ಆ್ಯಪ್ನಗರ

ಮೋಡ ಕವಿದ ಶ್ರೀನಗರ ಕಿಟ್ಟಿ ಚಿತ್ರ

ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ ನಟರಾಗಿದ್ದ ಕಿಟ್ಟಿಯವರ ಯಾವುದೇ ಚಿತ್ರಗಳು ಇತ್ತೀಚೆಗೆ ಸೆಟ್ಟೇರುತ್ತಿಲ್ಲ.

Vijaya Karnataka 25 Jan 2018, 11:33 am
ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ನಟರಾಗಿದ್ದ ಕಿಟ್ಟಿಯವರ ಯಾವುದೇ ಚಿತ್ರಗಳು ಇತ್ತೀಚೆಗೆ ಸೆಟ್ಟೇರುತ್ತಿಲ್ಲ. ಮೋಡ ಕವಿದ ವಾತಾವರಣ ಎಂಬ ಚಿತ್ರ ಆರಂಭಿಸುವ ಹಂತಕ್ಕೆ ಬಂದು ನಿಂತು ಹೋಗಿದೆ.
Vijaya Karnataka Web srinagara-kitty


ಚೆಲ್ಲಾಟ, ಪೊರ್ಕಿ , ಸಾಗರ್ ಮುಂತಾದ ಸಿನಿಮಾಗಳಿಗೆ ನಿರ್ದೇಶಕ ಎಂ ಡಿ ಶ್ರೀಧರ್ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಪ್ರತಿಭಾನ್ವಿತ ಯುವಕ ಗೌತಮ ಆ್ಯಕ್ಷನ್ ಕಟ್ ಹೇಳಬೇಕಿದ್ದ ಚಿತ್ರ ನಿಂತು ಹೋಗಿದೆ. ಒಂದೊಳ್ಳೆ ಕತೆಯೊಂದಿಗೆ ಸ್ಯಾಂಡಲ್ವುಡ್ನಲ್ಲಿ ನೆಲಯೂರಲು ಕತೆ ಚಿತ್ರಕತೆ ಸಂಗೀತ ಸಾಹಿತ್ಯ ಎಲ್ಲವನ್ನು ಚಿತ್ರತಂಡ ಮುಗಿಸಿಕೊಂಡಿತ್ತು. ನಟ ಶ್ರೀನಗರ ಕಿಟ್ಟಿ ಸಹ ಈ ಚಿತ್ರದ ಪಾತ್ರಕ್ಕಾಗಿ ಉದ್ದದ ಗಡ್ಡ ಬಿಟ್ಟು ರೆಡಿಯಾಗಿದ್ದರು. ಆದರೆ ಆ ಚಿತ್ರ ಯಾವುದೇ ಕಾರಣಕ್ಕೂ ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ.

ಇದಕ್ಕೆ ಕಾರಣ ಹುಡುಕುತ್ತಾ ಹೊರಟರೆ ಸಿಕ್ಕ ಮಾಹಿತಿ ಪ್ರಕಾರ ನಿರ್ಮಾಪಕರು ಚಿತ್ರದಿಂದ ಹಿಂದೆ ಸರಿದಿದ್ದಾರಂತೆ. ಅದಕ್ಕೆ, ಕಾರಣ ಕಿಟ್ಟಿಯವರ ಮೂರು ಸಿನಿಮಾಗಳ ಸತತ ಸೋಲಂತೆ. ಕಳೆದ ವರ್ಷ ಬಿಡುಗಡೆಯಾದ ಸಿಲಿಕಾನ್ ಸಿಟಿ ಚಿತ್ರದ ಬಗ್ಗೆ ಒಳ್ಳೆ ಅಭಿಪ್ರಾಯ ಬಂದರೂ, ಕಮರ್ಷಿಯಲ್ ಆಗಿ ಯಾವುದೂ ಕಲೆಕ್ಷನ್ ಮಾಡಲಿಲ್ಲ. ಇದರ ಹಿಂದೆ ಪಾರು ವೈಫ್ ಆಫ್ ದೇವದಾಸ್, ಸವಾರಿ-2 ಚಿತ್ರಗಳು ಸೋಲು ಕಂಡಿದ್ದವು. ಇವುಗಳ ಸೋಲು ಮೋಡ ಕವಿದ ವಾತಾವರಣ ಚಿತ್ರದ ಮೇಲೆ ಮೋಡ ಕವಿಯುವಂತೆ ಮಾಡಿದೆ. ಒಟ್ಟಿನಲ್ಲಿ ನಾಯಕರೊಬ್ಬರ ಎರಡು ಚಿತ್ರಗಳ ಸೋಲು ಒಂದು ಚಿತ್ರವನ್ನೆ ನಿಲ್ಲಿಸುವಂತೆ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌