ಆ್ಯಪ್ನಗರ

ಹೊಸ ಚಿತ್ರಕ್ಕೆ ಸುದೀಪ್‌ ಬೆಂಬಲ

ನಿರ್ದೇಶಕರಿಬ್ಬರ ಹೊಸ ಚಿತ್ರಕ್ಕೆ ನಟ ಸುದೀಪ್‌ ಬೆಂಬಲ ವ್ಯಕ್ತಪಡಿಸಿದ್ದಾರೆ. ಆಸ್ಕರ್‌ ಕೃಷ್ಣ ಮತ್ತು ಲೋಕೇಂದ್ರ ಸೂರ್ಯ ನಟಿಸುತ್ತಿರುವ ಚಡ್ಡಿ ದೋಸ್‌್ತ ಕಡ್ಡಿ ಅಲ್ಲಾಡುಸ್ಬುಟ್ಟ ಚಿತ್ರದ ಮೊದಲ ಪೋಸ್ಟರ್‌ ರಿಲೀಸ್‌ ಮಾಡಿದ್ದಾರೆ ಸುದೀಪ್‌.

Vijaya Karnataka 6 Sep 2019, 5:00 am
ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು ಚಿತ್ರವನ್ನು ನಿರ್ದೇಶಿಸಿ, ಮುಖ್ಯ ಪಾತ್ರದಲ್ಲಿನಟಿಸಿದ್ದ ಲೋಕೇಂದ್ರ ಸೂರ್ಯ ಮತ್ತು ನಿರ್ದೇಶಕ ಆಸ್ಕರ್‌ ಕೃಷ್ಣ ಹೊಸ ಚಿತ್ರದಲ್ಲಿಜೋಡಿಯಾಗಿದ್ದಾರೆ. ಚಿತ್ರದ ಮುಖ್ಯ ಪಾತ್ರಗಳಲ್ಲಿಇಬ್ಬರೂ ನಟಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಪೋಸ್ಟರ್‌ ರಿಲೀಸ್‌ ಮಾಡಿ ಶುಭ ಹಾರೈಸಿದ್ದಾರೆ ಸುದೀಪ್‌. ಅವರ ಹುಟ್ಟುಹಬ್ಬದಂದೇ ರಿಲೀಸ್‌ ಆಗಿದ್ದು, ಹೊಸಬರ ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿನಿರ್ಮಾಪಕ, ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಕಾರ್ಯದರ್ಶಿ ಭಾ.ಮಾ ಹರೀಶ್‌, ಭಾ.ಮಾ . ಗಿರೀಶ್‌, ನಿರ್ಮಾಪಕ ಅವಿನಾಶ್‌ ಶೆಟ್ಟಿ ಉಪಸ್ಥಿತರಿದ್ದರು.
Vijaya Karnataka Web IMG-20190905-WA0006


ಅಟ್ಟಯ್ಯ ಚಿತ್ರಕ್ಕೆ ಕತೆ, ಚಿತ್ರಕತೆ ಮತ್ತು ನಿರ್ದೇಶನ ಮಾಡಿದ್ದರು ಲೋಕೇಂದ್ರ ಸೂರ್ಯ. ಈ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿಪ್ರದರ್ಶನ ಕಂಡು ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಹೊಸ ಚಿತ್ರಕ್ಕೂ ಕತೆ, ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ ಅವರು. ಚಿತ್ರ ನಿರ್ದೇಶನ ಮಾಡಲಿದ್ದಾರೆ ಆಸ್ಕರ್‌ ಕೃಷ್ಣ. ಮರ್ಡರ್‌, ಥ್ರಿಲ್ಲರ್‌ ಚಿತ್ರ ಇದಾಗಿದೆ. ಇಬ್ಬರು ಸ್ನೇಹಿತರ ನಡುವಿನ ಗಟ್ಟಿ ಸ್ನೇಹ, ಅದಕ್ಕೆ ಬರುವ ಅಡ್ಡಿ ಆತಂಕಗಳು, ಇದನ್ನೆಲ್ಲಾಮೀರಿ ಸ್ನೇಹ ಗೆಲ್ಲುತ್ತದಾ ಎನ್ನುವುದು ಚಿತ್ರದ ಹೈಲೈಟ್‌. ಸದ್ಯದಲ್ಲೇ ಚಿತ್ರ ಸೆಟ್ಟೇರಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌