುವುದು ನನ್ನಾಸೆ. ಹಾಗಾಗಿ ಎಲ್ಲರಿಗೂ ಇಷ್ಟವಾಗುವಂತೆ ಚಿತ್ರಕಥೆ ಮಾಡುತ್ತಿದ್ದೇವೆ. ಸದ್ಯದಲ್ಲೇ ಕಲಾವಿದರ ಆಯ್ಕೆ ಕೂಡ ಮಾಡಲಿದ್ದೇವೆ' ಎಂದು ಅವರು ಹೇಳಿದ್ದಾರೆ.

ಮೊದಲ ಸಿನಿಮಾದಲ್ಲೇ ಯಶಸ್ಸು ಪಡೆದಿರುವ ಶ್ರುತಿ, ನಿರಂತರವಾಗಿ ಸಿನಿಮಾ ಮಾಡುವ ಪ್ಲ್ಯಾನ್‌ ಮಾಡಿದ್ದಾರೆ. ಇದಕ್ಕೆ ಕಾರಣ ಪ್ರೀಮಿಯರ್‌ ಪದ್ಮಿನಿಗೆ ಸಿಕ್ಕ ಉತ್ತಮ ರೆಸ್ಪಾನ್ಸ್‌ ಅಂತೆ. 'ನಾನು ಯಾವತ್ತೂ ಗೆಲ್ಲುವುದಕ್ಕಾಗಿ ಧಾರಾವಾಹಿ ಅಥವಾ ಸಿನಿಮಾ ಮಾಡಿದವರು ಅಲ್ಲ. ಉತ್ತಮವಾದ ಕಥೆ ಕೊಡಬೇಕು ಎನ್ನುವುದಷ್ಟೇ ನಮ್ಮ ಉದ್ದೇಶ. ಈ ಸಿನಿಮಾ ಕೂಡ ಅದೇ ಕಾನ್ಸೆಪ್ಟ್‌ ಮಾಡುತ್ತಿದ್ದೇವೆ' ಎಂದರು ಶ್ರುತಿ.

------------

ಸಿನಿಮಾ ಮಾಡಬೇಕು ಎನ್ನುವುದು ಬಹುದಿನದ ಕನಸಾಗಿತ್ತು. ಈಗ ಅದು ಈಡೇರುತ್ತಿದೆ. ಮೊದಲ ನಿರ್ದೇಶನದ ಚಿತ್ರಕ್ಕಾಗಿ ಲವ್‌ಸ್ಟೋರಿ ಆಯ್ಕೆ ಮಾಡಿಕೊಂಡಿದ್ದೇನೆ.

- ಶ್ರುತಿ ನಾಯ್ಡು, ನಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌