ಆ್ಯಪ್ನಗರ

ಹೈದರಾಬಾದ್‌ನಲ್ಲಿ 'ಭರಾಟೆ' ಶ್ರೀಮುರಳಿ ಮೀಟ್ ಮಾಡಿದ ಅಜಿತ್

ನಟ ಮುರಳಿ ಅವರನ್ನು ಭೇಟಿ ಮಾಡಿದ ಅಜಿತ್ "ನಾನು ನಿಮ್ಮ ಉಗ್ರಂ ಸಿನಿಮಾ ನೋಡಿದ್ದೇನೆ. ಹಾಗೇ, ಈಗ ಕೆಜಿಎಫ್ ಚಿತ್ರವನ್ನೂ ಕೂಡ ನೋಡಿದ್ದೇನೆ. ನನಗೆ ಎರಡೂ ಚಿತ್ರಗಳೂ ತುಂಬಾ ಮೆಚ್ಚುಗೆಯಾಗಿದೆ" ಎಂದಿದ್ದಾರಂತೆ.

Vijaya Karnataka Web 15 Feb 2019, 7:20 pm
ಶ್ರೀಮುರಳಿ ಅಭಿನಯದ 'ಭರಾಟೆ' ಚಿತ್ರವು ಶೂಟಿಂಗ್‌ ಹಂತದಲ್ಲೇ ಭಾರೀ ಸದ್ದು ಮಾಡತೊಡಗಿದೆ. ಚೇತನ್ ಕುಮಾರ್ ನಿರ್ದೇಶನದ 'ಭರಾಟೆ' ಚಿತ್ರವು ಚಿತ್ರೀಕರಣದ ಹಂತದಲ್ಲಿದ್ದು ಈಗಾಗಲೇ 2 ಹಂತದ ಚಿತ್ರೀಕರಣ ಮುಗಿಸಿದೆ. ಇದೀಗ ಮೂರನೆ ಹಂತದ ಶೂಟಿಂಗ್ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಅಲ್ಲೊಂದು ಅಚ್ಚರಿಯ ಘಟನೆ ಸಂಭವಿಸಿದೆ.
Vijaya Karnataka Web ajith15


ತಮಿಳು ಸ್ಟಾರ್ ಅಜಿತ್ ಕನ್ನಡದ ಮುರಳಿ ಅಭಿನಯದ "ಭರಾಟೆ' ಚಿತ್ರೀಕರಣದ ಸ್ಥಳಕ್ಕೆ ಬಂದು ಮುರಳಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಹೋಗಿದ್ದಾರೆ. ಕನ್ನಡ ಚಿತ್ರದ ಚಿತ್ರೀಕರಣದ ತಮಿಳು ಚಿತ್ರೋದ್ಯಮದ ಗಣ್ಯರು ಬಂದು ಭೇಟಿ ನೀಡುವಷ್ಟರ ಮಟ್ಟಿಗೆ ಕನ್ನಡ ಚಿತ್ರೋದ್ಯಮ ಬೆಳೆದು ನಿಂತಿದೆ ಎಂದು ಈ ಹಂತದಲ್ಲಿ ಧೈರ್ಯವಾಗಿ ಹೇಳಬಹುದು. ತಮಿಳು ನಟ ಅಜಿತ್ ಅಲ್ಲಿ ಕನ್ನಡ, ಕನ್ನಡ ಚಿತ್ರಗಳ ಮಾತನಾಡಿ ಹೋಗಿದ್ದು ದೊಡ್ಡ ವಿಷಯವೇ ಸರಿ.

ನಟ ಮುರಳಿ ಅವರನ್ನು ಭೇಟಿ ಮಾಡಿದ ಅಜಿತ್ "ನಾನು ನಿಮ್ಮ ಉಗ್ರಂ ಸಿನಿಮಾ ನೋಡಿದ್ದೇನೆ. ಹಾಗೇ, ಈಗ ಕೆಜಿಎಫ್ ಚಿತ್ರವನ್ನೂ ಕೂಡ ನೋಡಿದ್ದೇನೆ. ನನಗೆ ಎರಡೂ ಚಿತ್ರಗಳೂ ತುಂಬಾ ಮೆಚ್ಚುಗೆಯಾಗಿದೆ" ಎಂದಿದ್ದಾರಂತೆ. ಅಜಿತ್ ಮಾತು ಕೇಳಿ ಭರಾಟೆ ಚಿತ್ರತಂಡ ಸಖತ್ ಖುಷಿ ಪಟ್ಟಿದೆ. ಈಗ ಭರಾಟೆ ಚಿತ್ರತಂಡದ ಮೂಲಕ ತಮಿಳು ನಟ ಅಜಿತ್ ಕನ್ನಡದ ಚಿತ್ರಗಳ ಬಗ್ಗೆ ಬೆಚ್ಚಿ ಮಾತನಾಡಿರುವುದಕ್ಕೆ ಇಡೀ ಸ್ಯಾಂಡಲ್‌ವುಡ್‌ ಪುಳಕಗೊಂಡಿದೆ.

ಒಟ್ಟಿನಲ್ಲಿ, ಚಿತ್ರೋದ್ಯಮದಲ್ಲಿ ಸಾಕಷ್ಟು ಒಗ್ಗಟ್ಟಿದೆ. ಅದರಲ್ಲೂ ಮುಖ್ಯವಾಗಿ ಸಿನಿಮಾಗಳಿಗೆ ಭಾಷೆಯ ಹಂಗಿಲ್ಲ ಎಂಬುದು ಇಂಥ ಘಟನೆಗಳ ಮೂಲಕ ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ ಎನ್ನಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌