ಆ್ಯಪ್ನಗರ

'ಪೈಲ್ವಾನ್' ಬಗ್ಗೆ ಅಪಪ್ರಚಾರ ಮಾಡಿದವರಿಗೆ ವಿಭಿನ್ನವಾಗಿ ಬಿಸಿ ಮುಟ್ಟಿಸಿದ ಕಿಚ್ಚ ಸುದೀಪ್

'ಪೈಲ್ವಾನ್' ಸಿನಿಮಾ ಅದ್ದೂರಿಯಾಗಿ ತೆರೆ ಕಂಡಿದೆ. ಹಲವರು ಕಿಚ್ಚ ಸುದೀಪ್ ಪರಿಶ್ರಮ, ಮೇಕಿಂಗ್, ಕಥೆ ನೋಡಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ನಡುವೆ ಕೆಲವು ಅಪಸ್ವರಗಳು ಕೇಳಿಬಂದಿದ್ದು, ಇದಕ್ಕೆ ಶಾಂತವಾಗಿ ಸುದೀಪ್ ಉತ್ತರ ನೀಡಿದ್ದಾರೆ.

Vijaya Karnataka Web 15 Sep 2019, 12:16 pm
'ಪೈಲ್ವಾನ್' ಸುಮಾರು 4000 ಸ್ಕ್ರೀನ್‌ಗಳಲ್ಲಿ ತೆರೆ ಕಂಡಿದ್ದು, ಪಂಚ ಭಾಷೆಗಳಲ್ಲಿ ದೇಶ-ವಿದೇಶಗಳಲ್ಲಿ ಬಿಡುಗಡೆಯಾಗಿತ್ತು. ಸಿನಿಮಾ ಒಳ್ಳೆಯ ಕಲೆಕ್ಷನ್‌ ಮಾಡುತ್ತಿದೆ. ಈ ನಡುವೆ ಕೆಲವರು ಸಿನಿಮಾ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಸುದೀಪ್ ಟ್ವೀಟ್ ಮಾಡಿದ್ದಾರೆ.
Vijaya Karnataka Web sudeeep


'ಪೈಲ್ವಾನ್' ಸಿನಿಮಾ ಸೆಪ್ಟೆಂಬರ್ 12ರಂದು ಬೆಳಗ್ಗೆ 5.30ಗೆ ಮೊದಲ ಪ್ರದರ್ಶನಗೊಂಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಸಿನಿಮಾ ಹೇಗಿದೆ ಎನ್ನೋದನ್ನು ಬರೆದುಕೊಂಡಿದ್ದರು. ಈ ಪೋಸ್ಟ್‌ಗಳಲ್ಲಿ ಎಲ್ಲವೂ ಪ್ರೇಕ್ಷಕರ ನಿಜವಾದ ವಿಮರ್ಶೆಗಳಲ್ಲ. ಉದ್ದೇಶಪೂರ್ವಕವಾಗಿ ಸಿನಿಮಾ ಚೆನ್ನಾಗಿಲ್ಲ ಅಂತ ಬಿಂಬಿಸಲು ನೆಗೆಟಿವ್ ಆಗಿ ಪೋಸ್ಟ್ ಮಾಡುವವರಿದ್ದಾರೆ. ಹೀಗಾಗಿ ಸುದೀಪ್ ಪರೋಕ್ಷವಾಗಿ ಇಂಥವರಿಗೆ ಬ್ಯಾಟ್ ಬೀಸಿದ್ದಾರೆ.
ಕಿಚ್ಚ ಸುದೀಪ್ ಪತ್ನಿಗೆ ಮತ್ತೆ ಮದುವೆಯಾಗುವ ಆಸೆಯಂತೆ; ಸುದೀಪ್ ಕೊಟ್ಟ ಸ್ಪಷ್ಟನೆ ಏನು?



"ಪೈಲ್ವಾನ್ ಬಗ್ಗೆ ಕೆಟ್ಟ ಸುದ್ದಿಗಳನ್ನು ಹಬ್ಬಿಸುವವರ ಬಗ್ಗೆ ನನಗೆ ಖುಷಿಯಿದೆ. ಏಕೆಂದರೆ ಅವರಿನ್ನೂ ಕೂಡ ಕೆಟ್ಟ ಸುದ್ದಿ ಹರಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ನಾವು ಒಳ್ಳೆಯ ಕೆಲಸ ಮಾಡಿದಾಗಲೇ ಅವರು ಕೆಟ್ಟ ಸುದ್ದಿ ಹರಡಿಸುತ್ತಾರೆ. ಈ ಮೂಮೆಂಟ್‌ನ್ನು ಎಂಜಾಯ್ ಮಾಡಿ" ಎಂದು ಟ್ವೀಟ್ ಮಾಡಿದ್ದಾರೆ ಸುದೀಪ್.

'ಪೈಲ್ವಾನ್' ನೋಡಿ ಕಣ್ಣೀರಿಟ್ಟ ಕಿಚ್ಚನ ಮಗಳು, ಪತ್ನಿ: ಪುತ್ರಿ ಸಾನ್ವಿ ಹೇಳಿದ್ದೇನು?

'ಪೈಲ್ವಾನ್' ಆ್ಯಕ್ಷನ್, ಕಾಮಿಡಿ, ಸೆಂಟಿಮೆಂಟ್‌ಗಳ ಮಿಶ್ರಣ ಎಂದು ಬಾಲಿವುಡ್ ಬ್ಯಾಡ್‌ಬಾಯ್ ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದರು. ಕುಸ್ತಿಪಟು ಪಾತ್ರದಲ್ಲಿ ಕಿಚ್ಚ ಹಾಕಿರುವ ಪ್ರಯತ್ನ ಎದ್ದು ಕಾಣಿಸುತ್ತದೆ. ಕುಸ್ತಿಪಟು, ಪ್ರೇಮಿ, ತಂದೆ, ಮಗನಾಗಿ ಕಿಚ್ಚನ ಅಭಿನಯ ನಿಜಕ್ಕೂ ಚೆನ್ನಾಗಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.ಈ ಚಿತ್ರಕ್ಕೆ ಎಸ್.ಕೃಷ್ಣ ನಿರ್ದೇಶನವಿದೆ, ಸ್ವಪ್ನಾ ಕೃಷ್ಣ ಬಂಡವಾಳ ಹಾಕಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌