ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯಲ್ಲಿರುವ ನಾಗಣ್ಣ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮುನಿರತ್ನ ನಿರ್ಮಾಣದ ಅದ್ದೂರಿ ಸಿನಿಮಾ ’ಕುರುಕ್ಷೇತ್ರ’ದಲ್ಲಿ ಶ್ರೀಕೃಷ್ಣನಾಗಿ ರವಿಚಂದ್ರನ್ ಕಾಣಿಸಲಿದ್ದಾರೆ. ಈ ಪಾತ್ರಕ್ಕೆ ರವಿಚಂದ್ರನ್ ಧ್ವನಿಗೆ ಬದಲಾಗಿ ನಟ ಶ್ರೀನಿವಾಸ ಪ್ರಭು ಡಬ್ಬಿಂಗ್ ಹೇಳಲಿದ್ದಾರೆ ಎನ್ನುತ್ತಿವೆ ಮೂಲಗಳು.
1991ರಲ್ಲಿ ’ರಾಮಾಚಾರಿ’ ಚಿತ್ರದಲ್ಲಿ ಕ್ರೇಜಿಸ್ಟಾರ್ಗೆ ಶ್ರೀನಿವಾಸ ಪ್ರಭು ಡಬ್ಬಿಂಗ್ ಹೇಳಿದ್ದರು. ಅವರಿಬ್ಬರ ಧ್ವನಿ ಅಷ್ಟು ಪರ್ಫೆಕ್ಟ್ ಆಗಿ ಮ್ಯಾಚ್ ಆಗಿತ್ತು. ರವಿಚಂದ್ರನ್ ಪಾತ್ರಕ್ಕೆ ಶ್ರೀನಿವಾಸ ಪ್ರಭು ಡಬ್ಬಿಂಗ್ ಹೇಳಿದ್ದಾರೆ ಎಂದರೆ ಇಂದಿನ ಪೀಳಿಗೆಯವರು ನಂಬುವುದು ಕಷ್ಟ.
ಇದೀಗ ಮತ್ತೆ ರವಿಚಂದ್ರನ್ ಕೃಷ್ಣನ ಪಾತ್ರಕ್ಕೆ ಶ್ರೀನಿವಾಸ ಪ್ರಭು ಡಬ್ಬಿಂಗ್ ಹೇಳಲಿದ್ದಾರೆ. ಈ ಚಿತ್ರಕ್ಕಾಗಿ ರವಿಚಂದ್ರನ್ ಸಾಕಷ್ಟು ಬದಲಾವಣೆಗಳನ್ನೂ ಮಾಡಿಕೊಂಡಿರುವುದು ಗೊತ್ತೇ ಇದೆ. ಇದೇ ಮೊದಲ ಸಲ ತಮ್ಮ ಟ್ರೇಡ್ಮಾರ್ಕ್ ಆಗಿದ್ದ ಮೀಸೆಯನ್ನು ಬೋಳಿಸಿದ್ದಾರೆ.
ಈಗಾಗಲೆ ಚಿತ್ರೀಕರಣ ಮುಗಿದಿದ್ದು ಕಲಾವಿದರೆಲ್ಲಾರೂ ಡಬ್ಬಿಂಗ್ನಲ್ಲಿ ಬಿಝಿಯಾಗಿದ್ದಾರೆ. ಎರಡು ದಿನಗಳ ಹಿಂದಷ್ಟೇ ದರ್ಶನ್ ತಮ್ಮ ಭಾಗದ ಡಬ್ಬಿಂಗ್ ಮುಗಿಸಿದ್ದಾರೆ. ರವಿಚಂದ್ರನ್ ಹೊರತುಪಡಿಸಿ ಉಳಿದೆಲ್ಲಾ ಕಲಾವಿದರು ತಮ್ಮ ಡಬ್ಬಿಂಗ್ ಕೆಲಸ ಮುಗಿಸಿದ್ದಾರೆ.
ಚಿತ್ರದಲ್ಲಿ ಆಡುಭಾಷೆಯ ಡೈಲಾಗ್ಗಳಲ್ಲದೆ, ನಾಟಕದ ಶೈಲಿಯ ಡೈಲಾಗ್ಗಳಿದ್ದು ರವಿಚಂದ್ರನ್ ಪಾತ್ರವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದ್ದು, ಡಬ್ಬಿಂಗ್ಗಾಗಿ ಶ್ರೀನಿವಾಸ ಪ್ರಭುರನ್ನು ಕರೆತರಲು ಸಿದ್ಧತೆ ನಡೆಸಿದೆ.
ನಟ ಶ್ರೀನಿವಾಸ ಪ್ರಭು ರಂಗಭೂಮಿ ಹಿನ್ನೆಯವರಾಗಿದ್ದು, ನುರಿತ ಕಲಾವಿದರೂ ಹೌದು. ಅವರ ಧ್ವನಿ ಈ ಪಾತ್ರಕ್ಕೆ ಸೂಕ್ತ ಎಂದು ಚಿತ್ರತಂಡ ಭಾವಿಸಿದಂತಿದೆ. ಪೌರಾಣಿಕ ಪಾತ್ರಕ್ಕೆ ಡಬ್ಬಿಂಗ್ ಹೇಳುವುದು ಅವರಿಗೆ ಕಷ್ಟವಲ್ಲ. ಈ ಹಿಂದೆ ರವಿಚಂದ್ರನ್ ಪಾತ್ರಕ್ಕೆ ಡಬ್ಬಿಂಗ್ ಹೇಳಿರುವ ಕಾರಣ ಅವರ ಧ್ವನಿ ಸಹ ಪರ್ಫೆಕ್ಟ್ ಮ್ಯಾಚ್ ಆಗುತ್ತದೆ ಎಂದು ಭಾವಿಸಲಾಗಿದೆ.
ಇದೀಗ ನಿರ್ಮಾಣ ನಂತರದ ಕೆಲಸಗಳಲ್ಲಿ ’ಕುರುಕ್ಷೇತ್ರ’ ಬಿಝಿಯಾಗಿದ್ದು, ಶೀಘ್ರದಲ್ಲೇ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ವಿ ಹರಿಕೃಷ್ಣ ಸಂಗೀತ ನಿರ್ದೇಶನ ಚಿತ್ರಕ್ಕಿದೆ.
1991ರಲ್ಲಿ ’ರಾಮಾಚಾರಿ’ ಚಿತ್ರದಲ್ಲಿ ಕ್ರೇಜಿಸ್ಟಾರ್ಗೆ ಶ್ರೀನಿವಾಸ ಪ್ರಭು ಡಬ್ಬಿಂಗ್ ಹೇಳಿದ್ದರು. ಅವರಿಬ್ಬರ ಧ್ವನಿ ಅಷ್ಟು ಪರ್ಫೆಕ್ಟ್ ಆಗಿ ಮ್ಯಾಚ್ ಆಗಿತ್ತು. ರವಿಚಂದ್ರನ್ ಪಾತ್ರಕ್ಕೆ ಶ್ರೀನಿವಾಸ ಪ್ರಭು ಡಬ್ಬಿಂಗ್ ಹೇಳಿದ್ದಾರೆ ಎಂದರೆ ಇಂದಿನ ಪೀಳಿಗೆಯವರು ನಂಬುವುದು ಕಷ್ಟ.
ಇದೀಗ ಮತ್ತೆ ರವಿಚಂದ್ರನ್ ಕೃಷ್ಣನ ಪಾತ್ರಕ್ಕೆ ಶ್ರೀನಿವಾಸ ಪ್ರಭು ಡಬ್ಬಿಂಗ್ ಹೇಳಲಿದ್ದಾರೆ. ಈ ಚಿತ್ರಕ್ಕಾಗಿ ರವಿಚಂದ್ರನ್ ಸಾಕಷ್ಟು ಬದಲಾವಣೆಗಳನ್ನೂ ಮಾಡಿಕೊಂಡಿರುವುದು ಗೊತ್ತೇ ಇದೆ. ಇದೇ ಮೊದಲ ಸಲ ತಮ್ಮ ಟ್ರೇಡ್ಮಾರ್ಕ್ ಆಗಿದ್ದ ಮೀಸೆಯನ್ನು ಬೋಳಿಸಿದ್ದಾರೆ.
ಈಗಾಗಲೆ ಚಿತ್ರೀಕರಣ ಮುಗಿದಿದ್ದು ಕಲಾವಿದರೆಲ್ಲಾರೂ ಡಬ್ಬಿಂಗ್ನಲ್ಲಿ ಬಿಝಿಯಾಗಿದ್ದಾರೆ. ಎರಡು ದಿನಗಳ ಹಿಂದಷ್ಟೇ ದರ್ಶನ್ ತಮ್ಮ ಭಾಗದ ಡಬ್ಬಿಂಗ್ ಮುಗಿಸಿದ್ದಾರೆ. ರವಿಚಂದ್ರನ್ ಹೊರತುಪಡಿಸಿ ಉಳಿದೆಲ್ಲಾ ಕಲಾವಿದರು ತಮ್ಮ ಡಬ್ಬಿಂಗ್ ಕೆಲಸ ಮುಗಿಸಿದ್ದಾರೆ.
ಚಿತ್ರದಲ್ಲಿ ಆಡುಭಾಷೆಯ ಡೈಲಾಗ್ಗಳಲ್ಲದೆ, ನಾಟಕದ ಶೈಲಿಯ ಡೈಲಾಗ್ಗಳಿದ್ದು ರವಿಚಂದ್ರನ್ ಪಾತ್ರವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದ್ದು, ಡಬ್ಬಿಂಗ್ಗಾಗಿ ಶ್ರೀನಿವಾಸ ಪ್ರಭುರನ್ನು ಕರೆತರಲು ಸಿದ್ಧತೆ ನಡೆಸಿದೆ.
ನಟ ಶ್ರೀನಿವಾಸ ಪ್ರಭು ರಂಗಭೂಮಿ ಹಿನ್ನೆಯವರಾಗಿದ್ದು, ನುರಿತ ಕಲಾವಿದರೂ ಹೌದು. ಅವರ ಧ್ವನಿ ಈ ಪಾತ್ರಕ್ಕೆ ಸೂಕ್ತ ಎಂದು ಚಿತ್ರತಂಡ ಭಾವಿಸಿದಂತಿದೆ. ಪೌರಾಣಿಕ ಪಾತ್ರಕ್ಕೆ ಡಬ್ಬಿಂಗ್ ಹೇಳುವುದು ಅವರಿಗೆ ಕಷ್ಟವಲ್ಲ. ಈ ಹಿಂದೆ ರವಿಚಂದ್ರನ್ ಪಾತ್ರಕ್ಕೆ ಡಬ್ಬಿಂಗ್ ಹೇಳಿರುವ ಕಾರಣ ಅವರ ಧ್ವನಿ ಸಹ ಪರ್ಫೆಕ್ಟ್ ಮ್ಯಾಚ್ ಆಗುತ್ತದೆ ಎಂದು ಭಾವಿಸಲಾಗಿದೆ.
ಇದೀಗ ನಿರ್ಮಾಣ ನಂತರದ ಕೆಲಸಗಳಲ್ಲಿ ’ಕುರುಕ್ಷೇತ್ರ’ ಬಿಝಿಯಾಗಿದ್ದು, ಶೀಘ್ರದಲ್ಲೇ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ವಿ ಹರಿಕೃಷ್ಣ ಸಂಗೀತ ನಿರ್ದೇಶನ ಚಿತ್ರಕ್ಕಿದೆ.