ಆ್ಯಪ್ನಗರ

ನಾಲ್ಕೇ ನಾಲ್ಕು ಪಾತ್ರಗಳ ಸಸ್ಪೆನ್ಸ್ ಥ್ರಿಲ್ಲರ್

ನಿರ್ದೇಶಕ ದಯಾಳ್‌ ಪದ್ಮನಾಭ್‌ ನಿರ್ದೇಶನದಲ್ಲಿ ತಯಾರಾಗಿರುವ 'ಆ ಕರಾಳ ರಾತ್ರಿ' ಸಿನಿಮಾದಲ್ಲಿ ಜೆಕೆ ಮತ್ತು ಅನುಪಮಾ ಗೌಡ ಒಂದಾಗಿದ್ದಾರೆ. ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಮಾದರಿಯ ಸಿನಿಮಾ ಇದಾಗಿದೆ.

Vijaya Karnataka 29 Jun 2018, 12:11 pm
ನಾಲ್ಕೇ ನಾಲ್ಕು ಪಾತ್ರಗಳನ್ನಿಟ್ಟುಕೊಂಡು 'ಆ ಕರಾಳ ರಾತ್ರಿ' ಎಂಬ ಸಿನಿಮಾ ಮಾಡಿದ್ದಾರೆ ನಿರ್ದೇಶಕ ದಯಾಳ್‌ ಪದ್ಮನಾಭ್‌. ಇದೊಂದು ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಮಾದರಿಯ ಸಿನಿಮಾವಾಗಿದ್ದು, ಕರಾಳ ರಾತ್ರಿಯಲ್ಲಿ ನಡೆಯುವ ಕಥೆಯನ್ನು ಕ್ಯೂರಿಯಾಸಿಟಿ ಮೂಡುವಂತೆ ಕಟ್ಟಿಕೊಟ್ಟಿದ್ದಾರೆ. ಈಗಾಗಲೇ ರಿಲೀಸ್‌ ಆಗಿರುವ ಟ್ರೇಲರ್‌ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
Vijaya Karnataka Web aa-karala-ratri


ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ನಂತರ ದಯಾಳ್‌ ಮತ್ತು ಜೆಕೆ ಇಂಥದ್ದೊಂದು ಸಿನಿಮಾ ಕೈಗೆತ್ತಿಕೊಂಡರು. ಈಗದು ರಿಲೀಸ್‌ ಹಂತಕ್ಕೆ ಬಂದು ತಲುಪಿದೆ. 'ದುರಾಸೆ ಹಾಗೂ ಭಾವನಾತ್ಮಕ ಅಂಶಗಳು ಸಿನಿಮಾದ ಹೈಲೆಟ್‌. ಫ್ಲಾಶ್‌ಬ್ಯಾಕ್‌ನಲ್ಲಿ ಸಾಗುವ ಕಥೆ ಮತ್ತು ಅಂಧನ ಪಾತ್ರ ಸೇರಿದಂತೆ ನಾಲ್ಕು ಪ್ರಮುಖ ಪಾತ್ರಗಳು ಈ ಸಿನಿಮಾದಲ್ಲಿವೆ. ದೊಡ್ಡದಾಗಿ ಬೆಂಕಿ ಹತ್ತಿಕೊಳ್ಳುವ ಮೂಲಕ ಈ ಸಿನಿಮಾ ಶುರುವಾಗುತ್ತದೆ. ಅಲ್ಲಿಂದ ಸಿನಿಮಾ ಹಲವು ಆಯಾಮಗಳನ್ನು ಪಡೆದುಕೊಳ್ಳುತ್ತದೆ' ಎನ್ನುವುದು ನಿರ್ದೇಶಕರ ಮಾತುಉ.

ವಿಶೇಷವಾಗಿ ಈ ಚಿತ್ರವನ್ನು ಮೂಡಿಗೆರೆ ಸಮೀಪ ಬಾಳೂರು ಎನ್ನುವ ಗ್ರಾಮದಲ್ಲಿ ಪುರಾತನ ಮನೆ ಹುಡುಕಿ ಚಿತ್ರೀಕರಿಸಿದ್ದಾರೆ. ಜೆಕೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ವೀಣಾ ಸುಂದರ್‌, ರಂಗಾಯಣ ರಘು, ಅನುಪಮ ಗೌಡ, ಹೀಗೆ ಹೆಸರಾಂತ ಕಲಾವಿದರು ತಾರಾಗಣದಲ್ಲಿ ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌