ಸಿನಿಮಾಗಾಗಿ ಒಂದು ವರ್ಷ ಗಡ್ಡ ಬಿಟ್ಟ ಸೂರ್ಯ
ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದ ಘಟನೆಯೊಂದನ್ನು ಸಿನಿಮಾ ಮಾಡಿದ್ದಾರೆ ನಿರ್ದೇಶಕ ಅಮರ್. ಮಹಿಳೆಯೊಬ್ಬರ ಮೇಲೆ ಎಟಿಎಂನಲ್ಲಿ ದಾಳಿಯೊಂದು ನಡೆಯಿತು. ಆ ಸ್ಟೋರಿಗೆ ಸಿನಿಮಿಯ ಟಚ್ ನೀಡಿದ್ದಾರೆ.
Vijaya Karnataka 13 Apr 2018, 5:00 am
ಕನ್ನಡದಲ್ಲಿ ನೈಜ ಘಟನೆಯನ್ನು ಆಧರಿಸಿದ ಚಿತ್ರಗಳು ಹೆಚ್ಚಾಗುತ್ತಿವೆ. ಅದಕ್ಕೆ ಹೊಸ ಸೇರ್ಪಡೆ ಅಮರ್ ನಿರ್ದೇಶನ ಎ.ಟಿ.ಎಂ ಸಿನಿಮಾ. ಬೆಂಗಳೂರಿಗರನ್ನೇ ಬೆಚ್ಚಿ ಬೀಳಿಸಿದ ಎಟಿಎಂನಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ದಾಳಿಯನ್ನು ತಮ್ಮ ಸಿನಿಮಾದಲ್ಲಿ ತೋರಿಸುತ್ತಿದ್ದಾರೆ ನಿರ್ದೇಶಕರು. ಮಹಿಳೆಯೊಬ್ಬರ ಕೊಲೆ ಪ್ರಯತ್ನದ ಸುತ್ತ ಇರುವ ಮನಸ್ಥಿತಿಯನ್ನು ಈ ಚಿತ್ರದಲ್ಲಿ ಹೇಳುತ್ತಿದ್ದಾರಂತೆ.
ಸಿನಿಮಾದ ವಿಶೇಷತೆ ಅಂದರೆ, ಸೂರ್ಯ ಖಳನಟನಾಗಿ ನಟಿಸಿದ್ದು, ಈ ಚಿತ್ರಕ್ಕಾಗಿ ಒಂದು ವರ್ಷ ಗಡ್ಡಕ್ಕೆ ಕತ್ತರಿ ಹಾಕಿಲ್ಲವಂತೆ. 'ಎಟಿಎಂ ಅಂದರೆ, ಅಟೆಂಪ್ಟ್ ಟು ಮರ್ಡರ್ ಎಂದರ್ಥ. ಇದೊಂದು ಭಿನ್ನವಾದ ಚಿತ್ರ. ಹಾಗಾಗಿ ಚಿತ್ರಕ್ಕೆ ಈ ರೀತಿಯ ಶೀರ್ಷಿಕೆ ಇಟ್ಟಿದ್ದೇವೆ. ಕೊಲೆ ಪ್ರಯತ್ನದ ಕಥೆ ಸಿನಿಮಾದಲ್ಲಿದ್ದರೂ, ಎಲ್ಲಿಯೂ ರಕ್ತದ ಕಲೆಗಳು ಕಾಣುವುದಿಲ್ಲ. ಭಯ ಹುಟ್ಟಿಸುವಂಥ ದೃಶ್ಯಗಳೂ ಇಲ್ಲ. ಎಲ್ಲ ವರ್ಗದ ಪ್ರೇಕ್ಷಕರು ಇಷ್ಟಪಡುವಂಥ ಸಿನಿಮಾ ಇದಾಗಿದೆ' ಎನ್ನುವುದು ನಿರ್ದೇಶಕರ ಮಾತು.
ಹಾಗಂತ ಈ ಸಿನಿಮಾದಲ್ಲಿ ಕೇವಲ ಕ್ರೈಮ್ ಇಲ್ಲ. ಇದರ ಜತೆಗೆ ಪ್ರೀತಿಯನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡಿದ್ದಾರೆ. ಶೋಭಿತಾ ಮತ್ತು ಹೇಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶೋಭಿತಾ ಈ ಚಿತ್ರದಲ್ಲಿ ಐಟಿ ಕಂಪೆನಿಯ ಹುಡುಗಿಯಾಗಿ ನಟಿಸಿದ್ದಾರೆ. ಸಖತ್ ಬೋಲ್ಡ್ ಆಗಿ ಕಂಡಿದ್ದಾರೆ. ಮುಗ್ಧ ಕ್ಯಾಬ್ ಚಾಲಕನಾಗಿ ಕಿರುತೆರೆ ನಟ ಚಂದೂ ನಟಿಸಿದ್ದರೆ, ಹೇಮಲತಾ ಪತ್ರಕರ್ತೆಯಾಗಿ ನಟಿಸಿದ್ದಾರೆ.
ಇಂಥಹ ಅಪರೂಪದ ಚಿತ್ರಕ್ಕೆ ಎಸ್.ವಿ. ನಾರಾಯಣ ಚಿತ್ರಕ್ಕೆ ಬಂದವಾಳ ಹೂಡಿದ್ದಾರೆ. ಏ.20ರಂದು ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ.
ಸಿನಿಮಾದ ವಿಶೇಷತೆ ಅಂದರೆ, ಸೂರ್ಯ ಖಳನಟನಾಗಿ ನಟಿಸಿದ್ದು, ಈ ಚಿತ್ರಕ್ಕಾಗಿ ಒಂದು ವರ್ಷ ಗಡ್ಡಕ್ಕೆ ಕತ್ತರಿ ಹಾಕಿಲ್ಲವಂತೆ. 'ಎಟಿಎಂ ಅಂದರೆ, ಅಟೆಂಪ್ಟ್ ಟು ಮರ್ಡರ್ ಎಂದರ್ಥ. ಇದೊಂದು ಭಿನ್ನವಾದ ಚಿತ್ರ. ಹಾಗಾಗಿ ಚಿತ್ರಕ್ಕೆ ಈ ರೀತಿಯ ಶೀರ್ಷಿಕೆ ಇಟ್ಟಿದ್ದೇವೆ. ಕೊಲೆ ಪ್ರಯತ್ನದ ಕಥೆ ಸಿನಿಮಾದಲ್ಲಿದ್ದರೂ, ಎಲ್ಲಿಯೂ ರಕ್ತದ ಕಲೆಗಳು ಕಾಣುವುದಿಲ್ಲ. ಭಯ ಹುಟ್ಟಿಸುವಂಥ ದೃಶ್ಯಗಳೂ ಇಲ್ಲ. ಎಲ್ಲ ವರ್ಗದ ಪ್ರೇಕ್ಷಕರು ಇಷ್ಟಪಡುವಂಥ ಸಿನಿಮಾ ಇದಾಗಿದೆ' ಎನ್ನುವುದು ನಿರ್ದೇಶಕರ ಮಾತು.
ಹಾಗಂತ ಈ ಸಿನಿಮಾದಲ್ಲಿ ಕೇವಲ ಕ್ರೈಮ್ ಇಲ್ಲ. ಇದರ ಜತೆಗೆ ಪ್ರೀತಿಯನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡಿದ್ದಾರೆ. ಶೋಭಿತಾ ಮತ್ತು ಹೇಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶೋಭಿತಾ ಈ ಚಿತ್ರದಲ್ಲಿ ಐಟಿ ಕಂಪೆನಿಯ ಹುಡುಗಿಯಾಗಿ ನಟಿಸಿದ್ದಾರೆ. ಸಖತ್ ಬೋಲ್ಡ್ ಆಗಿ ಕಂಡಿದ್ದಾರೆ. ಮುಗ್ಧ ಕ್ಯಾಬ್ ಚಾಲಕನಾಗಿ ಕಿರುತೆರೆ ನಟ ಚಂದೂ ನಟಿಸಿದ್ದರೆ, ಹೇಮಲತಾ ಪತ್ರಕರ್ತೆಯಾಗಿ ನಟಿಸಿದ್ದಾರೆ.
ಇಂಥಹ ಅಪರೂಪದ ಚಿತ್ರಕ್ಕೆ ಎಸ್.ವಿ. ನಾರಾಯಣ ಚಿತ್ರಕ್ಕೆ ಬಂದವಾಳ ಹೂಡಿದ್ದಾರೆ. ಏ.20ರಂದು ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ.