ಸುದೀಪ್ಗಾಗಿ ಐತಿಹಾಸಿಕ ಕತೆ ಬರೆದಿದ್ದೇನೆ ಅಂದಿದ್ದಾರೆ ನಿರ್ದೇಶಕ ನಾಗಶೇಖರ್. ರಾಜ ವಿಷ್ಣುವರ್ಧನ್ ಕತೆಯನ್ನು ಸಿನಿಮಾ ಮಾಡುವುದಾಗಿ ಹೇಳಿರುವ ನಿರ್ದೇಶಕರು ಸುದೀಪ್ ಅವರು ರಾಜ ವಿಷ್ಣುವರ್ಧನ್ ಆಗಿ ನಟಿಸಲಿದ್ದಾರಂತೆ.
ಕಿಲಾಡಿ ಡಾನ್ಸ್
ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್. ಪೇಟೆ 'ಮದುವೆ ದಿಬ್ಬಣ' ಸಿನಿಮಾದ ಸ್ಪೆಷಲ್ ಸಾಂಗ್ಗೆ ಹೆಜ್ಜೆ ಹಾಕಿದ್ದಾರೆ. ಈ ಸಿನಿಮಾದಲ್ಲಿ ಸೋನಾಲ್ ನಾಯಕಿ.
ರಜಿನಿ ಮೆಚ್ಚಿದ 8 ತೊಕ್ಕಲ್
ಕೆಲ ದಿನಗಳ ಹಿಂದೆಯಷ್ಟೇ ರಿಲೀಸ್ ಆಗಿ, ಸೆನ್ಸೇಷನ್ ಕ್ರಿಯೇಟ್ ಮಾಡಿರುವ '8 ತೊಕ್ಕಲ್' ಸಿನಿಮಾವನ್ನು ಸೂಪರ್ಸ್ಟಾರ್ ರಜನೀಕಾಂತ್ ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾ ನೋಡಿದ ತಕ್ಷಣವೇ ನಿರ್ದೇಶಕ ಶ್ರೀ ಗಣೇಶ್ ಅವರಿಗೆ ಕರೆ ಮಾಡಿ ಅಭಿನಂದಿಸಿದ್ದಾರೆ.
ಗಲ್ಫ್ನಲ್ಲಿ ರಾಜಕುಮಾರ
ಪುನೀತ್ ರಾಜ್ಕುಮಾರ್ ಅಭಿನಯದ 'ರಾಜಕುಮಾರ' ಸಿನಿಮಾ ಗಲ್ಫ್ ರಾಷ್ಟ್ರಗಳಲ್ಲಿ ಬಿಡುಗಡೆಯಾಗಿದೆ. ಅಲ್ಲಿಯೂ ಕೂಡ ರಾಜಕುಮಾರನಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.