ಆ್ಯಪ್ನಗರ

ಗರುಡದಲ್ಲಿ ಸುಜಯ್‌ ಕಮಾಲ್‌

ಕಳೆದ ವರ್ಷ ಬಿಡುಗಡೆಯಾದ ಶ್ರೀನಿವಾಸ ಕಲ್ಯಾಣ ಸಾಕಷ್ಟು ವಿಷಯಗಳಿಗೆ ಸದ್ದು ಮಾಡಿತ್ತು...

Vijaya Karnataka Web 20 Jul 2017, 4:00 am

ಕಳೆದ ವರ್ಷ ಬಿಡುಗಡೆಯಾದ ಶ್ರೀನಿವಾಸ ಕಲ್ಯಾಣ ಸಾಕಷ್ಟು ವಿಷಯಗಳಿಗೆ ಸದ್ದು ಮಾಡಿತ್ತು. ವಿಭಿನ್ನ ಮೇಕಿಂಗ್‌, ಕಡಿಮೆ ಬಜೆಟ್‌ ಹೀಗೆ ಬೇರೆ ಬೇರೆ ಪ್ರಯೋಗಗಳನ್ನು ಈ ಸಿನಿಮಾದಲ್ಲಿ ನಿರ್ದೇಶಕ ಶ್ರೀನಿ ಮಾಡಿದ್ದರು. ಜತೆಗೆ ಆ ಸಿನಿಮಾದ ಕಲಾವಿದರು ಸಹ ಸಾಕಷ್ಟು ಗಮನ ಸೆಳೆದಿದ್ದರು. ಈ ಸಿನಿಮಾ ಮೂಲಕ ಸುಜಯ್‌ ಶಾಸ್ತ್ರಿ ಎಂಬ ಅಪ್ಪಟ ರಂಗಭೂಮಿ ಪ್ರತಿಭೆ ಹಾಸ್ಯ ನಟರಾಗಿ ಸಿಕ್ಕಿದ್ದರು.

ಕನ್ನಡ ಚಿತ್ರರಂಗದಲ್ಲಿ ಏಕತಾನತೆಯ ಕಾಮಿಡಿ ನಟರಿಂದ ಬಳಲುತ್ತಿದ್ದಾಗ ಸುಜಯ್‌ ಅವರ ಕಾಮಿಡಿ ಟೈಮಿಂಗ್‌ ಪ್ರೇಕ್ಷಕರಿಗೆ ಹೊಸದಾಗಿ ಕಂಡಿತು. ಹಾಗಾಗಿ ಅವರ ಪಾತ್ರವನ್ನು ಪ್ರತಿಯೊಬ್ಬರು ಮೆಚ್ಚಿಕೊಂಡು ಅವರಿಗೆ ಉತ್ತಮ ಭವಿಷ್ಯ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈಗ ಅದು ನಿಜವಾಗಿದ್ದು, ಸುಜಯ್‌ ಅವರನ್ನು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಸದ್ಯ ಸಿದ್ಧಾರ್ಥ್‌ ಮತ್ತು ಐಂದ್ರಿತಾ ರೇ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಗರುಡ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಸಿನಿಮಾದ ಪಾತ್ರ ಬಹಳ ವಿಭಿನ್ನವಾಗಿದ್ದು, ಈ ಪಾತ್ರದ ಮೂಲಕವೂ ಗಮನ ಸೆಳೆಯುವುದು ಖಂಡಿತಾ ಎನ್ನುತ್ತಾರೆ ಸುಜಯ್‌. ಇದಲ್ಲದೆ ಶ್ರೀನಿಯವರ ಬೀರಬಲ್‌ ಎಂಬ ಟ್ರಯಾಲಜಿ ಸಿನಿಮಾದಲ್ಲಿಯೂ ಸುಜಯ್‌ ಅವರದ್ದೇ ಮುಖ್ಯ ಪಾತ್ರ. ಇದರ ಜತೆಗೆ ಒಂದಷ್ಟು ಕತೆಗಳನ್ನು ಸಹ ಅವರು ಕೇಳಿದ್ದಾರಂತೆ. ಒಟ್ಟಿನಲ್ಲಿ ಸುಜಯ್‌ ಶಾಸ್ತ್ರಿ ಕನ್ನಡಕ್ಕೆ ಒಬ್ಬ ಅದ್ಭುತ ಕಾಮಿಡಿಯನ್‌ ಆಗುವತ್ತ ಸಾಗುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌