ಆ್ಯಪ್ನಗರ

ನಾನು ಸಿನಿಮಾವನ್ನು ಕಲಿತಿದ್ದು ನಿಮ್ಮಿಂದಲೇ ಎಂದ ಸುದೀಪ್‌

ಹಿರಿಯ ನಿರ್ದೇಶಕ ಸುನೀಲ್‌ಕುಮಾರ್‌ ದೇಸಾಯಿ ಅವರ ಹುಟ್ಟುಹಬ್ಬಕ್ಕೆ ಸುದೀಪ್‌ ವಿಶೇಷವಾಗಿ ಶುಭ ಹಾರೈಸಿದ್ದಾರೆ.

Vijaya Karnataka 23 Nov 2018, 9:56 am
ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾಗಳ ಮೂಲಕ ದೊಡ್ಡ ಹೆಸರು ಮಾಡಿರುವ ಸುನೀಲ್‌ಕುಮಾರ್‌ ದೇಸಾಯಿವರು ಗುರುವಾರ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಅವರ ಗರಡಿಯಲ್ಲಿ ನಾಯಕರಾಗಿ ಇಂದು ಸ್ಟಾರ್‌ ಆಗಿರುವ ಸುದೀಪ್‌ ಟ್ವೀಟರ್‌ನಲ್ಲಿ ಅವರಿಗೆ ವಿಶೇಷವಾಗಿ ವಿಷ್‌ ಮಾಡಿದ್ದಾರೆ.
Vijaya Karnataka Web sudeep


ಸುದೀಪ್‌ ಅವರನ್ನು ನಾಯಕರಾಗಿ ಮಾಡಿದ್ದು ಇದೇ ದೇಸಾಯಿ, ಹಾಗಾಗಿ ಟ್ವೀಟರ್‌ನಲ್ಲಿ ಆ ಬಗ್ಗೆ ಬರೆದಿರುವ ಸುದೀಪ್‌ 'ನಾನು ನಿಮ್ಮಿಂದ ಸಿನಿಮಾ ಏನು ಅನ್ನುವುದನ್ನು ಕಲಿತಿದ್ದೇನೆ. ಸಿನಿಮಾಗಳಲ್ಲಿ ಎಂತಹ ಒತ್ತಡ ಬಂದರೂ ಅದನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ನೀವು ನನಗೆ ಹೇಳಿಕೊಟ್ಟಿದ್ದೀರಾ. ನಿಮ್ಮ ಸಿನಿಮಾಗಳನ್ನು ಜನ ಸಾಕಷ್ಟು ವರ್ಷಗಳ ಕಾಲ ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ಇಷ್ಟು ವರ್ಷಗಳಿಂದ ನಮ್ಮನ್ನು ರಂಜಿಸಿದ್ದಕ್ಕೆ ಧನ್ಯವಾದಗಳು. ಎಂದು ಸುದೀಪ್‌ ಬರೆದುಕೊಂಡಿದ್ದಾರೆ.

ಸುನೀಲ್‌ಕುಮಾರ್‌ ದೇಸಾಯಿ ಸದ್ಯ ಬಹುಭಾಷಾ ಸಿನಿಮಾವಾಗಿರುವ ಉದ್ಘರ್ಷವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್‌ ಮತ್ತು ಕಾಲಿವುಡ್‌ನ ಖ್ಯಾತನಾಮರು ನಟಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌