ಆ್ಯಪ್ನಗರ

ಗರುಡನಾಗಿ ಬರಲಿರುವ 'ಸಿಪಾಯಿ' ಚಿತ್ರದ ಹೀರೋ ಸಿದ್ಧಾರ್ಥ್ ಮಹೇಶ್

ಯಾವುದೇ ಕಾಂಪ್ರಮೈಸ್‌ ಮಾಡಿಕೊಳ್ಳದೆ ಚಿತ್ರ ಮಾಡಿದ್ದೇವೆ. ಟೆಕ್ನಿಕಲಿ ಬಹಳ ರಿಚ್‌ ಆಗಿದೆ. ಆ್ಯಕ್ಷನ್‌ ಮತ್ತು ಫ್ಯಾಮಿಲಿ ಡ್ರಾಮಾ ಚಿತ್ರದಲ್ಲಿದೆ ಎನ್ನುತ್ತಾರೆ ಚಿತ್ರದ ನಾಯಕ ನಟ ಸಿದ್ಧಾರ್ಥ್ ಮಹೇಶ್.

Vijaya Karnataka Web 27 Sep 2019, 4:10 pm
ಸಿಪಾಯಿ ಚಿತ್ರದಲ್ಲಿ ತಮ್ಮ ನಟನೆಯಿಂದ ಗಮನ ಸೆಳೆದಿದ್ದ ನಟ ಸಿದ್ಧಾರ್ಥ ಮಹೇಶ್‌ ಈಗ ಗರುಡನಾಗಿ ಬರುತ್ತಿದ್ದಾರೆ. ಚಿತ್ರದಲ್ಲಿ ನಾಯಕಿಯರಾಗಿ ಆಶಿಕಾ ರಂಗನಾಥ್‌, ಐಂದ್ರಿತಾ ರೇ ನಟಿಸಿದ್ದಾರೆ. ಚಿತ್ರದ ಟ್ರೇಲರ್‌ ಇದೇ ತಿಂಗಳು 30ರಂದು ರಿಲೀಸ್‌ ಆಗಲಿದೆ.
Vijaya Karnataka Web siddharth-mahesh


ಈ ಚಿತ್ರದಲ್ಲಿಸಿದ್ಧಾಥ್‌ರ್‍ ಎರಡು ಟ್ರ್ಯಾಕ್‌ನಲ್ಲಿ ಸಾಗುವ ಹುಡುಗನ ಪಾತ್ರದಲ್ಲಿ ನಟಿಸಿದ್ದಾರೆ. ಪೊಲೀಸ್‌ ಆಗಬೇಕೆಂದು ಕನಸು ಕಾಣುವ ರೆಸ್ಟೋರೆಂಟ್‌ ಹುಡುಗನ ಕತೆ ಚಿತ್ರದಲ್ಲಿದೆ. 'ಗೋವಾದಲ್ಲಿ ರೆಸ್ಟೋರೆಂಟ್‌ ನಡೆಸುವ ಹುಡುಗನ ಪಾತ್ರ ನನ್ನದು. ಪೊಲೀಸ್‌ ಆಗಬೇಕೆಂದಿದ್ದವನ ಬದುಕಿನಲ್ಲಿ ಅನಿರೀಕ್ಷಿತ ಘಟನೆ ನಡೆದು ಬೇರೆ ಟ್ರ್ಯಾಕ್‌ ಹಿಡಿಯುತ್ತಾನೆ. ಚಿತ್ರದಲ್ಲಿ ಲವ್‌ ಸ್ಟೋರಿ ಜತೆ ರೌಡಿಸಂ, ಮಾಫಿಯಾ ಕತೆಯೂ ಚಿತ್ರದಲ್ಲಿದೆ. ಗರುಡಕ್ಕೆ ಬಂದ ಐಂದ್ರಿತಾ ರೇ
ಗರುಡ ಚಿತ್ರವನ್ನು ನವ ನಿರ್ದೇಶನ ಧನ್‌ಕುಮಾರ್‌ ನಿರ್ದೇಶನ ಮಾಡಿದ್ದಾರೆ. ಹಲವು ವರ್ಷಗಳಿಂದ ಸುಮಾರು 100ಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡುತ್ತಿದ್ದ ಧನ್‌ಕುಮಾರ್‌ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಿರ್ದೇಶಕರಾಗಿ ಎಂಟ್ರಿಕೊಡುತ್ತಿದ್ದಾರೆ. ಚಿತ್ರದಲ್ಲಿ ಕಾಮ್ನಾ ಜೇಠ್ಮಲಾನಿ, ಶ್ರೀನಗರ ಕಿಟ್ಟಿ, ಆದಿ ಲೋಕೇಶ್‌, ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ರಘು ದೀಕ್ಷಿತ್‌ ಕೂಡಾ ಮೊದಲ ಬಾರಿಗೆ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ. ಬ್ಲ್ಯಾಕ್‌ ಬೆಲ್ಟ್‌ ಸಿಪಾಯಿ


'ರಘು ದೀಕ್ಷಿತ್‌ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮೊದಲ ಬಾರಿಗೆ ಅವರು ಮಾಸ್‌ ಚಿತ್ರವೊಂದಕ್ಕೆ ಸಂಗೀತ ನೀಡಿರುವುದು. ಇದು ಚಿತ್ರದ ವಿಶೇಷ' ಎಂದಿದ್ದಾರೆ ಸಿದ್ಧಾರ್ಥ್. ಹಾಲಿವುಡ್‌ ಟೆಕ್ನಿಷಿಯನ್ಸ್‌ ಮತ್ತು ಬಾಹುಬಲಿ ಚಿತ್ರಕ್ಕೆ ಕೆಲಸ ಮಾಡಿದ ಟೆಕ್ನಿಷಿಯನ್ಸ್‌ ಈ ಚಿತ್ರದಲ್ಲೂ ಕೈಜೋಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌