ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು ಚಿತ್ರವನ್ನು ನಿರ್ದೇಶಿಸಿ, ಮುಖ್ಯ ಪಾತ್ರದಲ್ಲಿನಟಿಸಿದ್ದ ಲೋಕೇಂದ್ರ ಸೂರ್ಯ ಮತ್ತು ನಿರ್ದೇಶಕ ಆಸ್ಕರ್ ಕೃಷ್ಣ ಹೊಸ ಚಿತ್ರದಲ್ಲಿಜೋಡಿಯಾಗಿದ್ದಾರೆ. ಚಿತ್ರದ ಮುಖ್ಯ ಪಾತ್ರಗಳಲ್ಲಿಇಬ್ಬರೂ ನಟಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಪೋಸ್ಟರ್ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ ಸುದೀಪ್. ಅವರ ಹುಟ್ಟುಹಬ್ಬದಂದೇ ರಿಲೀಸ್ ಆಗಿದ್ದು, ಹೊಸಬರ ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿನಿರ್ಮಾಪಕ, ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಕಾರ್ಯದರ್ಶಿ ಭಾ.ಮಾ ಹರೀಶ್, ಭಾ.ಮಾ . ಗಿರೀಶ್, ನಿರ್ಮಾಪಕ ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.
ಅಟ್ಟಯ್ಯ ಚಿತ್ರಕ್ಕೆ ಕತೆ, ಚಿತ್ರಕತೆ ಮತ್ತು ನಿರ್ದೇಶನ ಮಾಡಿದ್ದರು ಲೋಕೇಂದ್ರ ಸೂರ್ಯ. ಈ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿಪ್ರದರ್ಶನ ಕಂಡು ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಹೊಸ ಚಿತ್ರಕ್ಕೂ ಕತೆ, ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ ಅವರು. ಚಿತ್ರ ನಿರ್ದೇಶನ ಮಾಡಲಿದ್ದಾರೆ ಆಸ್ಕರ್ ಕೃಷ್ಣ. ಮರ್ಡರ್, ಥ್ರಿಲ್ಲರ್ ಚಿತ್ರ ಇದಾಗಿದೆ. ಇಬ್ಬರು ಸ್ನೇಹಿತರ ನಡುವಿನ ಗಟ್ಟಿ ಸ್ನೇಹ, ಅದಕ್ಕೆ ಬರುವ ಅಡ್ಡಿ ಆತಂಕಗಳು, ಇದನ್ನೆಲ್ಲಾಮೀರಿ ಸ್ನೇಹ ಗೆಲ್ಲುತ್ತದಾ ಎನ್ನುವುದು ಚಿತ್ರದ ಹೈಲೈಟ್. ಸದ್ಯದಲ್ಲೇ ಚಿತ್ರ ಸೆಟ್ಟೇರಲಿದೆ.
ಅಟ್ಟಯ್ಯ ಚಿತ್ರಕ್ಕೆ ಕತೆ, ಚಿತ್ರಕತೆ ಮತ್ತು ನಿರ್ದೇಶನ ಮಾಡಿದ್ದರು ಲೋಕೇಂದ್ರ ಸೂರ್ಯ. ಈ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿಪ್ರದರ್ಶನ ಕಂಡು ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಹೊಸ ಚಿತ್ರಕ್ಕೂ ಕತೆ, ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ ಅವರು. ಚಿತ್ರ ನಿರ್ದೇಶನ ಮಾಡಲಿದ್ದಾರೆ ಆಸ್ಕರ್ ಕೃಷ್ಣ. ಮರ್ಡರ್, ಥ್ರಿಲ್ಲರ್ ಚಿತ್ರ ಇದಾಗಿದೆ. ಇಬ್ಬರು ಸ್ನೇಹಿತರ ನಡುವಿನ ಗಟ್ಟಿ ಸ್ನೇಹ, ಅದಕ್ಕೆ ಬರುವ ಅಡ್ಡಿ ಆತಂಕಗಳು, ಇದನ್ನೆಲ್ಲಾಮೀರಿ ಸ್ನೇಹ ಗೆಲ್ಲುತ್ತದಾ ಎನ್ನುವುದು ಚಿತ್ರದ ಹೈಲೈಟ್. ಸದ್ಯದಲ್ಲೇ ಚಿತ್ರ ಸೆಟ್ಟೇರಲಿದೆ.