ಆ್ಯಪ್ನಗರ

Simbu Marriage: ಶ್ರೀಲಂಕಾದ ಶ್ರೀಮಂತ ಯುವತಿಯ ಜೊತೆಗೆ ನಟ ಸಿಂಬು ಮದುವೆ?

Silambarasan Marriage: ತಮಿಳು ನಟ ಸಿಂಬು ವಿವಾಹ ಸದ್ಯದಲ್ಲೇ ನಡೆಯಲಿದೆಯಂತೆ. ಶ್ರೀಲಂಕಾದ ಶ್ರೀಮಂತ ಯುವತಿಯನ್ನ ಸಿಂಬು ಮದುವೆಯಾಗ್ತಾರಂತೆ.

Authored byಹರ್ಷಿತಾ ಎನ್ | Vijaya Karnataka Web 24 Feb 2023, 8:24 pm

ಹೈಲೈಟ್ಸ್‌:

  • ನಟ ಸಿಂಬು ಮದುವೆ ಬಗ್ಗೆ ಗುಸುಗುಸು
  • ಶ್ರೀಲಂಕಾದ ಯುವತಿಯನ್ನು ಮದುವೆಯಾಗ್ತಾರಂತೆ ಸಿಂಬು
  • ಸಿಂಬು ವಿವಾಹ ಯಾವಾಗ?

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web tamil actor simbu to marry a srilankan girl
Simbu Marriage: ಶ್ರೀಲಂಕಾದ ಶ್ರೀಮಂತ ಯುವತಿಯ ಜೊತೆಗೆ ನಟ ಸಿಂಬು ಮದುವೆ?
ಕಾಲಿವುಡ್‌ನ ಜನಪ್ರಿಯ ನಟರ ಪೈಕಿ ಸಿಂಬು ಕೂಡ ಒಬ್ಬರು. ಕಾವೇರಿ ನೀರು ವಿಚಾರವಾಗಿ ಕನ್ನಡಿಗರ ಮನ ಗೆದ್ದಿದ್ದ ಸಿಂಬು ಇದೀಗ ಮದುವೆಯಾಗಲು ಸಜ್ಜಾಗಿದ್ದಾರಂತೆ. 40 ವರ್ಷ ವಯಸ್ಸಿನ ಸಿಂಬು ಈವರೆಗೂ ಅನೇಕ ಬಾರಿ ಗಾಸಿಪ್ ಕಾಲಂಗಳಲ್ಲಿ ಸದ್ದು ಮಾಡಿದ್ದಾರೆ. ಇದೀಗ ಸಿಂಬು ಅಲಿಯಾಸ್ ಸಿಲಂಬರಸನ್ ವಿವಾಹದ ಬಗ್ಗೆಯೂ ಕಾಲಿವುಡ್‌ನಲ್ಲಿ ಗುಲ್ಲೆಬ್ಬಿದೆ.
ಶ್ರೀಲಂಕಾದ ಯುವತಿ ಜೊತೆಗೆ ಸಿಂಬು ಮದುವೆ ಫಿಕ್ಸ್?
ಶ್ರೀಲಂಕಾದ ಯುವತಿಯೊಬ್ಬರನ್ನ ಸಿಂಬು ಪ್ರೀತಿಸುತ್ತಿದ್ದಾರಂತೆ. ಆಕೆ ಕೋಟ್ಯಧಿಪತಿಯೊಬ್ಬರ ಪುತ್ರಿ ಎನ್ನಲಾಗಿದೆ. ಶ್ರೀಲಂಕಾದ ಯಶಸ್ವಿ ಉದ್ಯಮಿಯೊಬ್ಬರ ಮಗಳಾಗಿರುವ ಆಕೆ ಮೆಡಿಕಲ್ ವಿದ್ಯಾರ್ಥಿನಿ. ಆ ಯುವತಿ ಸಿಂಬು ಅವರ ದೊಡ್ಡ ಫ್ಯಾನ್ ಅಂತೆ. ಇಬ್ಬರ ಮಧ್ಯೆ ಪ್ರೀತಿ ಚಿಗುರಿದ್ದು, ಅದಕ್ಕೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ಶ್ರೀಲಂಕಾದ ಆ ಶ್ರೀಮಂತ ಯುವತಿಯ ಜೊತೆಗೆ ಸಿಂಬು ಮದುವೆ ನಡೆಯುತ್ತದೆ ಎಂದು ಕಾಲಿವುಡ್ ತುಂಬೆಲ್ಲಾ ಗುಲ್ಲೋ ಗುಲ್ಲು..!

ಅಂದ್ಹಾಗೆ, ಶ್ರೀಲಂಕಾದ ಆ ಯಶಸ್ವಿ ಉದ್ಯಮಿ ಯಾರು? ಸಿಂಬು ಮದುವೆಯಾಗಲಿರುವ ಯುವತಿಯ ಹೆಸರೇನು? ಸಿಂಬು ಮದುವೆ ಯಾವಾಗ? ಎಂಬಿತ್ಯಾದಿ ಪ್ರಶ್ನೆಗಳಿಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

Hansika Motwani: ಸೊಹೇಲ್ ಜೊತೆ ಮದುವೆಯಾದ್ಮೇಲೆ ನಟ ಸಿಂಬು ಜೊತೆಗಿನ ಬ್ರೇಕಪ್ ಬಗ್ಗೆ ಮಾತನಾಡಿದ ಹನ್ಸಿಕಾ ಮೋಟ್ವಾನಿ

ಟಾಪ್ ಹೀರೋಯಿನ್‌ಗಳ ಜೊತೆಗೆ ಸಿಂಬು ಹೆಸರು ತಳುಕು
ಒಂದ್ಕಾಲದಲ್ಲಿ ತಮಿಳು ಚಿತ್ರರಂಗದಲ್ಲಿ ಬಹುಬೇಡಿಕೆಯಲ್ಲಿದ್ದ ಹನ್ಸಿಕಾ ಮೋಟ್ವಾನಿ ಜೊತೆಗೆ ಸಿಂಬು ಹೆಸರು ತಳುಕು ಹಾಕಿಕೊಂಡಿತ್ತು. ಲೇಡಿ ಸೂಪರ್ ಸ್ಟಾರ್ ನಯನತಾರಾ ಜೊತೆಗೂ ಸಿಂಬು ಡೇಟಿಂಗ್ ಮಾಡ್ತಿದ್ದಾರೆ ಎಂಬ ಗುಸುಗುಸು ಹಬ್ಬಿತ್ತು. ತ್ರಿಷಾ ಹಾಗೂ ಸಿಂಬು ಪರಸ್ಪರ ಪ್ರೀತಿಸುತ್ತಿದ್ದಾರಂತೆ ಎಂಬ ಅಂತೆ ಕಂತೆ ತಮಿಳು ಚಿತ್ರರಂಗದ ಮೂಲೆ ಮೂಲೆಯಲ್ಲೂ ಕೇಳಿಬಂದಿತ್ತು. ಇದೀಗ ಶ್ರೀಲಂಕಾದ ಯುವತಿಯನ್ನ ಸಿಂಬು ಮದುವೆಯಾಗಲಿದ್ದಾರೆ ಎನ್ನಲಾಗಿದೆ.

ತಮಿಳು ನಟ ಸಿಂಬು ಅವರ ಕಾರು ಅಪಘಾತ: 70 ವರ್ಷದ ವ್ಯಕ್ತಿ ದುರ್ಮರಣ

ಸಿಲಂಬರಸನ್
ತಮಿಳು ನಟ ಟಿ.ರಾಜೇಂದರ್ ಅವರ ಪುತ್ರ ಸಿಲಂಬರಸನ್. ಕಾಲಿವುಡ್‌ನಲ್ಲಿ ಸಿಂಬು, ಎಸ್.ಟಿ.ಆರ್ ಅಂತಲೇ ಇವರು ಖ್ಯಾತಿ ಪಡೆದಿದ್ದಾರೆ. ನಟನಾಗಿ, ಸಂಗೀತ ನಿರ್ದೇಶಕನಾಗಿ, ಗಾಯಕನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಸಿಂಬು ಗುರುತಿಸಿಕೊಂಡಿದ್ದಾರೆ. ‘ಧಮ್’, ‘ಅಳೈ’, ‘ಕೋವಿಲ್’, ‘ಮನ್‌ಮದನ್’, ‘ವಲ್ಲವನ್’, ‘ಗೋವಾ’, ‘ವಿನೈತಾಂಡಿ ವರುವಾಯ’, ‘ವಾನಂ’, ‘ಒಸ್ತೆ’, ‘ಪೋಡಾ ಪೋಡಿ’, ‘ದೊಂಗಾಟ’, ‘ವಾಲು’, ‘ಈಶ್ವರನ್’, ‘ಮಾನಾಡು’ ಮುಂತಾದ ಹಿಟ್‌ ಸಿನಿಮಾಗಳಲ್ಲಿ ಸಿಂಬು ಅಭಿನಯಿಸಿದ್ದಾರೆ.

101 ಕೆಜಿ ಇದ್ದ ನಟ ಸಿಂಬು 71 ಕೆಜಿ ಆಗಿದ್ದು ಹೇಗೆ? ಅಚ್ಚರಿ ಮೂಡಿಸಿತು 'ಈಶ್ವರನ್‌' ಫಸ್ಟ್‌ಲುಕ್‌!

ಕಾವೇರಿ ನೀರಿನ ವಿಚಾರವಾಗಿ ಮಾತನಾಡಿದ್ದ ಸಿಂಬು
‘’ಚುನಾವಣೆ ಬಂತೂಂದ್ರೆ ಕಾವೇರಿ ವಿವಾದ ದೊಡ್ಡ ವಿಷಯವಾಗುತ್ತದೆ. ಕನ್ನಡಿಗರಿಗೇ ನೀರಿಲ್ಲ. ಹೀಗಿರುವಾಗ, ಕರ್ನಾಟಕದವರು ನಮಗೆಲ್ಲಿ ನೀರು ಕೊಡುತ್ತಾರೆ? ನಾನು ಕನ್ನಡದ ಅಮ್ಮಂದಿರ ಬಳಿ ಕೇಳುತ್ತೇನೆ. ನೀವು ಕುಡಿದು ಧಣಿವಾರಿಸಿಕೊಂಡ ಬಳಿಕ ಉಳಿದ ನೀರನ್ನು ನಮಗೆ ಕೊಡ್ತೀರಾ?’’ ಎಂದು ನಟ ಸಿಂಬು ಕಾವೇರಿ ನೀರಿನ ಗಲಾಟೆ ಕುರಿತಾಗಿ ಈ ಹಿಂದೆ ಭಾವನಾತ್ಮಕವಾಗಿ ಮಾತನಾಡಿದ್ದರು.
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌