ಆ್ಯಪ್ನಗರ

ತಾರಾ ಜೋಡಿಯ ಪ್ರೇಮ ಪಲ್ಲವಿ

ಹಲವು ವರ್ಷಗಳಿಂದ ಅನ್ಯೋನ್ಯವಾಗಿ ಬಾಳುತ್ತಿರುವ ಐದು ಜೋಡಿಗಳು ತಮ್ಮ ಯಶಸ್ವಿ ದಾಂಪತ್ಯ ಜೀವನದ ಗುಟ್ಟನ್ನು ಇಲ್ಲಿ ಹಂಚಿಕೊಂಡಿದ್ದಾರೆ...

Vijaya Karnataka 14 Feb 2019, 5:00 am
ಹಲವು ವರ್ಷಗಳಿಂದ ಅನ್ಯೋನ್ಯವಾಗಿ ಬಾಳುತ್ತಿರುವ ಐದು ಜೋಡಿಗಳು ತಮ್ಮ ಯಶಸ್ವಿ ದಾಂಪತ್ಯ ಜೀವನದ ಗುಟ್ಟನ್ನು ಇಲ್ಲಿ ಹಂಚಿಕೊಂಡಿದ್ದಾರೆ.
Vijaya Karnataka Web BT15VALENTINES-NIRUPAMARAJENDRA


==

ಜುಡಿತ್‌ ಮತ್ತು ಪ್ರಸಾದ್‌ ಬಿದ್ದಪ್ಪ

ಫ್ಯಾಶನ್‌ ಗುರು ಪ್ರಸಾದ್‌ ಬಿದ್ದಪ್ಪ ಹೇಳೋದು ಹೀಗೆ: 'ನಮ್ಮಿಬ್ಬರನ್ನು ಬೆಸೆದಿರುವ ಪ್ರಮುಖ ಸಂಗತಿ ಎಂದರೆ ಅದು ಗಟ್ಟಿಯಾದ ಸ್ನೇಹ. ನಮ್ಮ ಸಂಬಂಧದಲ್ಲಿ ಮುಖ್ಯವಾದ್ದು ಪರಸ್ಪರ ನಾವು ತೋರುವ ಗೌರವ'. ಜುಡಿತ್‌ ವರ್ಸ್ಟ್‌ ಕ್ರಿಟಿಕ್‌ ಎಂದಿದ್ದಾರೆ ಅವರು.

'ಹೆಚ್ಚು ಸಮಯ ಸಿಕ್ಕಾಗ ಇಬ್ಬರೂ ನಮ್ಮ ಕೆಲಸದ ವಿಷಯ ಸೇರಿದಂತೆ ಕುಟುಂಬದ ಎಲ್ಲಾ ಸಂಗತಿಗಳ ಬಗ್ಗೆ ಸಿಕ್ಕಾಪಟ್ಟೆ ಮಾತನಾಡುತ್ತೇವೆ. ನಮಗೆ ವಯಸ್ಸಾದಂತೆಲ್ಲಾ ಜೀವನ ಹೆಚ್ಚು ಶ್ರೀಮಂತವಾಗುತ್ತಿದೆ' ಎಂದಿರುವ ಅವರು ಯುವ ಜೋಡಿಗಳಿಗೆ ಕಿವಿಮಾತು ಹೇಳಿದ್ದಾರೆ. 'ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಿ. ಮುಖ್ಯವಾಗಿ ನಿಮ್ಮ ಜತೆಯಲ್ಲಿರುವವರಿಗೆ ಏನು ಬೇಕು ಎನ್ನುವುದನ್ನು ಅರಿತು ಕೇರ್‌ ತಗೊಳ್ಳಿ. ಸಂಬಂಧ ಎನ್ನುವುದು ಪಡೆಯುವುದಲ್ಲ, ಕೊಡುವುದು. ನೀವು ನಿಮ್ಮ ಸಂಗಾತಿಗೆ ಬೆಸ್ಟ್‌ ಎನ್ನುವುದನ್ನು ಕೊಟ್ಟರೆ ಎಲ್ಲವೂ ಸುಗಮವಾಗಿ ಸಾಗುತ್ತದೆ' ಎನ್ನುತ್ತಾರೆ.

--

ನಿರುಪಮಾ ಮತ್ತು ರಾಜೇಂದ್ರನ್‌

ನೃತ್ಯಪಟುಗಳಾದ ನಿರುಪಮಾ ಮತ್ತು ರಾಜೇಂದ್ರನ್‌ ಜೋಡಿ ನೃತ್ಯ ಕ್ಷೇತ್ರದಲ್ಲಿ ಹಲವರಿಗೆ ಸ್ಫೂರ್ತಿ ನೀಡುತ್ತಿದೆ. ಅವರ ಯಶಸ್ವಿ ಬದುಕಿನ ಗುಟ್ಟನ್ನು ಹೇಳಿದ್ದಾರೆ ನಿರುಪಮಾ. 'ಅದು ಗೌರವ. ಒಬ್ಬರಿಗೊಬ್ಬರು ಬೆಲೆ ಕೊಡುವುದು ಬಹಳ ಮುಖ್ಯ. ನಾವು ಪ್ರೀತಿಸಿದವರನ್ನು ಗೌರವಿಸುವುದರಿಂದ ಪ್ರೀತಿ ಇನ್ನಷ್ಟು ಗಾಢವಾಗುತ್ತದೆ' ಎನ್ನುತ್ತಾರೆ.

'ನಮ್ಮ ಜೀವನ, ವೃತ್ತಿ ಬದುಕು, ಎರಡರ ಬಗ್ಗೆಯೂ ಏನೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ರಾಜೇಂದ್ರ ಬಹಳ ಪ್ರಾಮಾಣಿಕರಾಗಿರುತ್ತಾರೆ. ಕ್ರೈಸಿಸ್‌ ಎದುರಾದಾಗೆಲ್ಲಾ ಇಬ್ಬರೂ ಕೂತು ಚರ್ಚಿಸುತ್ತೇವೆ. ಒಬ್ಬರಿಗೊಬ್ಬರು ಮುಂದೆ ಬರಲು ಪ್ರೋತ್ಸಾಹ, ಸಹಕಾರ ನೀಡುತ್ತೇವೆ. ನನ್ನ ಗಂಡ ನನಗೆ ದೊಡ್ಡ ಸಪೋರ್ಟರ್‌. ನಾವಿಬ್ಬರೂ ನೃತ್ಯಗಾರರಾಗಿರೋದ್ರಿಂದ ಅದೇ ನಮ್ಮ ಉಸಿರು, ವೃತ್ತಿ, ಜೀವನ ಎಲ್ಲವೂ ಆಗಿದೆ' ಎಂದಿದ್ದಾರೆ ಅನುಪಮಾ.

'ಜೀವನ ಎನ್ನುವುದು ಕ್ಯಾಂಡಲ್‌ಲೈಟ್‌ ಡಿನ್ನರ್‌ ಅಲ್ಲ. ಸದಾ ಒಬ್ಬರಿಗಾಗಿ ಇನ್ನೊಬ್ಬರು ಬದುಕುವುದು, ಪರಸ್ಪರ ಅರ್ಥ ಮಾಡಿಕೊಳ್ಳುವುದು ಜೀವನ. ರಾಜೇಂದ್ರ ಅವರಿಗೆ ಬೇಸರವಾಗುವಂತೆ ನಾನೆಂದೂ ನಡೆದುಕೊಂಡಿಲ್ಲ. ಅವರೂ ಕೂಡಾ ಹಾಗೆ. ಒಬ್ಬರು ಇನ್ನೊಬ್ಬರ ಮನಶ್ಶಾಂತಿ ಕಾಪಾಡಬೇಕಿದೆ. ಅಲ್ಲದೆ, ಸರಳವಾಗಿ ಆಲೋಚಿಸುವುದರಲ್ಲಿ ಇರುವ ಸೌಂದರ್ಯವನ್ನು ಇಂದಿನ ಜನರೇಷನ್‌ನವರು ಅರಿಯಬೇಕಿದೆ. ಇಬ್ಬರೂ ತಮ್ಮ ತಲೆಯನ್ನು ಪ್ರತ್ಯೇಕವಾಗಿಟ್ಟು , ಹೃದಯ ತೆರೆದಿಡಬೇಕಿದೆ' ಎಂದು ಇಂದಿನ ಯುವಜನತೆಗೆ ಕಿವಿಮಾತು ಹೇಳಿದ್ದಾರೆ.

ವಾಸು ದೀಕ್ಷಿತ್‌ ಮತ್ತು ಬಿಂದುಮಾಲಿನಿ


ಸಂಗೀತ ಕ್ಷೇತ್ರದ ಜೋಡಿ ವಾಸು ದೀಕ್ಷಿತ್‌ ಮತ್ತು ಬಿಂದುಮಾಲಿನಿ ಪ್ರೀತಿಯಿಂದ, ಪರಸ್ಪರ ಗೌರವದಿಂದ ಬಾಳುವುದೇ ಸುಖ ದಾಂಪತ್ಯದ ಕೀ ಎನ್ನುತ್ತಾರೆ. 'ಅವಳು ಮಾಡುವ ಕಟು ವಿಮರ್ಶೆಯೇ ನನಗೆ ಮುಖ್ಯ. ಉಳಿದಂತೆ ಯಾರು ಏನೇ ಹೇಳಿದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ' ಎನ್ನುತ್ತಾರೆ ವಾಸು. ಬಿಂದು ಮಾಲಿನಿ ಹೇಳುವುದೂ ಅದನ್ನೇ. 'ನಾವು ಪರಸ್ಪರ ರಾರ‍ಯಂಡಮ್‌ ಆಗಿ ವಿಮರ್ಶೆ ಮಾಡುವುದಿಲ್ಲ. ಏನು ಮಾಡಿದರೆ ಒಳ್ಳೆಯದು, ಏನು ಮಾಡಬಾರದಿತ್ತು ಎನ್ನುವುದನ್ನೂ ವಿಮರ್ಶಿಸುತ್ತೇವೆ. ಅದರ ಜತೆಯಲ್ಲೇ ಟೀಕೆಗೆ ಕಾರಣವನ್ನೂ ನೀಡುತ್ತೇವೆ, ಅದನ್ನು ಹೇಗೆ ಬಗೆಹರಿಸಿಕೊಳ್ಳಬೇಕು ಎನ್ನುವುದನ್ನೂ ಮಾತನಾಡುತ್ತೇವೆ. ಹೊರಗಿನವರಿಗಿಂತ ಮೊದಲು ನಾವೇ ಪರಸ್ಪರ ಫಿಲ್ಟರ್‌ ಮಾಡಿಬಿಡುತ್ತೇವೆ' ಎನ್ನುತ್ತಾರೆ ಬಿಂದು.

'ಯಾರನ್ನೂ ಸಲಹೆ ಕೇಳಬೇಡಿ, ನಿಮ್ಮ ಅನುಭವವೇ ನಿಮ್ಮ ಗೈಡ್‌' ಎಂದು ಇಂದಿನ ಜೋಡಿಗಳಿಗೆ ವಾಸು ಕಿವಿಮಾತು ಹೇಳಿದರೆ, 'ಅಗತ್ಯವಿರುವಷ್ಟು ಸಮಯ ತೆಗೆದುಕೊಳ್ಳಿ, ಅದೇ ರೀತಿ ಸಂಗಾತಿಗೆ ಸಮಯವನ್ನೂ ಕೊಡಿ' ಎನ್ನುತ್ತಾರೆ ಬಿಂದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌