ಆ್ಯಪ್ನಗರ

ಕಿರುತೆರೆ ಸಿರಿ ಪ್ರಹ್ಲಾದ್‌ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್‌ ಎಂಟ್ರಿ

ಸೀರಿಯಲ್‌ ಮೂಲಕ ಚಿರತಪರಿಚಿತರಾದ ನಟಿ ಸಿರಿ ಪ್ರಹ್ಲಾದ್‌ ಇದೀಗ 'ಒಂದು ಶಿಕಾರಿಯ ಕಥೆ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

Vijaya Karnataka 20 Apr 2019, 4:10 pm
ಸೀರಿಯಲ್‌ನಲ್ಲಿ ತನ್ನ ನಟನೆ, ನೋಟದಿಂದ ಎಲ್ಲರ ಮನಗೆದ್ದಿದ್ದ ಸಿರಿ ಇದೀಗ ಸಂಪೂರ್ಣವಾಗಿ ಕಿರುತೆರೆಯಿಂದ ಹಿರಿತೆರೆಗೆ ತಮ್ಮ ಪಯಣದ ದಿಕ್ಕನ್ನು ಬದಲಿಸಿದ್ದಾರೆ. ಸಚ್ಚಿನ್‌ ಶೆಟ್ಟಿ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ 'ಒಂದು ಶಿಕಾರಿಯ ಕಥೆ' ಸಿನಿಮಾದಲ್ಲಿ ಸಿರಿ ಪ್ರಹ್ಲಾದ್‌ ನಾಯಕ ನಟಿಯಾಗಿ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಡುತ್ತಿದ್ದಾರೆ.
Vijaya Karnataka Web siri


'ಇದೊಂದು ಕ್ರೈಂ ಥ್ರಿಲ್ಲರ್‌ ಕಥೆಯಾಧಾರಿತ ಸಿನಿಮಾ. ನಿರ್ದೇಶಕರು ಕಥೆಯನ್ನು ಹೇಳಿದಾಗ ನನಗೆ ಬಹಳ ಇಷ್ಟವಾಯಿತು. ಸಿನಿಮಾದ ಹೆಸರೇ ಕುತೂಹಲ ಕೆರಳಿಸುವಂತಿದೆ. ಇದು ಕಾಡಿನಲ್ಲಿ ನಡೆಯುವ ಶಿಕಾರಿಯೋ ಅಥವಾ ಮನುಷ್ಯನ ಬದುಕಿನಲ್ಲಿ ನಡೆಯುವ ಶಿಕಾರಿಯೋ ಎಂದು ನೀವು ಸಿನಿಮಾ ನೋಡಿಯೇ ತಿಳಿಯಬೇಕು. ಒಂದು ಅಪರಾಧ ನಡೆದಾಗ, ಅದರಿಂದ ಐದು ಜನರ ಬದುಕು ಹೇಗೆಲ್ಲಾ ತಿರುವುಗಳನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ ಎನ್ನುವುದನ್ನು ಸಿನಿಮಾದಲ್ಲಿ ನೋಡಬಹುದಾಗಿದೆ' ಎನ್ನುತ್ತಾರೆ ನಟಿ ಸಿರಿ ಪ್ರಹ್ಲಾದ್‌.

ಒಂದು ಶಿಕಾರಿಯ ಕಥೆ ಸಿನಿಮಾದಲ್ಲಿ ಪ್ರಮೋದ್‌ ಶೆಟ್ಟಿ, ಪ್ರಸಾದ್‌, ಕಿರುತೆರೆ ನಟ ಅಭಿಮನ್ಯು ಪ್ರಜ್ವಲ್‌, ರಾಮ ರಾಮ ರೇ ಖ್ಯಾತಿಯ ಎಂ.ಕೆ ಮಠ ಮುಂತಾದವರು ನಟಿಸಿದ್ದಾರೆ. 'ಮೊದಲ ಬಾರಿಗೆ ನಾಯಕಿಯಾಗಿ ಬೆಳ್ಳಿತೆರೆಯಲ್ಲಿ ಮಿಂಚಲು ರೆಡಿಯಾಗಿದ್ದೇನೆ. ಹಾಗಾಗಿ ನನಗೆ ಈ ಸಿನಿಮಾದ ಬಗ್ಗೆ ಹಲವು ಕುತೂಹಲ ಇದೆ. ಇದರ ಜತೆಗೆ ರಘು ಸಮರ್ಥ್‌ ನಿರ್ದೇಶನ ಮಾಡುತ್ತಿರುವ ಮಹಿಳಾ ಪ್ರಧಾನ ಕಥೆಯಾಧಾರಿತ 'ಲಾ' ಚಿತ್ರದಲ್ಲಿಯೂ ಎರಡನೇ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಈಗೀಗ ಉತ್ತಮ ಕಥೆ ಹಾಗೂ ಪಾತ್ರಗಳು ಹುಡುಕಿಕೊಂಡು ಬರುತ್ತಿದ್ದಾರೆ' ಎಂದಿದ್ದಾರೆ ಅವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌