ಆ್ಯಪ್ನಗರ

Sumalatha: ಅವರಿಗೊಂದು ಆಸೆ ಇತ್ತು...ಗದ್ಗದಿತರಾದ ಸುಮಲತಾ ಅಂಬರೀಶ್

ಅವರಿಗೊಂದು ಆಸೆಯಿತ್ತು. ಅಭಿ ಮೊದಲ ಸಿನಿಮಾ ನೋಡುವ ಕನಸಿತ್ತು. ಅಭಿ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದು ಭಾವುಕರಾಗಿ ಸುಮಲತಾ ಅಂಬರೀಶ್ ನುಡಿದರು. ಮಂಡ್ಯಕ್ಕೂ ಕರೆದುಕೊಂಡು ಹೋಗಿ ಅಂತಿಮ ದರ್ಶನ ಮಾಡಿಸಿದ್ದು ನಾನು ಎಂದೆಂದಿಗೂ ಮರೆಯಲ್ಲ.

Vijaya Karnataka Web 30 Nov 2018, 2:58 pm
ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ 'ಅಂಬಿಗೆ ನಮನ' ಕಾರ್ಯಕ್ರಮದಲ್ಲಿ ಭಾವುಕರಾಗಿ ಮಾತು ಆರಂಭಿಸಿದ ಸುಮಲತಾ ಅಂಬರೀಷ್, ಅವರ ಪ್ರಯಾಣದ ಬಗ್ಗೆ ಹೇಳಬೇಕೆಂದರೆ ನನಗಿಂತಲೂ ಚೆನ್ನಾಗಿ ಬಲ್ಲವರಿದ್ದಾರೆ. ಅವರ ಸಿನಿಮಾ ಪ್ರಯಾಣ ಆರಂಭವಾಗಿ ಎಷ್ಟೋ ವರ್ಷಗಳಾಗಿದ್ದವು.
Vijaya Karnataka Web ಅಂಬಿಗೆ ನಮನ ಸಲ್ಲಿಸಿದ ಸುಮಲತಾ ಅಂಬರೀಶ್

ಅವರಿಗೆ ಬೆನ್ನೆಲುಬಾದ ಕರುನಾಡ ಜನತೆ, ನಿರ್ದೇಶಕರು, ತಂತ್ರಜ್ಞರಿಗೆ ಧನ್ಯವಾದಗಳು ತಿಳಿಸಿದರು.

ಕ್ರೀಡೆಯಲ್ಲಿ ಅವರಿಗೆ ತುಂಬಾ ಆಸಕ್ತಿ ಇತ್ತು. ಅವರು ನನಗೆ ಎಲ್ಲವೂ ಆಗಿದ್ದರು. ಅವರು ರಾಜನಾಗಿಯೇ ಬಂದು ರಾಜನಾಗಿಯೇ ಹೊರಟರು. ಅವರನ್ನು ರಾಜನಾಗಿಯೇ ಕಳಿಸಿದ್ದಕ್ಕೆ ಸಿಎಂಗೆ ದೊಡ್ಡ ನಮನ. ನನಗೆ ಸ್ನೇಹಿತನಾಗಿ, ಅಣ್ಣನಾಗಿ, ತಂದೆಯಾಗಿದ್ದರು ಅಂಬಿ. ಅವರು ಎಲ್ಲಿದ್ದರೂ ಚೆನ್ನಾಗಿ ಇರಲಿ. ಎಲ್ಲರಿಗೂ ಸ್ನೇಹಿತರಾಗಿದ್ದರು. ನನಗೆ ಒಬ್ಬ ಸ್ನೇಹಿತ ಎನ್ನಲೇ, ಲೈಫ್ ಪಾರ್ಟನರ್ ಎನ್ನಲೇ, ತಂದೆಯಾಗಿ, ಅಣ್ಣನಾಗಿ, ಎಲ್ಲವೂ ಆಗಿದ್ದರು ಅಂಬರೀಶ್ ಎಂದು ನೆನಪಿಸಿಕೊಂಡರು.


ಅವರಿಗೊಂದು ಆಸೆಯಿತ್ತು. ಅಭಿ ಮೊದಲ ಸಿನಿಮಾ ನೋಡುವ ಕನಸಿತ್ತು. ಅಭಿ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದು ಭಾವುಕರಾಗಿ ಸುಮಲತಾ ಅಂಬರೀಶ್ ನುಡಿದರು. ಮಂಡ್ಯಕ್ಕೂ ಕರೆದುಕೊಂಡು ಹೋಗಿ ಅಂತಿಮ ದರ್ಶನ ಮಾಡಿಸಿದ್ದು ನಾನು ಎಂದೆಂದಿಗೂ ಮರೆಯಲ್ಲ. ಕುಮಾರಣ್ಣನಿಗೆ ಮತ್ತೊಮ್ಮೆ ಧನ್ಯವಾದಗಳು ಎಂದಿದ್ದಾರೆ.

ರಾಜಕೀಯ ಮತ್ತು ಚಿತ್ರರಂಗದ ಕೊಂಡಿಯಂತಿದ್ದ ಅಂಬಿಗೆ ನಮನ ಸಲ್ಲಿಸಲು ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರದ ಹಲವಾರು ಗಣ್ಯರು ಆಗಮಿಸಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಕುಮಾರಸ್ವಾಮಿ, ಕಲಾವಿದರಾದ ಜಗ್ಗೇಶ್, ದೊಡ್ಡಣ್ಣ, ಉಮಾಶ್ರೀ, ಶಿವರಾಜ್ ಕುಮಾರ್, ಬಿ.ಸರೋಜಾದೇವಿ, ಜೈಗದೀಶ್, ಮುರಳಿ, ಸುಂದರ ರಾಜ್, ಸಚಿವರಾದ ಸಾ.ರಾ.ಮಹೇಶ್, ಪುಟ್ಟರಾಜು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತಿತರರು ಭಾಗಿಯಾಗಿದ್ದಾರೆ. ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕೂಡ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌