ಆ್ಯಪ್ನಗರ

ಕಡಲ ತೀರ ಭಾರ್ಗವನಿಗೆ ಶ್ರುತಿ ಪ್ರಕಾಶ್‌ ನಾಯಕಿ

ಪನ್ನಗಾ ಸೋಮಶೇಖರ್‌ ನಿರ್ದೇಶನದಲ್ಲಿ ಮೂಡಿ ಬರಲಿರುವ 'ಕಡಲ ತೀರ ಭಾರ್ಗವ' ಸಿನಿಮಾದಲ್ಲಿ ಶ್ರುತಿ ಪ್ರಕಾಶ್‌ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಕ್ರಿಶ್ಚಿಯನ್‌ ಹುಡುಗಿಯ ಪಾತ್ರ ಮಾಡುತ್ತಿದ್ದಾರೆ.

Vijaya Karnataka 9 Apr 2019, 5:00 am
ನಟಿ ಶ್ರುತಿ ಪ್ರಕಾಶ್‌ ಈಗ ಮತ್ತೊಂದು ವಿಭಿನ್ನ ಪಾತ್ರ ಮಾಡುತ್ತಿದ್ದಾರೆ. 'ಕಡಲ ತೀರ ಭಾರ್ಗವ' ಸಿನಿಮಾದಲ್ಲಿ ಶ್ರುತಿ ಕ್ರಿಶ್ಚಿಯನ್‌ ಹುಡುಗಿಯ ಪಾತ್ರ ನಿರ್ವಹಿಸುತ್ತಿದ್ದು, ಅದೊಂದು ವಿಭಿನ್ನ ಪಾತ್ರ ಎನ್ನುತ್ತಾರೆ ನಿರ್ದೇಶಕರು. ಇಂಪನಾ ಎಂಬ ಹುಡುಗಿಯ ಪಾತ್ರ ಅದಾಗಿದ್ದು, ಅವಳ ಜೀವನಕ್ಕೆ ಅದ್ಭುತವಾದ ಹಿನ್ನೆಲೆ ಕೂಡ ಇದೆಯಂತೆ.
Vijaya Karnataka Web shruti


ಕನ್ನಡ ಸಿನಿಮಾ ರಂಗಕ್ಕೆ ಹೊಸ ನಿರ್ದೇಶಕರ ಪ್ರವೇಶ ಹುರುಪು ತುಂಬುತ್ತಿದೆ. ಅಂತಹ ನಿರ್ದೇಶಕರ ಸಾಲಿಗೆ ಹೊಸದಾಗಿ ಸೇರ್ಪಡೆ ಆಗುತ್ತಿದ್ದಾರೆ ಪನ್ನಗಾ ಸೋಮಶೇಖರ್‌. ಇವರು ನಿರ್ದೇಶನದಲ್ಲಿ 'ಕಡಲ ತೀರ ಭಾಗರ್ವ' ಎಂಬ ಚಿತ್ರ ಮೂಡಿ ಬರುತ್ತಿದ್ದು, ಈ ಸಿನಿಮಾದ ಮೂಲಕ ಹೊಸ ಕಲಾವಿದರು ಸ್ಯಾಂಡಲ್‌ವುಡ್‌ಗೆ ಪರಿಚಯ ಆಗುತ್ತಿದ್ದಾರೆ.

ಇದೊಂದು ರೊಮ್ಯಾಂಟಿಕ್‌ ಡ್ರಾಮಾ ಕಥಾ ವಸ್ತು ಹೊಂದಿರುವ ಸಿನಿಮಾವಾಗಿದ್ದು, ಥ್ರಿಲ್ಲರ್‌ ಅಂಶಗಳೂ ಚಿತ್ರದಲ್ಲಿವೆ. ಹಾಗಾಗಿ ಹೊಸ ಕಲಾವಿದರೊಂದಿಗೆ ಈ ಸಿನಿಮಾದ ಕಥೆಯನ್ನು ಹೇಳಲು ಹೊರಟಿದ್ದಾರಂತೆ ನಿರ್ದೇಶಕರು.

ಪ್ರಮುಖವಾಗಿ ಮೂರು ಪಾತ್ರಗಳ ಸುತ್ತ ನಡೆಯುವ ಕಥೆಗೆ ಭರತ್‌ ಗೌಡ ಹೀರೋ. ಮತ್ತೊಂದು ಪ್ರಮುಖ ಪಾತ್ರವನ್ನು ವರುಣ್‌ ರಾಜ್‌ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಕಿರುಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ಭರತ್‌ಗೆ ಇದು ಮೊದಲ ಸಿನಿಮಾ.

ಎರಡು ದಿನಗಳ ಹಿಂದೆಯಷ್ಟೇ ಚಿತ್ರಕ್ಕೆ ಮುಹೂರ್ತವಾಗಿದ್ದು, ಹಿರಿಯ ನಟ ಶ್ರೀಧರ್‌ ಮತ್ತು ಕೆ.ಪಿ.ಶ್ರೀಧರ್‌ ತಾರಾಗಣದಲ್ಲಿ ಇರುವುದು ವಿಶೇಷ.

'ಭರತ್‌ ಎಂಬ ವ್ಯಕ್ತಿಯ ಜೀವನದಲ್ಲಿ 28 ವರ್ಷಗಳ ಕಾಲ ಏನೆಲ್ಲ ನಡೆದಿರುತ್ತವೆ. ಅವುಗಳನ್ನೇ ಚಿತ್ರಕಥೆಗೆ ಅಳವಡಿಸಿಕೊಂಡು ಸಿನಿಮಾ ಮಾಡುತ್ತಿದ್ದೇನೆ. ಈ ಚಿತ್ರದ ಮೂಲಕ ಸಂದೇಶ ಕೊಡುತ್ತಿದ್ದೇನೆ ಎನ್ನುವುದಕ್ಕಿಂತ ಒಂದೊಳ್ಳೆ ಫೀಲ್‌ ಕೊಡುವಂಥ ಸಿನಿಮಾ ಇದಾಗಿದೆ' ಎನ್ನುವುದು ನಿರ್ದೇಶಕರ ಮಾತು.

ಸಿನಿಮಾದ ಶೀರ್ಷಿಕೆಗೂ ಮತ್ತು ಕಥೆಗೂ ಸಂಬಂಧವಿದೆ. ಹಾಗಾಗಿ ಕಡಲ ತೀರದ ಭಾರ್ಗವ ಎಂದು ಹೆಸರಿಟ್ಟಿದ್ದಾರಂತೆ ನಿರ್ದೇಶಕರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌