ಆ್ಯಪ್ನಗರ

ರಾಜಮೌಳಿಯ 'ಆರ್‌ಆರ್‌ಆರ್‌' ಚಿತ್ರದ ಮೇಲೆ ನಿರೀಕ್ಷೆ ಇಟ್ಟವರಿಗೆ ಸಿಕ್ತು ಕಹಿಸುದ್ದಿ! ಇಷ್ಟಕ್ಕೆಲ್ಲ ಆಲಿಯಾ-ಅಜಯ್ ದೇವ್‌ಗನ್ ಕಾರಣವೇ?

'ಬಾಹುಬಲಿ' ಆದಮೇಲೆ ರಾಜಮೌಳಿ ಯಾವ ಸಿನಿಮಾ ಮಾಡ್ತಾರೆ ಎಂಬ ಪ್ರಶ್ನೆಗೆ 'ಆರ್‌ಆರ್‌ಆರ್‌' ಎನ್ನೋ ಉತ್ತರ ಸಿಕ್ಕಿತ್ತು. ಸಿನಿಪ್ರಿಯರು ಆ ಸಿನಿಮಾ ನೋಡೋಕೆ ಕಾಯ್ಕೊಂಡು ಇರುವಾಗಲೇ ಹೀಗೊಂದು ಕಹಿಸುದ್ದಿಯೊಂದು ಹೊರಬಿದ್ದಿದೆ.

Vijaya Karnataka Web 16 Oct 2019, 10:19 pm
'ಬಾಹುಬಲಿ'ಯಂತಹ ಮಾಸ್ಟರ್‌ ಪೀಸ್ ನೀಡಿದ ರಾಜಮೌಳಿ ಕೈಗೆತ್ತಿಕೊಂಡಿರುವ 'ಆರ್‌ಆರ್‌ಆರ್‌' ಚಿತ್ರದ ನಿರೀಕ್ಷೆ ಸಿಕ್ಕಾಪಟ್ಟೆ ಇದೆ. ಈ ಚಿತ್ರದ ಮೂಲಕ ಜೂ.ಎನ್‌ಟಿಆರ್-ರಾಮ್‌ಚರಣ್ ಅವರನ್ನು ಒಟ್ಟಿಗೆ ತೆರೆಮೇಲೆ ತರುವ ಸಾಹಸಕ್ಕೆ ಕೈ ಹಾಕಿದ್ದರು ರಾಜಮೌಳಿ. ಆದರೆ, ಚಿತ್ರತಂಡದಿಂದ ಹೊರಬಿದ್ದಿರುವ ಹೊಸ ವಿಷಯವೊಂದು ಸಿನಿಪ್ರಿಯರಲ್ಲಿ ಬೇಸರ ಮೂಡಿಸಿದೆ.
Vijaya Karnataka Web RRR

ಎನ್‌ಟಿಆರ್ ಚಿತ್ರಕ್ಕೆ ಪಕ್ಕಾ ಆಯ್ತು ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್
ಹೌದು, ಎಲ್ಲ ಅಂದುಕೊಂಡಂತೆ ಆಗಿದ್ದರೆ, 'ಆರ್‌ಆರ್‌ಆರ್‌' 2020ರ ಜುಲೈ ತಿಂಗಳಲ್ಲಿ ರಿಲೀಸ್ ಆಗಬೇಕಿತ್ತು. ಆದರೆ, ಆ ವಿಚಾರದಲ್ಲಿ ಸಾಕಷ್ಟು ಬದಲಾವಣೆ ಆಗುವ ಸಾಧ್ಯತೆಗಳಿವೆ. ರಾಜಮೌಳಿಯ ಈ ಬಹುನಿರೀಕ್ಷಿತ ಸಿನಿಮಾವನ್ನುನ ಕಣ್ತುಂಬಿಕೊಳ್ಳೋಕೆ ಇನ್ನೂ 15 ತಿಂಗಳು ಕಾಯಬೇಕಾಗಬಹುದು ಎಂಬುದು ಹೊಸದಾಗಿ ಕೇಳಿಬಂದಿರುವ ಮಾಹಿತಿ. ಹಾಗಾಗಿ, 2021ರ ಜನವರಿ ಸಂಕ್ರಾಂತಿ ಹಬ್ಬಕ್ಕೆ 'ಆರ್‌ಆರ್‌ಆರ್‌' ಚಿತ್ರವನ್ನು ರಿಲೀಸ್ ಮಾಡುವ ಕುರಿತು ಯೋಜನೆ ಹಾಕಿಕೊಳ್ಳಲಾಗಿದೆಯಂತೆ.

ಅಷ್ಟಕ್ಕೂ ಆಗಿರುವುದೇನಂದರೆ, ಬಾಲಿವುಡ್‌ ಕಲಾವಿದರಾದ ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರಿಬ್ಬರು ಬಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇತ್ತ ಎನ್‌ಟಿಆರ್ ಮತ್ತು ರಾಮ್‌ ಚರಣ್ ಕೂಡ ಸ್ಟಾರ್ ನಟರು. ಇವರೆಲ್ಲರ ಡೇಟ್ಸ್ ಹೊಂದಿಸಿಕೊಂಡು ಕೆಲಸ ಮಾಡುವುದು ರಾಜಮೌಳಿಗೆ ಕಷ್ಟವಾಗುತ್ತಿದೆಯಂತೆ. ಹಾಗಾಗಿ, ಚಿತ್ರೀಕರಣ ನಿಧಾನಗತಿಯಲ್ಲಿ ಸಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.
ರಾಜಮೌಳಿ 'ಬಾಹುಬಲಿ' ನೆನಪಿಸಿಕೊಂಡು ನಟ ಪ್ರಭಾಸ್ ಹೇಳಿದ್ದೇನು?
ಇದರ ಮಧ್ಯೆ ಈ ಸಿನಿಮಾದ ಸಾಹಸ ದೃಶ್ಯಗಳು ಬೇರೆಯದೇ ಮಟ್ಟದಲ್ಲಿ ಇದೆಯಂತೆ. ಹಾಗಾಗಿ, ಫೈಟ್‌ಗಳ ಬಗ್ಗೆಯೂ ರಾಜಮೌಳಿ ಬಹಳ ತಲೆ ಕೆಡಿಸಿಕೊಂಡಿದ್ದಾರಂತೆ. 'ಬಾಹುಬಲಿ'ಗಿಂತಲೂ ಅದ್ಭುತವಾಗಿ ದೃಶ್ಯಗಳು ಮೂಡಿಬರಬೇಕು ಎಂಬುದು ಅವರು ಕನಸಂತೆ. ಹಾಗಾಗಿ, ಎಲ್ಲ ವಿಚಾರಗಳಿಂದ ಚಿತ್ರೀಕರಣ ತಡವಾಗ್ತಿದೆ ಎಂಬುದು ಇನ್‌ಸೈಡ್‌ ಟಾಕ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌