ಆ್ಯಪ್ನಗರ

ಸುದೀಪ್ ದಾಂಪತ್ಯದಲ್ಲಿ ಮತ್ತೆ ಮೂಡಲಿದೆ ನವರಾಗ?

2015ರಲ್ಲಿ ಸುದೀಪ್ ಕುಟುಂಬ ಜೀವನದಲ್ಲಿ ವಿಚ್ಚೇದನ ಎಂಬ ಬಿರುಗಾಳಿಯ ಅಲೆ ಎದ್ದಿತು. ಆ ಸುದ್ದಿ ಹೊರ ಬೀಳುತ್ತಿದ್ದಂತೆ ಅವರ ಸುಂದರ ಕುಟುಂಬ ನೂರು ಕಾಲ ಒಟ್ಟಾಗಿ ಬಾಳಲಿ ಎಂದು ಅವರ ಅಭಿಮಾನಿಗಳು ಹಾಗೂ ಹಿತೈಷಿಗಳು ಆಶಿಸಿದ್ದರು.

ಟೈಮ್ಸ್ ಆಫ್ ಇಂಡಿಯಾ 11 Jan 2017, 3:13 pm
2015ರಲ್ಲಿ ಸುದೀಪ್ ಕುಟುಂಬ ಜೀವನದಲ್ಲಿ ವಿಚ್ಚೇದನ ಎಂಬ ಬಿರುಗಾಳಿಯ ಅಲೆ ಎದ್ದಿತು. ಆ ಸುದ್ದಿ ಹೊರ ಬೀಳುತ್ತಿದ್ದಂತೆ ಸುದೀಪ್‌ರ ಸುಂದರ ಕುಟುಂಬ ನೂರು ಕಾಲ ಒಟ್ಟಾಗಿ ಬಾಳಲಿ ಎಂದು ಅವರ ಅಭಿಮಾನಿಗಳು ಹಾಗೂ ಹಿತೈಷಿಗಳು ಆಶಿಸಿದ್ದರು. ಇದೀಗ ಸುದೀಪ್‌ ದಂಪತಿ ನಡೆದುಕೊಳ್ಳುತ್ತಿರುವ ರೀತಿಯೂ ಅವರ ಹಿತೈಷಿಗಳಿಗೆ ಖುಷಿ ತಂದಿದೆ.
Vijaya Karnataka Web sudeep not to divorce priya
ಸುದೀಪ್ ದಾಂಪತ್ಯದಲ್ಲಿ ಮತ್ತೆ ಮೂಡಲಿದೆ ನವರಾಗ?


ಇವರ ವಿಚ್ಛೇದನ ಅರ್ಜಿಯು ಬೆಂಗಳೂರಿನ ಕುಟುಂಬ ನ್ಯಾಯಾಲಯದಲ್ಲಿದ್ದು ವಿಚಾರಣೆಗೆ ಸುದೀಪ್ ದಂಪತಿ ಸೋಮವಾರ ನ್ಯಾಯಾಲಯಕ್ಕೆ ಬರಬೇಕಾಗಿತ್ತು. ಆದರೆ ಸುದೀಪ್ ಮತ್ತು ಅವರ ಪತ್ನಿ ಪ್ರಿಯಾ ಆಗಲಿ ವಿಚಾರಣೆಗೆ ಹಾಜರಾಗಲಿಲ್ಲ.

ಕಹಿ ಘಟನೆಗಳನ್ನು ಮರೆತು ತಮ್ಮ ಮಗಳು ಸಾನ್ವಿಗೋಸ್ಕರ ಮತ್ತೆ ಒಂದಾಗಿ ಬಾಳಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಇತ್ತೀಚೆಗೆ ಪರೋಕ್ಷವಾಗಿ ಸುದೀಪ್ ನಡೆದುಕೊಳ್ಳುತ್ತಿರುವ ರೀತಿಯಿಂದಲೂ ಸುದೀಪ್ ವಿಚ್ಛೇದನ ನಿರ್ಧಾರದಿಂದ ಹಿಂದೆ ಸರಿದಿರುವಂತೆ ಇದೆ.

'ವೀಕೆಂಡ್ ವಿಥ್ ರಮೇಶ್' ಕಾರ್ಯಕ್ರಮದಲ್ಲಿ ಪತ್ನಿಗೆ ಥ್ಯಾಂಕ್ಸ್ ಹೇಳಿದ್ದರು. ಪತ್ನಿಯ ಹೆಸರಿನಲ್ಲಿರುವ ಕಂಪನಿ ಸ್ಟೇಜ್ 360 ಡಿಗ್ರಿಯ ವಾರ್ಷಿಕ ಸಮಾರಂಭದ ದಿನದಂದು ಪತ್ನಿಯನ್ನು ಹೊಗಳಿ ಟ್ವೀಟ್ ಮಾಡಿದ್ದರು.

ಕೆಲವೊಂದು ಕಾರ್ಯಕ್ರಮಗಳಲ್ಲೂ ಅವರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಸಂಸಾರ ಎಂದ ಮೇಲೆ ಕಷ್ಟ-ಸುಖ ಸಾಮಾನ್ಯ. ಈ ದಂಪತಿ ಮತ್ತೆ ಒಂದಾಗಿ ನೂರು ಕಾಲ ಸಂತೋಷವಾಗಿ ಬಾಳಲಿ ಅನ್ನುವುದೇ ಅವರ ಅಭಿಮಾನಿಗಳ ಆಶಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌