-ಶರಣು ಹುಲ್ಲೂರು
ಲೋಕಸಭೆ ಚುನಾವಣೆಗೆ ಇನ್ನೂ ಕೆಲ ತಿಂಗಳು ಬಾಕಿ ಇರುವಂತೆಯೇ ನಿಧಾನವಾಗಿ ರಾಜ್ಯದಲ್ಲಿ ಚುನಾವಣೆ ಕಣ ಕಾವೇರುತ್ತಿದೆ. ಮುಖ್ಯವಾಗಿ ಕನ್ನಡ ಚಿತ್ರರಂಗದ ಕೆಲ ನಟ ನಟಿಯರು ಅಖಾಡಕ್ಕೆ ಇಳಿಯುವ ನಿರೀಕ್ಷೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳೂ ಸೇರಿದಂತೆ ಸಿನಿಮಾ ರಂಗದೊಳಗೂ ಚರ್ಚೆ ಆರಂಭವಾಗಿದೆ.
ಸುಮಲತಾ ಅಂಬರೀಶ್, ಪ್ರಕಾಶ್ ರೈ, ಉಪೇಂದ್ರ, ನಿಖಿಲ್ ಕುಮಾರ್ ಸೇರಿ ಹಲವರು ಹೆಸರುಗಳು ಈಗಾಗಲೇ ಕೇಳಿಬಂದಿದ್ದು, ಈ ಪೈಕಿ ಪ್ರಕಾಶ್ ರೈ ಈಗಾಗಲೇ ಅಖಾಡ ಪ್ರವೇಶಿಸಿಬಿಟ್ಟಿದ್ದಾರೆ. ಅವರು ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಪ್ರಚಾರ ಶುರು ಮಾಡಿಬಿಟ್ಟಿದ್ದಾರೆ.
ಉಪೇಂದ್ರ ತಮ್ಮ 'ಉತ್ತಮ ಪ್ರಜಾಕೀಯ ಪಕ್ಷ'ದಿಂದ ಸ್ಪರ್ಧಿಸುವಂತೆ ಸ್ಯಾಂಡಲ್ವುಡ್ ಕಲಾವಿದರಿಗೆ ಮತ್ತು ಸಾಮಾನ್ಯ ಜನರಿಗೂ ಆಹ್ವಾನ ನೀಡಿದ್ದಾರೆ. ಅಲ್ಲದೇ, ತಾವು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎನ್ನುವ ಕುರಿತು ಆಪ್ತರ ಜತೆ ಚರ್ಚೆ ನಡೆಸುತ್ತಿದ್ದಾರೆ. ಈ ನಡುವೆ ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಸ್ಪರ್ಧಿಸಬೇಕು ಎಂಬ ಒತ್ತಡ ಶುರುವಾಗಿದೆ.
ಸುಮಲತಾ ಅವರು ಸ್ಪರ್ಧಿಸುವ ವಿಚಾರವೇ ಹೆಚ್ಚು ಚರ್ಚೆಯಾಗುತ್ತಿದ್ದು, ಅವರ ಪರ ನಟ ದರ್ಶನ್ ಈಗಾಗಲೇ ಬ್ಯಾಟಿಂಗ್ ಶುರು ಮಾಡಿದ್ದಾರೆ. ಅವರಿಗೆ ಟಿಕೆಟ್ ಕೊಟ್ಟರೆ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು ಎಂದು ದರ್ಶನ್ ಹೇಳಿರುವ ಮಾತು ಮಂಡ್ಯ ಪ್ರದೇಶ ಮಾತ್ರವಲ್ಲದೆ ರಾಜ್ಯಾದ್ಯಂದ ಭಾರೀ ಸದ್ದು ಮಾಡುತ್ತಿದೆ. ಇನ್ನು ಮಂಡ್ಯದ ಕಾಂಗ್ರೆಸ್ ಮುಖಂಡರೂ ಸುಮಲತಾ ಅವರಿಗೆ ಟಿಕೆಟ್ ನೀಡುವಂತೆ ಪಕ್ಷದ ನಾಯಕರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಸುಮಲತಾ ಹೇಳಿದ್ದು ಹೀಗೆ.., ಅಂಬರೀಶ್ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿ ದಿನವೂ ಮನೆಗೆ ಬರುತ್ತಿದ್ದಾರೆ. ಅಂಬರೀಶ್ ಅವರಂತೆಯೇ ನೀವೂ ರಾಜಕೀಯಕ್ಕೆ ಬನ್ನಿ ಎಂದು ಒತ್ತಡ ಹೇರುತ್ತಿದ್ದಾರೆ. ಅಭಿಮಾನಿಗಳ ಪ್ರೀತಿಯನ್ನು ನಾನು ಕಳೆದುಕೊಳ್ಳಲು ನಾವು ತಯಾರಿಲ್ಲ. ಅಲ್ಲದೇ, ನಾನು ಯಾವತ್ತೂ ರಾಜಕಾರಣದ ಬಗ್ಗೆ ಯೋಚನೆಯನ್ನೂ ಮಾಡಿರಲಿಲ್ಲ. ಅಭಿಮಾನಿಗಳ ಒತ್ತಡದಿಂದ ಈಗ ಯೋಚಿಸಬೇಕಾಗಿದೆ. ದುಡುಕಿ ನಿರ್ಧಾರ ತಗೆದುಕೊಳ್ಳುವುದಕ್ಕಿಂತ ಆಲೋಚನೆ ಮಾಡಿ ಹೆಜ್ಜೆ ಇಡುವುದು ಉತ್ತಮ. ಪಕ್ಷದ ಮುಖಂಡರ ಜತೆ ಚರ್ಚೆ ಮಾಡುವೆ. ಅಂಬರೀಶ್ ಅವರು ಗುರುತಿಸಿಕೊಂಡಿದ್ದಿದ್ದು ಕಾಂಗ್ರೆಸ್ ಪಕ್ಷದಲ್ಲಿಯೇ. ಹಾಗಾಗಿ ಪಕ್ಷ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಕಾದು ನೋಡುವೆ. ಆದರೆ, ಚುನಾವಣೆಗೆ ಸ್ಪರ್ಧಿಸಿದರೆ ಮಂಡ್ಯ ಕ್ಷೇತ್ರದಿಂದ ಮಾತ್ರ. ರಾಜಕೀಯ ಕ್ಷೇತ್ರಕ್ಕೆ ಕಾಲಿಡುವುದಿದ್ದರೆ ಮಂಡ್ಯ ನೆಲದಿಂದ ಮಾತ್ರ' ಎಂದು ಸುಮಲತಾ ಹೇಳಿದ್ದಾರೆ.
ಇನ್ನೊಂದೆಡೆ ಸುಮಲತಾ ಅವರು ಯಾವ ಪಕ್ಷದಿಂದ ಸ್ಪರ್ಧಿಸಿದರೂ ಅವರ ಬೆನ್ನಿಗೆ ಇಡೀ ಸ್ಯಾಂಡಲ್ವುಡ್ ನಿಲ್ಲುವ ಸಾಧ್ಯತೆ ಇದೆ. ಪಕ್ಷಬೇಧ ಮರೆತು ಅವರನ್ನು ಬೆಂಬಲಿಸುವ ಯಾವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂದು ಸ್ಯಾಂಡಲ್ವುಡ್ ಪ್ರಮುಖರೊಬ್ಬರು ಹೇಳುವ ಮಾತು. ಮಂಡ್ಯ ಕ್ಷೇತ್ರದಿಂದಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ಕುಮಾರ್ ಅವರನ್ನು ಕಣಕ್ಕಿಳಿಸಬೇಕು ಎಂಬ ಚರ್ಚೆ ಕೂಡ ಶುರುವಾಗಿದೆ. ಹಾಗಾಗಿ ಮಂಡ್ಯ ಕ್ಷೇತ್ರ ಯಾರ ಪಾಲಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ನಾನು ರಾಜಕೀಯ ಕ್ಷೇತ್ರಕ್ಕೆ ಬರಬೇಕು ಎಂದು ಅಂಬರೀಶ್ ಅವರ ಅಭಿಮಾನಿಗಳ ಒತ್ತಡ ಹಾಕುತ್ತಿರುವುದು ನಿಜ. ತಕ್ಷಣಕ್ಕೆ ನಿರ್ಧಾರ ತಗೆದುಕೊಳ್ಳುವುದಕ್ಕಿಂತ ಯೋಚಿಸಬೇಕಾಗಿದೆ. ನಾನು ರಾಯಕೀಯಕ್ಕೆ ಬಂದರೆ ಅದು ಮಂಡ್ಯ ನೆಲದಿಂದಲೇ ಬರುತ್ತೇನೆ- ಸುಮಲತಾ ಅಂಬರೀಶ್, ನಟಿ
ಯಾರ್ಯಾರು ಯಾವ ಪಕ್ಷದಲ್ಲಿ?
ಕೆಲ ನಟ ನಟಿಯರು ಆಯಾ ಪಕ್ಷಗಳಿಂದ ಟಿಕೆಟ್ ಪಡೆಯಲು ಹರಸಾಹಸ ಪಡುತ್ತಿದ್ದರೆ, ಇನ್ನು ಕೆಲ ಸ್ಟಾರ್ಗಳು ಪ್ರಚಾರಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಬಿಜೆಪಿಯಲ್ಲಿ ತಾರಾ, ಶ್ರುತಿ, ಜಗ್ಗೇಶ್, ಸಾಯಿ ಕುಮಾರ್, ಭಾವನಾ, ಸುನೀಲ್ ಪುರಾಣಿಕ್, ಕುಮಾರ ಬಂಗಾರಪ್ಪ ಸೇರಿ ಹಲವು ನಟ ನಟಿಯರು ಇದ್ದಾರೆ. ಕಾಂಗ್ರೆಸ್ನಲ್ಲಿ ಉಮಾಶ್ರೀ, ಜಯಮಾಲಾ, ಬಿ.ಸಿ.ಪಾಟೀಲ್ ಸಕ್ರೀಯವಾಗಿದ್ದಾರೆ. ಜೆಡಿಎಸ್ನಿಂದ ನಿಖಿಲ್ ಕುಮಾರ್ ಸ್ವಾಮಿ ಎಂಟ್ರಿ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಲಾವಿದರು ವಿವಿಧ ಪಕ್ಷಗಳನ್ನು ಸೇರಿಕೊಳ್ಳುವ ಸೂಚನೆಗಳೂ ಇವೆ.
ಲೋಕಸಭೆ ಚುನಾವಣೆಗೆ ಇನ್ನೂ ಕೆಲ ತಿಂಗಳು ಬಾಕಿ ಇರುವಂತೆಯೇ ನಿಧಾನವಾಗಿ ರಾಜ್ಯದಲ್ಲಿ ಚುನಾವಣೆ ಕಣ ಕಾವೇರುತ್ತಿದೆ. ಮುಖ್ಯವಾಗಿ ಕನ್ನಡ ಚಿತ್ರರಂಗದ ಕೆಲ ನಟ ನಟಿಯರು ಅಖಾಡಕ್ಕೆ ಇಳಿಯುವ ನಿರೀಕ್ಷೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳೂ ಸೇರಿದಂತೆ ಸಿನಿಮಾ ರಂಗದೊಳಗೂ ಚರ್ಚೆ ಆರಂಭವಾಗಿದೆ.
ಸುಮಲತಾ ಅಂಬರೀಶ್, ಪ್ರಕಾಶ್ ರೈ, ಉಪೇಂದ್ರ, ನಿಖಿಲ್ ಕುಮಾರ್ ಸೇರಿ ಹಲವರು ಹೆಸರುಗಳು ಈಗಾಗಲೇ ಕೇಳಿಬಂದಿದ್ದು, ಈ ಪೈಕಿ ಪ್ರಕಾಶ್ ರೈ ಈಗಾಗಲೇ ಅಖಾಡ ಪ್ರವೇಶಿಸಿಬಿಟ್ಟಿದ್ದಾರೆ. ಅವರು ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಪ್ರಚಾರ ಶುರು ಮಾಡಿಬಿಟ್ಟಿದ್ದಾರೆ.
ಉಪೇಂದ್ರ ತಮ್ಮ 'ಉತ್ತಮ ಪ್ರಜಾಕೀಯ ಪಕ್ಷ'ದಿಂದ ಸ್ಪರ್ಧಿಸುವಂತೆ ಸ್ಯಾಂಡಲ್ವುಡ್ ಕಲಾವಿದರಿಗೆ ಮತ್ತು ಸಾಮಾನ್ಯ ಜನರಿಗೂ ಆಹ್ವಾನ ನೀಡಿದ್ದಾರೆ. ಅಲ್ಲದೇ, ತಾವು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎನ್ನುವ ಕುರಿತು ಆಪ್ತರ ಜತೆ ಚರ್ಚೆ ನಡೆಸುತ್ತಿದ್ದಾರೆ. ಈ ನಡುವೆ ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಸ್ಪರ್ಧಿಸಬೇಕು ಎಂಬ ಒತ್ತಡ ಶುರುವಾಗಿದೆ.
ಸುಮಲತಾ ಅವರು ಸ್ಪರ್ಧಿಸುವ ವಿಚಾರವೇ ಹೆಚ್ಚು ಚರ್ಚೆಯಾಗುತ್ತಿದ್ದು, ಅವರ ಪರ ನಟ ದರ್ಶನ್ ಈಗಾಗಲೇ ಬ್ಯಾಟಿಂಗ್ ಶುರು ಮಾಡಿದ್ದಾರೆ. ಅವರಿಗೆ ಟಿಕೆಟ್ ಕೊಟ್ಟರೆ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು ಎಂದು ದರ್ಶನ್ ಹೇಳಿರುವ ಮಾತು ಮಂಡ್ಯ ಪ್ರದೇಶ ಮಾತ್ರವಲ್ಲದೆ ರಾಜ್ಯಾದ್ಯಂದ ಭಾರೀ ಸದ್ದು ಮಾಡುತ್ತಿದೆ. ಇನ್ನು ಮಂಡ್ಯದ ಕಾಂಗ್ರೆಸ್ ಮುಖಂಡರೂ ಸುಮಲತಾ ಅವರಿಗೆ ಟಿಕೆಟ್ ನೀಡುವಂತೆ ಪಕ್ಷದ ನಾಯಕರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಸುಮಲತಾ ಹೇಳಿದ್ದು ಹೀಗೆ.., ಅಂಬರೀಶ್ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿ ದಿನವೂ ಮನೆಗೆ ಬರುತ್ತಿದ್ದಾರೆ. ಅಂಬರೀಶ್ ಅವರಂತೆಯೇ ನೀವೂ ರಾಜಕೀಯಕ್ಕೆ ಬನ್ನಿ ಎಂದು ಒತ್ತಡ ಹೇರುತ್ತಿದ್ದಾರೆ. ಅಭಿಮಾನಿಗಳ ಪ್ರೀತಿಯನ್ನು ನಾನು ಕಳೆದುಕೊಳ್ಳಲು ನಾವು ತಯಾರಿಲ್ಲ. ಅಲ್ಲದೇ, ನಾನು ಯಾವತ್ತೂ ರಾಜಕಾರಣದ ಬಗ್ಗೆ ಯೋಚನೆಯನ್ನೂ ಮಾಡಿರಲಿಲ್ಲ. ಅಭಿಮಾನಿಗಳ ಒತ್ತಡದಿಂದ ಈಗ ಯೋಚಿಸಬೇಕಾಗಿದೆ. ದುಡುಕಿ ನಿರ್ಧಾರ ತಗೆದುಕೊಳ್ಳುವುದಕ್ಕಿಂತ ಆಲೋಚನೆ ಮಾಡಿ ಹೆಜ್ಜೆ ಇಡುವುದು ಉತ್ತಮ. ಪಕ್ಷದ ಮುಖಂಡರ ಜತೆ ಚರ್ಚೆ ಮಾಡುವೆ. ಅಂಬರೀಶ್ ಅವರು ಗುರುತಿಸಿಕೊಂಡಿದ್ದಿದ್ದು ಕಾಂಗ್ರೆಸ್ ಪಕ್ಷದಲ್ಲಿಯೇ. ಹಾಗಾಗಿ ಪಕ್ಷ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಕಾದು ನೋಡುವೆ. ಆದರೆ, ಚುನಾವಣೆಗೆ ಸ್ಪರ್ಧಿಸಿದರೆ ಮಂಡ್ಯ ಕ್ಷೇತ್ರದಿಂದ ಮಾತ್ರ. ರಾಜಕೀಯ ಕ್ಷೇತ್ರಕ್ಕೆ ಕಾಲಿಡುವುದಿದ್ದರೆ ಮಂಡ್ಯ ನೆಲದಿಂದ ಮಾತ್ರ' ಎಂದು ಸುಮಲತಾ ಹೇಳಿದ್ದಾರೆ.
ಇನ್ನೊಂದೆಡೆ ಸುಮಲತಾ ಅವರು ಯಾವ ಪಕ್ಷದಿಂದ ಸ್ಪರ್ಧಿಸಿದರೂ ಅವರ ಬೆನ್ನಿಗೆ ಇಡೀ ಸ್ಯಾಂಡಲ್ವುಡ್ ನಿಲ್ಲುವ ಸಾಧ್ಯತೆ ಇದೆ. ಪಕ್ಷಬೇಧ ಮರೆತು ಅವರನ್ನು ಬೆಂಬಲಿಸುವ ಯಾವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂದು ಸ್ಯಾಂಡಲ್ವುಡ್ ಪ್ರಮುಖರೊಬ್ಬರು ಹೇಳುವ ಮಾತು. ಮಂಡ್ಯ ಕ್ಷೇತ್ರದಿಂದಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ಕುಮಾರ್ ಅವರನ್ನು ಕಣಕ್ಕಿಳಿಸಬೇಕು ಎಂಬ ಚರ್ಚೆ ಕೂಡ ಶುರುವಾಗಿದೆ. ಹಾಗಾಗಿ ಮಂಡ್ಯ ಕ್ಷೇತ್ರ ಯಾರ ಪಾಲಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ನಾನು ರಾಜಕೀಯ ಕ್ಷೇತ್ರಕ್ಕೆ ಬರಬೇಕು ಎಂದು ಅಂಬರೀಶ್ ಅವರ ಅಭಿಮಾನಿಗಳ ಒತ್ತಡ ಹಾಕುತ್ತಿರುವುದು ನಿಜ. ತಕ್ಷಣಕ್ಕೆ ನಿರ್ಧಾರ ತಗೆದುಕೊಳ್ಳುವುದಕ್ಕಿಂತ ಯೋಚಿಸಬೇಕಾಗಿದೆ. ನಾನು ರಾಯಕೀಯಕ್ಕೆ ಬಂದರೆ ಅದು ಮಂಡ್ಯ ನೆಲದಿಂದಲೇ ಬರುತ್ತೇನೆ- ಸುಮಲತಾ ಅಂಬರೀಶ್, ನಟಿ
ಯಾರ್ಯಾರು ಯಾವ ಪಕ್ಷದಲ್ಲಿ?
ಕೆಲ ನಟ ನಟಿಯರು ಆಯಾ ಪಕ್ಷಗಳಿಂದ ಟಿಕೆಟ್ ಪಡೆಯಲು ಹರಸಾಹಸ ಪಡುತ್ತಿದ್ದರೆ, ಇನ್ನು ಕೆಲ ಸ್ಟಾರ್ಗಳು ಪ್ರಚಾರಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಬಿಜೆಪಿಯಲ್ಲಿ ತಾರಾ, ಶ್ರುತಿ, ಜಗ್ಗೇಶ್, ಸಾಯಿ ಕುಮಾರ್, ಭಾವನಾ, ಸುನೀಲ್ ಪುರಾಣಿಕ್, ಕುಮಾರ ಬಂಗಾರಪ್ಪ ಸೇರಿ ಹಲವು ನಟ ನಟಿಯರು ಇದ್ದಾರೆ. ಕಾಂಗ್ರೆಸ್ನಲ್ಲಿ ಉಮಾಶ್ರೀ, ಜಯಮಾಲಾ, ಬಿ.ಸಿ.ಪಾಟೀಲ್ ಸಕ್ರೀಯವಾಗಿದ್ದಾರೆ. ಜೆಡಿಎಸ್ನಿಂದ ನಿಖಿಲ್ ಕುಮಾರ್ ಸ್ವಾಮಿ ಎಂಟ್ರಿ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಲಾವಿದರು ವಿವಿಧ ಪಕ್ಷಗಳನ್ನು ಸೇರಿಕೊಳ್ಳುವ ಸೂಚನೆಗಳೂ ಇವೆ.