ಆ್ಯಪ್ನಗರ

ಬೆಂಗಳೂರಿಗೆ ಬಂದಿದ್ದ ರಜನಿಕಾಂತ್‌: ಶಸ್ತ್ರಚಿಕಿತ್ಸೆಗೊಳಗಾದ ಅಣ್ಣನ ಕುಶಲ ವಿಚಾರಿಸಿದ ಸೂಪರ್‌ಸ್ಟಾರ್

ಸೂಪರ್‌ ಸ್ಟಾರ್‌ ರಜನಿಕಾಂತ್‌ ಬೆಂಗಳೂರಿಗೆ ಆಗಮಿಸಿದ್ದರು. ಈ ಬಾರಿ ಯಾವುದೇ ಚಿತ್ರ ಅಥವಾ ಸಮಾರಂಭದಲ್ಲಿ ಭಾಗವಹಿಸಲು ಬಂದಿರಲಿಲ್ಲ. ತಮ್ಮ ಸಹೋದರನ ಆರೋಗ್ಯ ವಿಚಾರಿಸಲು ರಜನಿಕಾಂತ್‌ ಬಂದಿದ್ದರು.

Vijaya Karnataka Web 28 Aug 2019, 10:24 pm
ಬೆಂಗಳೂರು: ಭಾರತೀಯ ಚಿತ್ರರಂಗದ ಸೂಪರ್‌ ಸ್ಟಾರ್ ರಜನಿಕಾಂತ್‌ ಬೆಂಗಳೂರಿಗೆ ಬಂದಿದ್ದರು.
Vijaya Karnataka Web ರಜನಿಕಾಂತ್‌
ರಜನಿಕಾಂತ್‌


ಇದಕ್ಕೆ ಕಾರಣವೂ ಇತ್ತು.

ಯಾವುದೇ ಚಿತ್ರದ ಶೂಟಿಂಗ್ ಅಥವಾ ಪ್ರಚಾರಕ್ಕೆ ರಜನಿಕಾಂತ್‌ ಬೆಂಗಳೂರಿಗೆ ಆಗಮಿಸಿರಲಿಲ್ಲ.

ಬದಲಿಗೆ ವೈಯಕ್ತಿಕ ಕೆಲಸದ ಮೇಲೆ ರಜನಿಕಾಂತ್‌ ಚೆನ್ನೈನಿಂದ ಸಿಲಿಕಾನ್‌ ಸಿಟಿಗೆ ಆಗಮಿಸಿದ್ದರು.

ರಜನಿಕಾಂತ್‌ ಸಹೋದರ ಸತ್ಯನಾರಾಯಣ ರಾವ್‌ ಗಾಯಕ್ವಾಡ್‌ (77) ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಶೇಷಾದ್ರಿಪುರಂನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಮೊಣಕಾಲು ಜೋಡಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸತ್ಯನಾರಾಯಣ ರಾವ್‌ ನಡೆಸಲಾಗಿತ್ತು

ಅಣ್ಣನ ಆರೋಗ್ಯ ವಿಚಾರಿಸಿಕೊಂಡು ಹೋಗಲು ರಜನಿಕಾಂತ್‌ ಆಗಮಿಸಿದ್ದರು.

ಚೆನ್ನೈನಿಂದ ಬಂದದ್ದೇ ಶೇಷಾದ್ರಿಪುರಂನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಸಹೋದರನ ಕುಶಲ ವಿಚಾರಿಸಿದರು. ನಂತರ ವೈದ್ಯರೊಂದಿಗೆ ರಜನಿ ಮಾತುಕತೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌