ಆ್ಯಪ್ನಗರ

ಟ್ರೋಲ್ ಆದ ಸೌಂದರ್ಯ ರಜನಿಕಾಂತ್ ಹನಿಮೂನ್ ಚಿತ್ರಗಳು

ಹನಿಮೂನ್ ಎಂಬುದು ನಿಮ್ಮ ವೈಯಕ್ತಿಕ ಸಂಗತಿ ಆಗಿರಬಹುದು, ಆದರೆ ಇಂತಹ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಈ ಸಮಯದಲ್ಲಿ ಫೋಟೋಗಳನ್ನು ಹಾಕಿರುವುದು ತುಂಬಾ ದೊಡ್ಡ ತಪ್ಪು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vijaya Karnataka Web 18 Feb 2019, 12:06 pm
ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯ ರಜನಿಕಾಂತ್ ಎರಡನೇ ಮದುವೆ ಅದ್ದೂರಿಯಾಗಿ ನಡೆದದ್ದು ಗೊತ್ತೇ ಇದೆ. ಉದ್ಯಮಿ ಕಮ್ ನಟ ವಿಶಾಖನ್ ವನಂಗಮುಡಿ ಅವರನ್ನು ವರಿಸಿದ್ದು ಸದ್ಯಕ್ಕೆ ಈ ಜೋಡಿ ಐಸ್‍ಲ್ಯಾಂಡ್‌ನಲ್ಲಿ ಮಧುಚಂದ್ರ ಸವಿಯುತ್ತಿದೆ.
Vijaya Karnataka Web soundarya-rajinikanth


ಫೆಬ್ರವರಿ 15ರಂದು ತಮ್ಮ ಹನಿಮೂನ್‌ಗೆ ಸಂಬಂಧಿಸಿದ ಕೆಲವು ಚಿತ್ರಗಳನ್ನು ಸೌಂದರ್ಯ ರಜನಿಕಾಂತ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಅವರ ಪೋಸ್ಟ್‌ಗೆ ಮೆಚ್ಚುಗೆಗಿಂತ ಟೀಕಾಸ್ತ್ರಗಳೇ ಹೆಚ್ಚಾಗಿ ತೂರಿ ಬಂದಿವೆ. ಇದಕ್ಕೆ ಕಾರಣವಾಗಿರುವುದು ಪುಲ್ವಾಮ ಘಟನೆ.

ಸೌಂದರ್ಯ ಪೋಸ್ಟ್ ಬಗ್ಗೆ ತೀವ್ರ ಟೀಕೆ ಮಾತುಗಳು ಕೇಳಿಬಂದಿವೆ. ಪ್ರಸ್ತುತ ದೇಶದಲ್ಲಿ ಅತ್ಯಂತ ವಿಷಾದಕರ ಪರಿಸ್ಥಿತಿ ನೆಲೆಸಿದೆ. ಉಗ್ರರ ಸ್ಫೋಟದಲ್ಲಿ 40 ಮಂದಿ ಭಾರತೀಯರು ಹುತಾತ್ಮರಾಗಿದ್ದಾರೆ. ದೇಶದಾದ್ಯಂತ ತೀವ್ರ ಆಕ್ರೋಶ ಮಡುಗಟ್ಟಿದೆ. ಸೈನಿಕರ ಕುಟುಂಬಗಳಿಗೆ ಬೆಂಬಲವಾಗಿ ನಿಲ್ಲಲು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ನಡೆಯುತ್ತಿದೆ. ಎಲ್ಲರೂ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ ಪೋಸ್ಟ್ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸೌಂದರ್ಯ ಮಾತ್ರ ಹನಿಮೂನ್ ಚಿತ್ರಗಳನ್ನು ಹಾಕಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.

ಸೌಂದರ್ಯ ವರ್ತನೆ ಬಗ್ಗೆ ನೆಟ್ಟಿಗರು ಗರಂ ಆಗಿದ್ದಾರೆ. ನಿಮಗೆ ಬುದ್ದಿ ಇದೆಯಾ ಮೇಡಂ ಎಂದು ತಮ್ಮ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ವಿಷಾದಕರ ಪರಿಸ್ಥಿತಿಯಲ್ಲಿ ಇಂತಹ ಸಿಲ್ಲಿ ಪೋಸ್ಟ್ ಏನು, ನಿಮಗೆ ಸಮಾಜದ ಬಗ್ಗೆ, ದೇಶದ ಬಗ್ಗೆ ಕನಿಷ್ಠ ಜವಾಬ್ದಾರಿ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ಸದ್ಯಕ್ಕೆ ಹನಿಮೂನ್ ಎಂಜಾಯ್ ಮಾಡಿ ಸ್ವಲ್ಪ ದಿನ ಫೋಟೋಗಳನ್ನು ಪೋಸ್ಟ್ ಮಾಡಬೇಡಿ ಮೇಡಂ ಎಂಬ ಸಲಹೆಯನ್ನೂ ನೀಡಿದ್ದಾರೆ.

ಹನಿಮೂನ್ ಎಂಬುದು ನಿಮ್ಮ ವೈಯಕ್ತಿಕ ಸಂಗತಿ ಆಗಿರಬಹುದು, ಆದರೆ ಇಂತಹ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಈ ಸಮಯದಲ್ಲಿ ಫೋಟೋಗಳನ್ನು ಹಾಕಿರುವುದು ತುಂಬಾ ದೊಡ್ಡ ತಪ್ಪು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಎಚ್ಚೆತ್ತುಕೊಂಡ ಸೌಂದರ್ಯ ರಜನಿಕಾಂತ್ ತಮ್ಮ ಹನಿಮೂನ್ ಫೋಟೋಗಳಿಗೆ ಬದಲಾಗಿ ಹುತಾತ್ಮರಾದ ಸೈನಿಕರ ಫೋಟೋ ಹಾಕಿ ಸಂತಾಪ ಸೂಚಿಸಿದ್ದಾರೆ.

ಸೌಂದರ್ಯ ರಜನಿಕಾಂತ್ ಅವರಂತೆಯೇ ವಿಶಾಖನ್‍ಗೂ ಇದು ಎರಡನೇ ಮದುವೆ. ಮ್ಯಾಗಜಿನ್ ಒಂದರ ಸಂಪಾದಕಿ ಕನಿಖಾ ಕುಮಾರನ್ ಅವರನ್ನು ಮಿಶಾಖನ್ ಮದುವೆಯಾಗಿ ಬಳಿಕ ವಿಚ್ಛೇದನ ಪಡೆದಿದ್ದಾರೆ. ಇನ್ನು ಸೌಂದರ್ಯ ಸಹ ಅಷ್ಟೇ ಉದ್ಯಮಿ ಅಶ್ವಿನ್‍ರನ್ನು ವರಿಸಿದ್ದರು. ಬಳಿಕ ಭಿನ್ನಾಭಿಪ್ರಾಯಗಳ ಕಾರಣ 2017ರಲ್ಲಿ ಇವರಿಬ್ಬರೂ ದೂರವಾದರು. ಇವರಿಗೆ ಮೂರು ವರ್ಷದ ವೇದ್ ಕೃಷ್ಣ ಹೆಸರಿನ ಮಗ ಇದ್ದಾನೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌