ಈಗಾಗಲೇ ಹಲವು ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಕನ್ನಡದ ನಿರ್ದೇಶಕ ಸ್ಮೈಲ್ ಶ್ರೀನು ಈಗ ನಾಯಕರಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಟಾಲಿವುಡ್ನಲ್ಲಿ ನಿರ್ಮಾಣ ಆಗುತ್ತಿರುವ ರಾವಣ ಲಂಕೆ ಚಿತ್ರದಲ್ಲಿ ಇವರು ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.
ಬಳ್ಳಾರಿ ದರ್ಬಾರ್ ಸೇರಿದಂತೆ ಕನ್ನಡದಲ್ಲಿ ಹಲವು ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಸ್ಮೈಲ್ ಶ್ರೀನು ಅವರನ್ನು ಟಾಲಿವುಡ್ ಕೈ ಬೀಸಿ ಕರೆದಿದೆ. ಸಂದೀಪ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ರಾವಣ ಲಂಕೆ' ಚಿತ್ರದಲ್ಲಿ ಇವರು ನಾಯಕರಾಗಿ ನಟಿಸುತ್ತಿದ್ದು, ಸಿನಿಮಾದ ಫಸ್ಟ್ಲುಕ್ ಟಾಲಿವುಡ್ನಲ್ಲಿ ಹವಾ ಕ್ರಿಯೇಟ್ ಮಾಡಿದೆ.
'ನಾನು ನಿರ್ದೇಶಕನಾಗಬೇಕೆಂಬ ಕನಸ್ಹೊತ್ತು ಸಿನಿಮಾ ರಂಗಕ್ಕೆ ಬಂದವನು. ಈಗಾಗಲೇ ನಾಲ್ಕು ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿರುವೆ. ಈ ಸಂದರ್ಭದಲ್ಲಿ ಸಂದೀಪ್ ಅವರು ತಮ್ಮ ಸಿನಿಮಾದಲ್ಲಿ ನಟಿಸುವಂತೆ ಕೇಳಿದರು. ಅವರ ಪ್ರೀತಿ ಒತ್ತಾಸೆಗೆ ಒಪ್ಪಿಕೊಂಡೆ. ಕನ್ನಡದಲ್ಲಿ ಒಂದು ತೆಲುಗಿನಲ್ಲಿ ಎರಡು ಸಿನಿಮಾಗಳಲ್ಲಿ ಈಗಾಗಲೇ ನಟಿಸಿದ್ದೇನೆ. ನಟನೆ ಕೂಡ ಖುಷಿ ಕೊಡುತ್ತಿದೆ' ಎನ್ನುವುದು ಶ್ರೀನು ಮಾತು.
ರಾವಣ ಲಂಕೆ ಸಿನಿಮಾದಲ್ಲಿ ಇವರು ಬಡ ಹುಡುಗನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಬಡತನದಲ್ಲಿ ಬೆಳೆದ ಹುಡುಗನಿಗೆ ಶ್ರೀಮಂತನಾಗುವ ಬಯಕೆ. ಕೋಟಿ ಕೋಟಿ ಸಂಪಾದನೆ ಮಾಡಿ, ಜೀವನವನ್ನು ಎಂಜಾಯ್ ಮಾಡಬೇಕೆಂದು ಕನಸು ಕಾಣುತ್ತಾನೆ. ಅದಕ್ಕಾಗಿ ಅಡ್ಡದಾರಿಯನ್ನೂ ಹಿಡಿಯುತ್ತಾನೆ. ಆಗ ಅವನಿಗೆ ಜೀವನದ ನಿಜವಾದ ಪಾಠ ಗೊತ್ತಾಗುತ್ತದೆ. ಅಲ್ಲಿಂದ ಆತನ ಲೈಫ್ ಎತ್ತ ಸಾಗುತ್ತದೆ ಎನ್ನುವುದೇ ಸಿನಿಮಾವಂತೆ.
ಟಾಲಿವುಡ್ನಲ್ಲಿ ಮಾತ್ರವಲ್ಲ, ಕನ್ನಡದ 'ಅದ್ಭುತ' ಚಿತ್ರದಲ್ಲೂ ಇವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅಲ್ಲದೇ, 18 ಟು 25 ಮತ್ತು ಮೃದಂಗ ಎಂಬ ಎರಡು ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ.
'ಹದಿಹರೆಯದ ವಯಸ್ಸಿನವರ ಕಥೆಯನ್ನಿಟ್ಟುಕೊಂಡು 18 ಟು 25 ಚಿತ್ರ ಮಾಡಿದ್ದೇನೆ. ಮೃದಂಗ ಚಿತ್ರವು ಕಾದಂಬರಿಯನ್ನು ಆಧರಿಸಿದ್ದು. ಎರಡೂ ವಿಭಿನ್ನ ಕಥಾನಕ ಹೊಂದಿರುವ ಚಿತ್ರಗಳು. ಬೇರೆ ಬೇರೆ ಜಾನರ್ನ ಚಿತ್ರವಾಗಿದ್ದು, ಭಿನ್ನ ರುಚಿಯ ಪ್ರೇಕ್ಷಕರನ್ನು ಇವುಗಳು ಸೆಳೆಯಲಿವೆ' ಅಂತಾರೆ ಶ್ರೀನು.
'ನಾನು ಹುಟ್ಟಿ ಬೆಳೆದದ್ದು ಬಳ್ಳಾರಿಯಲ್ಲಿ. ಹಾಗಾಗಿ ತೆಲುಗು ಇಂಡಸ್ಟ್ರಿ ಜತೆಗೆ ಬಾಂಧವ್ಯ ಕೂಡ ಇದೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲೂ ಸಿನಿಮಾ ಮಾಡಬೇಕು ಎಂಬ ಆಸೆಯಿದೆ. ಮುಂದಿನ ದಿನಗಳಲ್ಲಿ ಅದನ್ನೂ ಮಾಡುತ್ತೇನೆ' ಎನ್ನುವುದು ನಿರ್ದೇಶಕರ ಮಾತು.
ಬಳ್ಳಾರಿ ದರ್ಬಾರ್ ಸೇರಿದಂತೆ ಕನ್ನಡದಲ್ಲಿ ಹಲವು ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಸ್ಮೈಲ್ ಶ್ರೀನು ಅವರನ್ನು ಟಾಲಿವುಡ್ ಕೈ ಬೀಸಿ ಕರೆದಿದೆ. ಸಂದೀಪ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ರಾವಣ ಲಂಕೆ' ಚಿತ್ರದಲ್ಲಿ ಇವರು ನಾಯಕರಾಗಿ ನಟಿಸುತ್ತಿದ್ದು, ಸಿನಿಮಾದ ಫಸ್ಟ್ಲುಕ್ ಟಾಲಿವುಡ್ನಲ್ಲಿ ಹವಾ ಕ್ರಿಯೇಟ್ ಮಾಡಿದೆ.
'ನಾನು ನಿರ್ದೇಶಕನಾಗಬೇಕೆಂಬ ಕನಸ್ಹೊತ್ತು ಸಿನಿಮಾ ರಂಗಕ್ಕೆ ಬಂದವನು. ಈಗಾಗಲೇ ನಾಲ್ಕು ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿರುವೆ. ಈ ಸಂದರ್ಭದಲ್ಲಿ ಸಂದೀಪ್ ಅವರು ತಮ್ಮ ಸಿನಿಮಾದಲ್ಲಿ ನಟಿಸುವಂತೆ ಕೇಳಿದರು. ಅವರ ಪ್ರೀತಿ ಒತ್ತಾಸೆಗೆ ಒಪ್ಪಿಕೊಂಡೆ. ಕನ್ನಡದಲ್ಲಿ ಒಂದು ತೆಲುಗಿನಲ್ಲಿ ಎರಡು ಸಿನಿಮಾಗಳಲ್ಲಿ ಈಗಾಗಲೇ ನಟಿಸಿದ್ದೇನೆ. ನಟನೆ ಕೂಡ ಖುಷಿ ಕೊಡುತ್ತಿದೆ' ಎನ್ನುವುದು ಶ್ರೀನು ಮಾತು.
ರಾವಣ ಲಂಕೆ ಸಿನಿಮಾದಲ್ಲಿ ಇವರು ಬಡ ಹುಡುಗನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಬಡತನದಲ್ಲಿ ಬೆಳೆದ ಹುಡುಗನಿಗೆ ಶ್ರೀಮಂತನಾಗುವ ಬಯಕೆ. ಕೋಟಿ ಕೋಟಿ ಸಂಪಾದನೆ ಮಾಡಿ, ಜೀವನವನ್ನು ಎಂಜಾಯ್ ಮಾಡಬೇಕೆಂದು ಕನಸು ಕಾಣುತ್ತಾನೆ. ಅದಕ್ಕಾಗಿ ಅಡ್ಡದಾರಿಯನ್ನೂ ಹಿಡಿಯುತ್ತಾನೆ. ಆಗ ಅವನಿಗೆ ಜೀವನದ ನಿಜವಾದ ಪಾಠ ಗೊತ್ತಾಗುತ್ತದೆ. ಅಲ್ಲಿಂದ ಆತನ ಲೈಫ್ ಎತ್ತ ಸಾಗುತ್ತದೆ ಎನ್ನುವುದೇ ಸಿನಿಮಾವಂತೆ.
ಟಾಲಿವುಡ್ನಲ್ಲಿ ಮಾತ್ರವಲ್ಲ, ಕನ್ನಡದ 'ಅದ್ಭುತ' ಚಿತ್ರದಲ್ಲೂ ಇವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅಲ್ಲದೇ, 18 ಟು 25 ಮತ್ತು ಮೃದಂಗ ಎಂಬ ಎರಡು ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ.
'ಹದಿಹರೆಯದ ವಯಸ್ಸಿನವರ ಕಥೆಯನ್ನಿಟ್ಟುಕೊಂಡು 18 ಟು 25 ಚಿತ್ರ ಮಾಡಿದ್ದೇನೆ. ಮೃದಂಗ ಚಿತ್ರವು ಕಾದಂಬರಿಯನ್ನು ಆಧರಿಸಿದ್ದು. ಎರಡೂ ವಿಭಿನ್ನ ಕಥಾನಕ ಹೊಂದಿರುವ ಚಿತ್ರಗಳು. ಬೇರೆ ಬೇರೆ ಜಾನರ್ನ ಚಿತ್ರವಾಗಿದ್ದು, ಭಿನ್ನ ರುಚಿಯ ಪ್ರೇಕ್ಷಕರನ್ನು ಇವುಗಳು ಸೆಳೆಯಲಿವೆ' ಅಂತಾರೆ ಶ್ರೀನು.
'ನಾನು ಹುಟ್ಟಿ ಬೆಳೆದದ್ದು ಬಳ್ಳಾರಿಯಲ್ಲಿ. ಹಾಗಾಗಿ ತೆಲುಗು ಇಂಡಸ್ಟ್ರಿ ಜತೆಗೆ ಬಾಂಧವ್ಯ ಕೂಡ ಇದೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲೂ ಸಿನಿಮಾ ಮಾಡಬೇಕು ಎಂಬ ಆಸೆಯಿದೆ. ಮುಂದಿನ ದಿನಗಳಲ್ಲಿ ಅದನ್ನೂ ಮಾಡುತ್ತೇನೆ' ಎನ್ನುವುದು ನಿರ್ದೇಶಕರ ಮಾತು.