ಯಶ್-ದರ್ಶನ್ ಬಗ್ಗೆ ಚುನಾವಣೆ ಬಳಿಕ ಸುಮಲತಾ ಅಂಬರೀಷ್ ಹೇಳಿದ್ದೇನು?
ಅಂಬರೀಷ್ ಅಭಿಮಾನಿಗಳಿಗೆ ಹೇಗೆ ನಾನು ಕೃತಜ್ಞತೆ ಸಲ್ಲಿಸಲಿ.. ಯಾವ ರೂಪದಲ್ಲಿ ಕೃತಜ್ಞತೆ ಸಲ್ಲಿಸಲಿ ..ಮನೆಯ ಸದಸ್ಯರು ಅಂಬರೀಷ್ ಅಭಿಮಾನಿಗಳು.. ನನಗೆ ಗೊತ್ತು, ರಾಜ್ಯದ ಮೂಲೆ ಮೂಲೆಗಳಿಂದ ಅಂಬರೀಷ್ ಅಭಿಮಾನಿಗಳು ನನ್ನ ಈ ನಡೆಯನ್ನು ಮೆಚ್ಚಿ ನನ್ನನ್ನು ಹುರಿದುಂಬಿಸಿದ್ದಾರೆ..
Vijaya Karnataka Web 20 Apr 2019, 12:02 pm
ಮಂಡ್ಯ ಲೋಕಸಭೆ ಚುನಾವಣೆ ಮುಗಿದಿದೆ. ಇನ್ನೇನಿದ್ದರೂ ಗೆಲ್ಲೋರು ಯಾರು ಎಂಬು ಕುತೂಹಲವಷ್ಟೆ ಉಳಿದಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲ್ಲುತ್ತಾರೋ ಅಥವಾ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಅವರಾ ಎಂಬುದನ್ನು ನೋಡುವುದಷ್ಟೇ ಬಾಕಿ ಉಳಿದಿದೆ. ಈ ಫಲಿತಾಂಶ ಮೇ 23ಕ್ಕೆ ಸಿಗಲಿದೆ.
ಮಂಡ್ಯ ಚುನಾವಣೆಯಲ್ಲಿ ಸುಮಲತಾ ಬೆಂಬಲಕ್ಕೆ ನಿಂತು, ತಮ್ಮದೇ ಅಮ್ಮ ಎಂಬ ಪ್ರೀತಿಯಿಂದ ಪ್ರಚಾರಕಾರ್ಯ ನಡೆಸಿಕೊಟ್ಟ ನಟ ದರ್ಶನ್ ಮತ್ತು ಯಶ್ ಅವರಿಬ್ಬರಿಗೂ ನಟಿ ಸುಮಲತಾ ಕೃತಜ್ಞತೆ ತಿಳಿಸಿದ್ದಾರೆ. ಕೇವಲ ಸ್ಟಾರ್ ನಟರಿಗೆ ಮಾತ್ರವಲ್ಲದೇ, ಜೋಡೆತ್ತುಗಳ ಅಭಿಮಾನಿ ಬಳಗ ಹಾಗೂ ಅಂಬರೀಷ್ ಅಭಿಮಾನಿಗಳಿಗೂ ಸುಮಲತಾ ಧನ್ಯವಾದ ತಿಳಿಸಿದ್ದಾರೆ.
ತಮ್ಮ ಫೇಸ್ ಬುಕ್ ಖಾತೆ ಮೂಲಕ ಕೃತಜ್ಞತೆ ತಿಳಿಸಿರುವ ಸುಮಲತಾ ಅವರು "ನಾನು ವಿಶೇಷವಾಗಿ ಧನ್ಯವಾದಗಳನ್ನು ಹೇಳಬೇಕಾಗಿರುವುದು ದರ್ಶನ್ ಅಭಿಮಾನಿಗಳಿಗೆ ಮತ್ತು ಯಶ್ ಅಭಿಮಾನಿಗಳಿಗೆ. ಅಷ್ಟೇ ಅಲ್ಲ, ನನ್ನ ಪತಿ ಅಂಬರೀಷ್ ಅಭಿಮಾನಿಗಳಿಗೂ ಕೂಡ. ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿರುವ ಕ್ಯಾಬ್ ಮತ್ತು ಆಟೊ ಡ್ರೈವರ್ಸ್, ಹೋಟೆಲ್ಗಳಲ್ಲಿ ಹಾಗೂ ಇನ್ನಿತರ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ನೀವೆಲ್ಲರೂ ಅಂದರೆ ಮಂಡ್ಯದವರು ತುಂಬಾ ತುಂಬಾ ಅಂದರೆ, ನಿಮ್ಮದೇ ಮನೆಯ ಚುನಾವಣೆಯ ರೀತಿಯಲ್ಲಿ ನನ್ನ ಚುನಾವಣೆಯನ್ನು ಪರಿಗಣಿಸಿ ನಡೆಸಿ ಕೊಟ್ಟಿದ್ದೀರಿ. ನಿಮಗೆಲ್ಲರಿಗೂ ನನ್ನ ಅಂತರಾಳದ ಅಭಿನಂದನೆಗಳು ಕೃತಜ್ಞತೆಗಳು'' ಎಂದು ಸುಮಲತಾ ಅಂಬರೀಷ್ ತಿಳಿಸಿದ್ದಾರೆ.
ಇನ್ನು, ಅಂಬರೀಷ್ ಅಭಿಮಾನಿಗಳಿಗೆ ವಿಶೇಷ ಧನ್ಯವಾದ ತಿಳಿಸಿರುವ ಸುಮಲತಾ, "ನೀವೆಲ್ಲಾ ನಮ್ಮ ಮನೆ ಸದಸ್ಯರು ಇದ್ದಂತೆ" ಎಂದಿದ್ದಾರೆ. ಜೊತೆಗೆ, "ತುಂಬಾ ಅಭಿಮಾನಿಗಳದ್ದು ಒಂದೇ ಪ್ರಶ್ನೆ- ಅಂಬರೀಷ್ ಅಭಿಮಾನಿಗಳಿಗೆ ನೀವು ಕೃತಜ್ಞತೆ ಸಲ್ಲಿಸಿಲ್ಲ ಅಂತ ...ಅಂಬರೀಷ್ ಅಭಿಮಾನಿಗಳಿಗೆ ಹೇಗೆ ನಾನು ಕೃತಜ್ಞತೆ ಸಲ್ಲಿಸಲಿ.. ಯಾವ ರೂಪದಲ್ಲಿ ಕೃತಜ್ಞತೆ ಸಲ್ಲಿಸಲಿ ..ಮನೆಯ ಸದಸ್ಯರು ಅಂಬರೀಷ್ ಅಭಿಮಾನಿಗಳು.. ನನಗೆ ಗೊತ್ತು, ರಾಜ್ಯದ ಮೂಲೆ ಮೂಲೆಗಳಿಂದ ಅಂಬರೀಷ್ ಅಭಿಮಾನಿಗಳು ನನ್ನ ಈ ನಡೆಯನ್ನು ಮೆಚ್ಚಿ ನನ್ನನ್ನು ಹುರಿದುಂಬಿಸಿದ್ದಾರೆ.. ಮಂಡ್ಯದ ಜನತೆಯಲ್ಲಿ ಸದಾ ವಿನಂತಿಸಿಕೊಂಡಿದ್ದಾರೆ ಅಮ್ಮನನ್ನು ಗೆಲ್ಲಿಸಿ, ಅತ್ತಿಗೆಯನ್ನು ಗೆಲ್ಲಿಸಿ, ಅಕ್ಕನನ್ನು ಗೆಲ್ಲಿಸಿ ಎಂದು ...
ಈ ಪ್ರೀತಿ ಸಂಪಾದನೆ ಅಂಬರೀಷ್ ಆಸ್ತಿ ಆಸ್ತಿಯನ್ನು ಕಾಪಾಡಿಕೊಳ್ಳುವುದು ನನ್ನ ಧರ್ಮ .. ಅಂಬರೀಷ್ ಅನ್ನುವ ಶಕ್ತಿಯೊಂದಿಗೆ ದರ್ಶನ್, ಯಶ್ ಅನ್ನುವ ಶಕ್ತಿಯೂ ಒಟ್ಟಾಗಿದೆ ...ಈಗ ಪ್ರತಿಯೊಬ್ಬರೂ ನಮ್ಮ ಮನೆಯ ಸದಸ್ಯರೇ ..ಆ ಸದಸ್ಯರಲ್ಲಿ ಯಾವುದೇ ಭೇದ ಭಾವಗಳಿಲ್ಲ ಎಲ್ಲರೂ ಒಟ್ಟಾಗಿ ನನ್ನ ಬೆಂಗಾವಲಾಗಿ ನಿಂತು ನನ್ನನ್ನು ಬೆಂಬಲಿಸಿದ್ದೀರಿ ...ಅಷ್ಟೇ ಅಲ್ಲದೆ ನನ್ನ ಈ ನಡೆಯನ್ನು ನನ್ನ ಹೋರಾಟವನ್ನು ಮೆಚ್ಚಿ ಸಾಕಷ್ಟು ಜನ ರಾಜ್ಯದ ಮೂಲೆ ಮೂಲೆಗಳಿಂದ ನನ್ನನ್ನು ಬೆಂಬಲಿಸಿದ್ದಾರೆ.. ಅವರಿಗೂ ನನ್ನ ವಿಶೇಷವಾದ ಕೃತಜ್ಞತೆಗಳು..' ಎಂದು ಸುಮಲತಾ ಅಂಬರೀಷ್ ಅವರು ಬರೆದುಕೊಂಡಿದ್ದಾರೆ.
ಮಂಡ್ಯ ಚುನಾವಣೆಯಲ್ಲಿ ಸುಮಲತಾ ಬೆಂಬಲಕ್ಕೆ ನಿಂತು, ತಮ್ಮದೇ ಅಮ್ಮ ಎಂಬ ಪ್ರೀತಿಯಿಂದ ಪ್ರಚಾರಕಾರ್ಯ ನಡೆಸಿಕೊಟ್ಟ ನಟ ದರ್ಶನ್ ಮತ್ತು ಯಶ್ ಅವರಿಬ್ಬರಿಗೂ ನಟಿ ಸುಮಲತಾ ಕೃತಜ್ಞತೆ ತಿಳಿಸಿದ್ದಾರೆ. ಕೇವಲ ಸ್ಟಾರ್ ನಟರಿಗೆ ಮಾತ್ರವಲ್ಲದೇ, ಜೋಡೆತ್ತುಗಳ ಅಭಿಮಾನಿ ಬಳಗ ಹಾಗೂ ಅಂಬರೀಷ್ ಅಭಿಮಾನಿಗಳಿಗೂ ಸುಮಲತಾ ಧನ್ಯವಾದ ತಿಳಿಸಿದ್ದಾರೆ.
ತಮ್ಮ ಫೇಸ್ ಬುಕ್ ಖಾತೆ ಮೂಲಕ ಕೃತಜ್ಞತೆ ತಿಳಿಸಿರುವ ಸುಮಲತಾ ಅವರು "ನಾನು ವಿಶೇಷವಾಗಿ ಧನ್ಯವಾದಗಳನ್ನು ಹೇಳಬೇಕಾಗಿರುವುದು ದರ್ಶನ್ ಅಭಿಮಾನಿಗಳಿಗೆ ಮತ್ತು ಯಶ್ ಅಭಿಮಾನಿಗಳಿಗೆ. ಅಷ್ಟೇ ಅಲ್ಲ, ನನ್ನ ಪತಿ ಅಂಬರೀಷ್ ಅಭಿಮಾನಿಗಳಿಗೂ ಕೂಡ. ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿರುವ ಕ್ಯಾಬ್ ಮತ್ತು ಆಟೊ ಡ್ರೈವರ್ಸ್, ಹೋಟೆಲ್ಗಳಲ್ಲಿ ಹಾಗೂ ಇನ್ನಿತರ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ನೀವೆಲ್ಲರೂ ಅಂದರೆ ಮಂಡ್ಯದವರು ತುಂಬಾ ತುಂಬಾ ಅಂದರೆ, ನಿಮ್ಮದೇ ಮನೆಯ ಚುನಾವಣೆಯ ರೀತಿಯಲ್ಲಿ ನನ್ನ ಚುನಾವಣೆಯನ್ನು ಪರಿಗಣಿಸಿ ನಡೆಸಿ ಕೊಟ್ಟಿದ್ದೀರಿ. ನಿಮಗೆಲ್ಲರಿಗೂ ನನ್ನ ಅಂತರಾಳದ ಅಭಿನಂದನೆಗಳು ಕೃತಜ್ಞತೆಗಳು'' ಎಂದು ಸುಮಲತಾ ಅಂಬರೀಷ್ ತಿಳಿಸಿದ್ದಾರೆ.
ಇನ್ನು, ಅಂಬರೀಷ್ ಅಭಿಮಾನಿಗಳಿಗೆ ವಿಶೇಷ ಧನ್ಯವಾದ ತಿಳಿಸಿರುವ ಸುಮಲತಾ, "ನೀವೆಲ್ಲಾ ನಮ್ಮ ಮನೆ ಸದಸ್ಯರು ಇದ್ದಂತೆ" ಎಂದಿದ್ದಾರೆ. ಜೊತೆಗೆ, "ತುಂಬಾ ಅಭಿಮಾನಿಗಳದ್ದು ಒಂದೇ ಪ್ರಶ್ನೆ- ಅಂಬರೀಷ್ ಅಭಿಮಾನಿಗಳಿಗೆ ನೀವು ಕೃತಜ್ಞತೆ ಸಲ್ಲಿಸಿಲ್ಲ ಅಂತ ...ಅಂಬರೀಷ್ ಅಭಿಮಾನಿಗಳಿಗೆ ಹೇಗೆ ನಾನು ಕೃತಜ್ಞತೆ ಸಲ್ಲಿಸಲಿ.. ಯಾವ ರೂಪದಲ್ಲಿ ಕೃತಜ್ಞತೆ ಸಲ್ಲಿಸಲಿ ..ಮನೆಯ ಸದಸ್ಯರು ಅಂಬರೀಷ್ ಅಭಿಮಾನಿಗಳು.. ನನಗೆ ಗೊತ್ತು, ರಾಜ್ಯದ ಮೂಲೆ ಮೂಲೆಗಳಿಂದ ಅಂಬರೀಷ್ ಅಭಿಮಾನಿಗಳು ನನ್ನ ಈ ನಡೆಯನ್ನು ಮೆಚ್ಚಿ ನನ್ನನ್ನು ಹುರಿದುಂಬಿಸಿದ್ದಾರೆ.. ಮಂಡ್ಯದ ಜನತೆಯಲ್ಲಿ ಸದಾ ವಿನಂತಿಸಿಕೊಂಡಿದ್ದಾರೆ ಅಮ್ಮನನ್ನು ಗೆಲ್ಲಿಸಿ, ಅತ್ತಿಗೆಯನ್ನು ಗೆಲ್ಲಿಸಿ, ಅಕ್ಕನನ್ನು ಗೆಲ್ಲಿಸಿ ಎಂದು ...
ಈ ಪ್ರೀತಿ ಸಂಪಾದನೆ ಅಂಬರೀಷ್ ಆಸ್ತಿ ಆಸ್ತಿಯನ್ನು ಕಾಪಾಡಿಕೊಳ್ಳುವುದು ನನ್ನ ಧರ್ಮ .. ಅಂಬರೀಷ್ ಅನ್ನುವ ಶಕ್ತಿಯೊಂದಿಗೆ ದರ್ಶನ್, ಯಶ್ ಅನ್ನುವ ಶಕ್ತಿಯೂ ಒಟ್ಟಾಗಿದೆ ...ಈಗ ಪ್ರತಿಯೊಬ್ಬರೂ ನಮ್ಮ ಮನೆಯ ಸದಸ್ಯರೇ ..ಆ ಸದಸ್ಯರಲ್ಲಿ ಯಾವುದೇ ಭೇದ ಭಾವಗಳಿಲ್ಲ ಎಲ್ಲರೂ ಒಟ್ಟಾಗಿ ನನ್ನ ಬೆಂಗಾವಲಾಗಿ ನಿಂತು ನನ್ನನ್ನು ಬೆಂಬಲಿಸಿದ್ದೀರಿ ...ಅಷ್ಟೇ ಅಲ್ಲದೆ ನನ್ನ ಈ ನಡೆಯನ್ನು ನನ್ನ ಹೋರಾಟವನ್ನು ಮೆಚ್ಚಿ ಸಾಕಷ್ಟು ಜನ ರಾಜ್ಯದ ಮೂಲೆ ಮೂಲೆಗಳಿಂದ ನನ್ನನ್ನು ಬೆಂಬಲಿಸಿದ್ದಾರೆ.. ಅವರಿಗೂ ನನ್ನ ವಿಶೇಷವಾದ ಕೃತಜ್ಞತೆಗಳು..' ಎಂದು ಸುಮಲತಾ ಅಂಬರೀಷ್ ಅವರು ಬರೆದುಕೊಂಡಿದ್ದಾರೆ.