ಆ್ಯಪ್ನಗರ

ತೆಲುಗಿನ 'ರಾವಣ ಲಂಕಾ'ದಲ್ಲಿ ಕನ್ನಡದ ನಿರ್ದೇಶಕ ಕಂ ನಟ ಸ್ಮೈಲ್‌ ಶ್ರೀನು

ಈಗಾಗಲೇ ಶ್ರೀನು ಕನ್ನಡದಲ್ಲಿ ತೂಫಾನ್‌, ಬಳ್ಳಾರಿ ದರ್ಬಾರ್‌, 18 ಟು 25 ಹೀಗೆ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ನಾಯಕರಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣ ಆಗುತ್ತಿರುವುದು ವಿಶೇಷ.

Vijaya Karnataka 11 May 2019, 9:48 am
ನಿರ್ದೇಶಕ ಸಂಪತ್‌ ಕುಮಾರ್‌ ಅವರ ತೆಲುಗಿನ 'ರಾವಣ ಲಂಕಾ' ಸಿನಿಮಾದಲ್ಲಿ ಕನ್ನಡದ ನಿರ್ದೇಶಕ ಕಂ ನಟ ಸ್ಮೈಲ್‌ ಶ್ರೀನು ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಇಬ್ಬರು ನಾಯಕರಾಗಿ ನಟಿಸುತ್ತಿದ್ದು, ಒಂದು ಪಾತ್ರವನ್ನು ಶ್ರೀನು ನಿರ್ವಹಿಸುತ್ತಿದ್ದಾರೆ.
Vijaya Karnataka Web smile-sreenu


ಈಗಾಗಲೇ ಶ್ರೀನು ಕನ್ನಡದಲ್ಲಿ ತೂಫಾನ್‌, ಬಳ್ಳಾರಿ ದರ್ಬಾರ್‌, 18 ಟು 25 ಹೀಗೆ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ನಾಯಕರಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣ ಆಗುತ್ತಿರುವುದು ವಿಶೇಷ.

'ಈ ಸಿನಿಮಾದಲ್ಲಿ ನನ್ನದು ಬ್ಯುಸಿನೆಸ್‌ಮ್ಯಾನ್‌ ಪಾತ್ರ. ಆ ಕ್ಯಾರೆಕ್ಟರ್‌ ಕೂಡ ತುಂಬಾ ಚೆನ್ನಾಗಿದೆ. ಹಾಗಾಗಿ ನಟಿಸಲು ಒಪ್ಪಿಕೊಂಡೆ. ನನಗೆ ನಟನೆ ಹೊಸದೇನೂ ಅಲ್ಲ. ಕೆಲ ಸಿನಿಮಾಗಳಲಿ ನಟಿಸಿದ್ದೇನೆ. ಅಲ್ಲದೇ ಕಿರುಚಿತ್ರಗಳಲ್ಲೂ ಕಾಣಿಸಿಕೊಂಡಿದ್ದೇನೆ. ಸಿನಿಮಾಟೋಗ್ರಫಿ ಮತ್ತು ಸಂಕಲನ ವಿಭಾಗದಲ್ಲೂ ಕೆಲಸ ಮಾಡಿರುವ ಅನುಭವ ಕೂಡ ನನಗಿದೆ' ಎನ್ನುತ್ತಾರೆ ಶ್ರೀನು.

ನಟನೆಯ ಜತೆಗೆ ಕನ್ನಡದಲ್ಲಿ ಇವರ ಮತ್ತೊಂದು ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ. ಈಗಾಗಲೇ ಹೊಸ ಸಿನಿಮಾದ ಸ್ಕ್ರಿಪ್ಟ್‌ ವರ್ಕ್‌ ಮುಗಿಸಿದ್ದು, ಕಲಾವಿದರ ಆಯ್ಕೆಯಲ್ಲಿ ತೊಡಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌