ಆ್ಯಪ್ನಗರ

ಹಾಡಾದ ಪ್ರಶ್ನೆ ಪತ್ರಿಕೆ ಲೀಕ್‌

ಘಟನೆಗೆ ತಕ್ಕಂತೆ ಹಾಡು ಬರೆಯುವುದರಲ್ಲಿ ನಿರ್ದೇಶಕ ಯೋಗರಾಜ್‌ ಭಟ್‌ ಫೇಮಸ್‌. ಈ ಹಿಂದೆ ಇವರ ನಿರ್ದೇಶನದಲ್ಲಿ ಮೂಡಿ ಬಂದ ವಾಸ್ತು ಪ್ರಕಾರ ಸಿನಿಮಾದ ಟೈಮ್‌ನಲ್ಲಿ ಚುನಾವಣೆ ಕೂಡ ಬಂದಿತ್ತು.

Vijaya Karnataka Web 5 Apr 2016, 4:40 am
ಘಟನೆಗೆ ತಕ್ಕಂತೆ ಹಾಡು ಬರೆಯುವುದರಲ್ಲಿ ನಿರ್ದೇಶಕ ಯೋಗರಾಜ್‌ ಭಟ್‌ ಫೇಮಸ್‌. ಈ ಹಿಂದೆ ಇವರ ನಿರ್ದೇಶನದಲ್ಲಿ ಮೂಡಿ ಬಂದ ವಾಸ್ತು ಪ್ರಕಾರ ಸಿನಿಮಾದ ಟೈಮ್‌ನಲ್ಲಿ ಚುನಾವಣೆ ಕೂಡ ಬಂದಿತ್ತು. ಎಲೆಕ್ಷನ್‌ ಮತ್ತು ವಾಸ್ತು ಪ್ರಕಾರ ಸಿನಿಮಾದ ಕತೆಯನ್ನು ಸೇರಿಸಿ ಹಾಡು ಮಾಡಿದ್ದರು ಭಟ್ಟರು. ಹರಿಕೃಷ್ಣ ಧ್ವನಿಯಲ್ಲಿ ಕೇಳಿ ಬಂದಿದ್ದ ಆ ಹಾಡು ಹಿಟ್‌ ಆಗಿತ್ತು.
Vijaya Karnataka Web song question paper leak
ಹಾಡಾದ ಪ್ರಶ್ನೆ ಪತ್ರಿಕೆ ಲೀಕ್‌


ಈಗ ಮತ್ತೊಂದು ಘಟನೆಯನ್ನು ಹಾಡಾಗಿಸಿದ್ದಾರೆ ಯೋಗರಾಜ್‌ ಭಟ್‌. ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಯನ್ನು ಗಂಭೀರವಾಗಿ ತಗೆದುಕೊಂಡಿರುವ ಇವರು, ‘ಒಮ್ಮೆ ಲೀಕ್‌ ಆದದ್ದು ಮತ್ತೆ ಲೀಕ್‌ ಆಗುವುದೇ ಲೋಕ ನಿಯಮ ಆಗಿರಲು. ಮೂಕ ವಿದ್ಯಾರ್ಥಿ ಮೂರ್ನಾಲ್ಕು ಸರ್ತಿ ರಸಾಯನಶಾಸ್ತ್ರ ಪರೀಕ್ಷೆ ಬರೀಬೇಕಾ ರತ್ನಕರ’ ಎಂದು ಗೇಲಿ ಮಾಡಿದ್ದಾರೆ. ಸೋರಿಕೆಯನ ಹುನ್ನಾರವನ್ನು ಖಂಡಿಸಿದ್ದಾರೆ.

ಭಟ್‌ರ ಸಾಹಿತ್ಯದಲ್ಲಿ ಹಾಡು ಮೂಡಿ ಬಂದಿದ್ದು, ದುನಿಯಾ ವಿಜಯ್‌, ಚೇತನ್‌ ಸೋಸ್ಕಾ ಮತ್ತು ಯೋಗರಾಜ್‌ ಭಟ್‌ ಹಾಡಿದ್ದಾರೆ. ಈಗ ಈ ಹಾಡು ವೈರಲ್‌ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌