ಆ್ಯಪ್ನಗರ

ಅನೂಪ್‌ ಚಿತ್ರಕಥೆ ಕೇಳಿ ಥ್ರಿಲ್‌ ಆದ ಸುದೀಪ್‌

ಅನೂಪ್‌ ಭಂಡಾರಿ ಮತ್ತು ಸುದೀಪ್‌ ಕಾಂಬಿನೇಷನ್‌ನಲ್ಲಿ ಮತ್ತೊಂದು ಹೊಸ ಸಿನಿಮಾ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ. ಅದಕ್ಕಾಗಿಯೇ ನಿರ್ದೇಶಕ ಅನೂಪ್‌ ಭಂಡಾರಿ ಕಥೆಯೊಂದನ್ನು ಹೆಣೆದಿದ್ದಾರೆ.

Vijaya Karnataka Web 24 Jul 2019, 5:00 am
ನಂದಿನಿ ಕೆ.ಎಲ್‌
Vijaya Karnataka Web sudeep1



ಅನೂಪ್‌ ಭಂಡಾರಿ ಮತ್ತು ಸುದೀಪ್‌ ಕಾಂಬಿನೇಷನ್‌ನಲ್ಲಿ ಮತ್ತೊಂದು ಹೊಸ ಸಿನಿಮಾ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ. ಅದಕ್ಕಾಗಿಯೇ ನಿರ್ದೇಶಕ ಅನೂಪ್‌ ಭಂಡಾರಿ ಕಥೆಯೊಂದನ್ನು ಹೆಣೆದಿದ್ದಾರೆ. ಈ ಕಥೆ ಕೇಳಿದ ಕೂಡಲೇ ಎಕ್ಸೈಟ್‌ ಆಗಿ ಸುದೀಪ್‌ ಸಿನಿಮಾವನ್ನು ಒಪ್ಪಿಕೊಂಡಿದ್ದಾರಂತೆ. ಈ ಕುರಿತು ನಿರ್ದೇಶಕ ಅನೂಪ್‌ ಭಂಡಾರಿ ಎಕ್ಸ್‌ಕ್ಲೂಸಿವ್‌ ಆಗಿ ಲವಲವಿಕೆಯ ಜತೆ ಮಾತನಾಡಿದ್ದಾರೆ.

'ನನಗೆ ವೈಯಕ್ತಿಕವಾಗಿ ಇಷ್ಟವಾದಂತಹ ಸ್ಕ್ರಿಪ್ಟ್‌ ಇದು. ಕಥೆಯನ್ನು ಬರೆಯುತ್ತಾ ಬರೆಯುತ್ತಾ ಈ ಪಾತ್ರವನ್ನು ಸುದೀಪ್‌ ಮಾಡಿದರೆ ಉತ್ತಮ ಎಂದೆನಿಸಿತು. ಇದರ ಬಗ್ಗೆ ಅವರ ಜತೆ ಒಮ್ಮೆ ಮಾತನಾಡಿದೆ. ಕಥೆಯನ್ನು ಕೇಳುತ್ತಲೇ ಸುದೀಪ್‌ ತುಂಬಾ ಥ್ರಿಲ್‌ ಆಗಿ ಒಪ್ಪಿಕೊಂಡರು. ಸುದೀಪ್‌ ಕೇವಲ ಸೂಪರ್‌ ಸ್ಟಾರ್‌ ಅಲ್ಲ, ಅವರೊಬ್ಬ ಬ್ರಿಲಿಯಂಟ್‌ ನಟ ಕೂಡ. ಇದನ್ನೇ ಗಮನದಲ್ಲಿಟ್ಟುಕೊಂಡು ಕಥೆ ಬರೆದಿದ್ದೇನೆ. ಇಲ್ಲಿ ಆ್ಯಕ್ಷನ್‌, ರೊಮ್ಯಾನ್ಸ್‌, ಸೆಂಟಿಮೆಂಟ್‌ ಎಲ್ಲವೂ ಇದ್ದು ನವರಸಗಳಿಂದ ಕೂಡಿದೆ. ಪಾತ್ರಕ್ಕಾಗಿ ಸುದೀಪ್‌ ಅವರ ಲುಕ್‌, ಗೆಟಪ್‌, ಕಾಸ್ಟ್ಯೂಮ್‌ ಎಲ್ಲವೂ ಈ ಚಿತ್ರದಲ್ಲಿ ಬದಲಾಗುತ್ತದೆ' ಎನ್ನುತ್ತಾರೆ ನಿರ್ದೇಶಕ ಅನೂಪ್‌ ಭಂಡಾರಿ.

'ಬಿಲ್ಲಾ ರಂಗ ಭಾಷಾ' ಚಿತ್ರವು ಮುಂದಿನ 200 ವರ್ಷಗಳ ಅವಧಿಯಲ್ಲಿ ನಡೆಯುವ ಕಥೆಯಾದ್ದರಿಂದ ಅದಕ್ಕೆ ಸಾಕಷ್ಟು ಕೆಲಸ ಮಾಡಬೇಕು, ಅಧಿಕ ಸಮಯ ಬೇಕು. ಸೆಟ್‌ ಕೂಡ ಅಷ್ಟೇ ದೊಡ್ಡ ಮಟ್ಟದಲ್ಲಿ ಹಾಕಬೇಕಾಗಿತ್ತು. ಹಾಗಾಗಿಯೇ ಅದಕ್ಕೂ ಮುನ್ನ ಈ ಸಿನಿಮಾವನ್ನೇ ಮಾಡೋಣವೆಂದು ಸುದೀಪ್‌ ಅವರೇ ಸಲಹೆ ನೀಡಿದರು. ಆದ್ದರಿಂದ ಸುದೀಪ್‌ ನಟನೆಯ 'ಕೋಟಿಗೊಬ್ಬ-3', 'ದಬಾಂಗ್‌-3' ಚಿತ್ರದ ಚಿತ್ರೀಕರಣ ಮುಗಿದ ತಕ್ಷಣ 2019ರ ಕೊನೆಯಲ್ಲಿ ಈ ಚಿತ್ರವನ್ನು ಶೂಟಿಂಗ್‌ ಮಾಡುವ ಪ್ಲಾನ್‌ ಮಾಡಿಕೊಂಡಿದ್ದೇವೆ' ಎನ್ನುತ್ತಾರೆ ನಿರ್ದೇಶಕ ಅನೂಪ್‌ ಭಂಡಾರಿ.

ಈ ಹಿಂದೆ ಸುದೀಪ್‌ ಅವರು ಲವಲವಿಕೆಗೆ ನೀಡಿದ ಸಂದರ್ಶನದಲ್ಲಿ, 'ಅನೂಪ್‌ ಒಬ್ಬ ಉತ್ತಮ ನಿರ್ದೇಶಕ. ಅಷ್ಟಲ್ಲದೇ ಒಳ್ಳೆಯ ಕಥೆಯನ್ನು ರೆಡಿ ಮಾಡಿಕೊಂಡಿದ್ದಾರೆ. ಕಥೆಯೂ ಇಷ್ಟವಾಗಿರುವುದರಿಂದಲೇ ಸಿನಿಮಾವನ್ನು ಒಪ್ಪಿಕೊಂಡೆ' ಎಂದು ತಮ್ಮ ಹೊಸ ಚಿತ್ರದ ಬಗ್ಗೆ ಹೇಳಿದ್ದರು.

'ನಾನು ಯಾವಾಗಲೂ ಯೋಜಿತವಾಗಿಯೇ ಕೆಲಸ ಮಾಡುತ್ತೇನೆ. ಪ್ಲಾನ್‌ ಮಾಡಿಕೊಂಡಂತೆ ಕೆಲಸವನ್ನು ಮುಗಿಸಿಬಿಡುತ್ತೇನೆ. ಸುದೀಪ್‌ ಜತೆ ಸಿನಿಮಾ ಮಾಡಬೇಕೆಂಬುದು ನನ್ನ ಬಹುದಿನದ ಕನಸಾಗಿತ್ತು. ಈಗವರು ಎರಡು ಸಿನಿಮಾಗಳಿಗೆ ಒಪ್ಪಿಕೊಂಡಿರುವುದು ನನ್ನಲ್ಲಿ ಕೆಲಸದ ಹುಮ್ಮಸ್ಸು ಹೆಚ್ಚಿಸಿದೆ. 'ಪೈಲ್ವಾನ್‌' ಚಿತ್ರದ ನಂತರ ಹೊಸ ಚಿತ್ರದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಕೊಡುತ್ತೇನೆ. ಕನ್ನಡದಲ್ಲಿರುವ ಎಲ್ಲಾ ಸ್ಟಾರ್‌ ನಟರ ಜತೆಯೂ ಕೆಲಸ ಮಾಡಬೇಕೆಂಬ ಆಸೆ ಇದೆ' ಎನ್ನುತ್ತಾರೆ ಅನೂಪ್‌ ಭಂಡಾರಿ.

ಸುದೀಪ್‌ ಕೇವಲ ಸೂಪರ್‌ಸ್ಟಾರ್‌ ಅಲ್ಲ, ಅವರೊಬ್ಬ ಅದ್ಭುತ ನಟ, ಈ ಎರಡು ಅಂಶವನ್ನೇ ಪ್ರಮುಖವಾಗಿಟ್ಟುಕೊಂಡು ಹೊಸ ಕಥೆಯನ್ನು ಮಾಡಿದ್ದೇನೆ.

-ಅನೂಪ್‌ ಭಂಡಾರಿ, ನಿರ್ದೇಶಕ.

ಅನೂಪ್‌ ಒಳ್ಳೆಯ ಕಥೆಯೊಂದನ್ನು ಹೆಣೆದಿದ್ದಾರೆ. ಅದಕ್ಕಾಗಿಯೇ ಸಿನಿಮಾವನ್ನು ಒಪ್ಪಿಕೊಂಡೆ.

-ಸುದೀಪ್‌, ನಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌