ಆ್ಯಪ್ನಗರ

ಡಾ ರಾಜ್‌ಕುಮಾರ್‌ ಸ್ಮರಿಸಿದ ತಮಿಳು ನಟ ಪ್ರಭು

ಇತ್ತೀಚೆಗೆ ಸಿನಿಮಾ ಒಂದರ ಶೂಟಿಂಗ್‌ ಸಲುವಾಗಿ ಬೆಂಗಳೂರಿಗೆ ಬಂದಿದ್ದ ನಟ ಪ್ರಭು, ಬಿಡುವು ಮಾಡಿಕೊಂಡು ಡಾ.ರಾಜ್‌ ಕುಮಾರ್‌ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಣ್ಣಾವ್ರ ಪೋಟೋಗೆ ಕೈಮಗಿದು, ಪೂಜೆ ಮಾಡಿ ಕೆಲಸ ಸಮಯ ಅಲ್ಲಿಯೇ ಕಳೆದಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ರಾಜ್‌ ಅಭಿಮಾನಿಗಳೊಂದಿಗೆ ಮಾತನಾಡಿದ್ದಾರೆ. ಡಾ.ರಾಜ್‌ರೊಂದಿಗಿನ ನೆನಪನ್ನು ಅಲ್ಲಿರುವವರೊಂದಿಗೆ ಹಂಚಿಕೊಂಡಿದ್ದಾರೆ.

Vijaya Karnataka 12 Jun 2019, 7:46 am
ತಮಿಳು ಚಿತ್ರರಂಗದ ಫೇಮಸ್‌ ನಟ ಹಾಗೂ ನಿರ್ಮಾಪಕ ಪ್ರಭು ರಾಜ್‌ಕುಮಾರ್‌ ಅವರನ್ನು ಸ್ಮರಿಸಿದ್ದಾರೆ. ಬೆಂಗಳೂರಿನಲ್ಲಿ ಅವರು ರಾಜ್‌ ಸ್ಮಾರಕಕ್ಕೆ ಪೂಜೆ ಸಲ್ಲಿಸಿರುವ ಫೋಟೋ ಲವಲವಿಕೆಗೆ ಲಭ್ಯವಾಗಿದೆ.
Vijaya Karnataka Web prabhu


ಇತ್ತೀಚೆಗೆ ಸಿನಿಮಾ ಒಂದರ ಶೂಟಿಂಗ್‌ ಸಲುವಾಗಿ ಬೆಂಗಳೂರಿಗೆ ಬಂದಿದ್ದ ನಟ ಪ್ರಭು, ಬಿಡುವು ಮಾಡಿಕೊಂಡು ಡಾ.ರಾಜ್‌ ಕುಮಾರ್‌ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಣ್ಣಾವ್ರ ಪೋಟೋಗೆ ಕೈಮಗಿದು, ಪೂಜೆ ಮಾಡಿ ಕೆಲಸ ಸಮಯ ಅಲ್ಲಿಯೇ ಕಳೆದಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ರಾಜ್‌ ಅಭಿಮಾನಿಗಳೊಂದಿಗೆ ಮಾತನಾಡಿದ್ದಾರೆ. ಡಾ.ರಾಜ್‌ರೊಂದಿಗಿನ ನೆನಪನ್ನು ಅಲ್ಲಿರುವವರೊಂದಿಗೆ ಹಂಚಿಕೊಂಡಿದ್ದಾರೆ.

'ಪ್ರತಿಬಾರಿಯೂ ಬೆಂಗಳೂರಿಗೆ ಬಂದಾಗ ಎಷ್ಟೇ ಬಿಜಿ ಇದ್ದರೂ ಬಿಡುವು ಮಾಡಿಕೊಂಡು ರಾಜ್‌ ಸಮಾಧಿಯ ಬಳಿ ಹೋಗಿ ಕೆಲ ಸಮಯ ಕಳೆಯುತ್ತೇನೆ. ಇದು ಮನಸ್ಸಿಗೆ ಖುಷಿ ನೀಡುತ್ತದೆ. ನಾವು ಒಟ್ಟಿಗೆ ಕಳೆದ ದಿನಗಳು ನೆನಪಾಗುತ್ತವೆ. ನನಗೂ ಕನ್ನಡ ಚಿತ್ರರಂಗಕ್ಕೂ ಹಲವಾರು ವರ್ಷಗಳ ನಂಟು. ರಾಜ್‌ರಿಂದಲೇ ಸ್ಯಾಂಡಲ್‌ವುಡ್‌ ಇಷ್ಟರ ಮಟ್ಟಿಗೆ ಬೆಳೆದಿದೆ' ಎಂದಿದ್ದು, ಎಲ್ಲರ ಜತೆ ಹಲವು ಸಂಗತಿಗಳನ್ನು ನಟ ಪ್ರಭು ಹಂಚಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌