ಆ್ಯಪ್ನಗರ

'ಸೈ ರಾ' ಕನ್ನಡ ಟ್ರೇಲರ್ ರಿಲೀಸ್: ಸುದೀಪ್ ಧ್ವನಿ ಕೇಳಿ ಥ್ರಿಲ್ ಆದ ಅಭಿಮಾನಿಗಳು

ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಚಿತ್ರದ ಕನ್ನಡ ಟ್ರೇಲರ್ ರಿಲೀಸ್ ಆಗಿದೆ. ಚಿತ್ರದಲ್ಲಿನ ಡೈಲಾಗ್‌ಗಳು ಮೈನವಿರೇಳಿಸುವಂತಿವೆ. ಸುದೀಪ್ ಡೈಲಾಗ್‌ಗೆ ಅಭಿಮಾನಿಗಳು ಥ್ರಿಲ್ ಆಗಿದ್ದು ಲೈಕ್‌ಗಳ ಸುರಿಮಳೆಯನ್ನೇ ಗರೆದಿದ್ದಾರೆ.

Vijaya Karnataka Web 18 Sep 2019, 6:52 pm
ಸ್ವಾತಂತ್ರ್ಯ ಹೋರಾಟಗಾರ 'ಸೈ ರಾ ನರಸಿಂಹ ರೆಡ್ಡಿ' ಜೀವನ ಕಥೆಯಾಧಾರಿತ ಸಿನಿಮಾ 'ಸೈರಾ' ಚಿತ್ರದ ಕನ್ನಡ ಟ್ರೇಲರ್ ರಿಲೀಸ್ ಆಗಿದ್ದು ಕನ್ನಡ ಸಿನಿ ಪ್ರೇಮಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾ ತೆಲುಗಿನಲ್ಲಿ ನಿರ್ಮಾಣವಾಗಿದ್ದು ಕನ್ನಡಕ್ಕೆ ಡಬ್ ಆಗಿ ಇದೇ ಅಕ್ಟೋಬರ್ 2ರಂದು ರಿಲೀಸ್ ಆಗುತ್ತಿದೆ.
Vijaya Karnataka Web sye-raa-sudeep


ಕನ್ನಡವಷ್ಟೇ ಅಲ್ಲದೆ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ತೆರೆಕಾಣುತ್ತಿದೆ. ಸುರೇಂದರ್ ರೆಡ್ಡಿ ನಿರ್ದೇಶನದ ಈ ಚಿತ್ರವನ್ನು ರಾಮ್ ಚರಣ್ ನಿರ್ಮಿಸಿದ್ದಾರೆ. ಅಮಿತ್ ತ್ರಿವೇದಿ ಸಂಗೀತ ಚಿತ್ರಕ್ಕಿದೆ.
ಕನ್ನಡದಲ್ಲೂ ನೋಡಬಹುದು ಚಿರಂಜೀವಿ ಮೆಗಾ ಸಿನಿಮಾ 'ಸೈರಾ'

ಟ್ರೇಲರ್‌ನಲ್ಲಿ ಸುದೀಪ್ ಡೈಲಾಗ್ ಇದ್ದು ಕಿಚ್ಚನ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. "ನಿನ್ನ ಈ ಗೆಲುವನ್ನು ನಾನು ಕಣ್ಣಾರೆ ನೋಡಬೇಕು ಅಂತ ಬಂದೆ... ಸೈರಾ ನರಸಿಂಹ ರೆಡ್ಡಿ" ಎನ್ನುವ ಡೈಲಾಗನ್ನು ಸುದೀಪ್ ಹೇಳಿದ್ದಾರೆ.

ಒಟ್ಟಾರೆ ಟ್ರೇಲರ್‌ನಲ್ಲಿ ಸ್ವಾತಂತ್ರ್ಯ ಹೋರಾಟದ ಮೈನವಿರೇಳಿಸುವ ಸನ್ನಿವೇಶಗಳಿವೆ. ಬ್ರಿಟೀಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಯೋಧ ಉಯ್ಯಾಲವಾಡ ನರಸಿಂಹ ರೆಡ್ಡಿ ಪಾತ್ರವನ್ನು ಚಿರಂಜೀವಿ ಆವಾಹಿಸಿಕೊಂಡಂತಿದೆ. [ ಚಿರಂಜೀವಿ ಚಿತ್ರದ ಶೂಟಿಂಗ್‌ಗೆ ಬೀದರ್‌ನಲ್ಲಿ ಭಾರೀ ವಿರೋಧ]

ಸೈ ರಾ ಸಿನಿಮಾ ಏನೋ ಕನ್ನಡಕ್ಕೆ ಡಬ್ ಆಗಿದೆ, ಆದರೆ ಭಾಷೆ ಆಡುಭಾಷೆಯ ತರಹ ಅಲ್ಲದೆ ಗ್ರಾಂಥಿಕವಾಗಿ ಇರುವುದರಿಂದ ಸಿನಿಮಾ ಪ್ರೇಕ್ಷಕರನ್ನು ಎಷ್ಟರ ಮಟ್ಟಿಗೆ ಸೆಳೆಯುತ್ತದೆ ಎಂಬುದನ್ನು ಕಾದುನೋಡಬೇಕು.

ಸೈರಾ ಕನ್ನಡ ಟಿವಿ ರೈಟ್ಸ್ ಸಹ ಭರ್ಜರಿ ಬೆಲೆಗೆ ಮಾರಾಟವಾಗಿದೆಯಂತೆ. ಈ ಸಿನಿಮಾದಲ್ಲಿ ಕಿಚ್ಚ ಸುದೀಪ್‌ ಅವುಕು ರಾಜು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರ ಬರ್ತ್‌ಡೇ ದಿನದಂದು ಫಸ್ಟ್‌ಲುಕ್‌ ಕೂಡ ರಿಲೀಸ್‌ ಆಗಿದೆ.

ಬ್ರಿಟಿಷರ ವಿರುದ್ಧ ನಡೆದ ಗಿಡ್ಡಲೂರು ಬಂಡಾಯದಲ್ಲಿ ಹೋರಾಟ ಮಾಡಿದ ಉಯ್ಯಾಲವಾಡ ನರಸಿಂಹರೆಡ್ಡಿ ಕಥಾನಕ ಹೊಂದಿರುವ ಸಿನಿಮಾವಿದು. ಈ ಹೋರಾಟಗಾರನ ಜತೆ ಅವುಕು ರಾಜ ಕೈ ಜೋಡಿಸುತ್ತಾನೆ. ಈ ಕದನವನ್ನೇ ನಿರ್ದೇಶಕ ಸುರೇಂದರ್‌ ಚಿತ್ರ ಮಾಡುತ್ತಿದ್ದಾರೆ. ರಾಮ್ ಚರಣ್ ಚಿತ್ರದ ನಿರ್ಮಾಪಕರು.

ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ 151 ನೇ ಸಿನಿಮಾ 'ಸೈ ರಾ ನರಸಿಂಹರೆಡ್ಡಿ' ಟಾಲಿವುಡ್‌ನಲ್ಲಿ ಮಾತ್ರವಲ್ಲದೇ ಕನ್ನಡ ಸಿನಿ ಪ್ರಿಯರಲ್ಲೂ ಕುತೂಹಲ ಮೂಡಿಸಿದೆ. ಕಾರಣ ಕನ್ನಡದ ಮಾಣಿಕ್ಯ ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸಿರುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌