ಆ್ಯಪ್ನಗರ

ವಿಶೇಷವಾದ ಫೊಟೋ ಹಂಚಿಕೊಂಡ ಠಾಕೂರ್ ಅನೂಪ್ ಸಿಂಗ್

ಯಜಮಾನ, ಉದ್ಘರ್ಷ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಎಲ್ಲರ ಗಮನ ಸೆಳೆದ ಬಾಲಿವುಡ್‌ ನಟ ಠಾಕೂರ್‌ ಅನೂಪ್‌ ಸಿಂಗ್‌ ವಿಶೇಷವಾದ ಫೋಟೋ ಒಂದನ್ನು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

Vijaya Karnataka 22 Apr 2019, 12:42 pm
ಯಜಮಾನ, ಉದ್ಘರ್ಷ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಎಲ್ಲರ ಗಮನ ಸೆಳೆದ ಬಾಲಿವುಡ್‌ ನಟ ಠಾಕೂರ್‌ ಅನೂಪ್‌ ಸಿಂಗ್‌ ವಿಶೇಷವಾದ ಫೋಟೋ ಒಂದನ್ನು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ಸೆಟ್‌ನಲ್ಲಿದ್ದ ಬೃಹತ್‌ ಆಂಜನೇಯ ಮೂರ್ತಿಯನ್ನು ಅಪ್ಪಿಕೊಂಡು ಹ್ಯಾಪಿ ಬರ್ತ್‌ಡೇ ಹೇಳಿದ್ದಾರೆ.
Vijaya Karnataka Web anup


ಕೆಲದಿನಗಳ ಹಿಂದೆ ಹನುಮ ಜಯಂತಿಗೆ ಶುಭ ಹಾರೈಸಿ ಟ್ವೀಟ್‌ ಮಾಡಿದ್ದಾರೆ. 'ಬರ್ತ್‌ಡೇ ಬಾಯ್‌ನ ಅಪ್ಪಿಕೊಂಡೆ. ಹನುಮ ಭಕ್ತರಿಗೆಲ್ಲಾ ಶುಭಾಶಯಗಳು. ಎಲ್ಲರೂ ಬಲಿಷ್ಠ ದೇಹ ಮತ್ತು ಸ್ವಚ್ಛ ಮನಸ್ಸನ್ನು ಗಳಿಸಿ' ಎಂದು ಬರೆದುಕೊಂಡಿದ್ದಾರೆ.

ಠಾಕೂರ್‌ ಅನೂಪ್‌ ಸಿಂಗ್‌ ಫಿಟ್‌ನೆಸ್‌ ಫ್ರೀಕ್‌. ವರ್ಕೌಟ್‌ ಮಾಡುತ್ತಲೇ ಇರೋದು ಅವರ ಹವ್ಯಾಸ. ಅನೂಪ್‌ ಹುರಿಗೊಳಿಸಿದ ದೇಹ, ಅವರ ವರ್ಕೌಟ್‌ಗೇ ಸಿಕ್ಕಾಪಟ್ಟೆ ಫ್ಯಾನ್ಸ್‌ ಇದ್ದಾರೆ. ಆಂಜನೇಯ ದೈಹಿಕ ಶಕ್ತಿ, ಸಾಮರ್ಥ್ಯ‌ದ ಪ್ರತೀಕ. ಸಾಮಾನ್ಯವಾಗಿ ದೇಹ ದಂಡಿಸುವವರಿಗೆಲ್ಲಾ ಆದರ್ಶ ದೈವ. ಅನೂಪ್‌ ಕೂಡಾ ಹನುಮ ಜಯಂತಿಯನ್ನು ವಿಶೇಷವಾಗಿ ಆಚರಿಸಿದ್ದಾರೆ.


ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ 'ಯಜಮಾನ' ಚಿತ್ರದಲ್ಲಿ 'ದೇವಿಶೆಟ್ಟಿ' ಎಂಬ ವಿಲನ್ ಪಾತ್ರದಲ್ಲಿ ಮಿಂಚಿದ್ದಾರೆ ನಟ ಠಾಕೂರ್ ಅನೂಪ್ ಸಿಂಗ್. ಅವರು ಈ ಮೊದಲು 'ರೋಗ್' ಎಂಬ ಕನ್ನಡ ಮತ್ತು ತೆಲುಗು ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದರೂ ಆಗ ಅಷ್ಟೊಂದು ಗಮನ ಸೆಳೆದಿರಲಿಲ್ಲ. ಇದೀಗ, 'ಯಜಮಾನ' ಚಿತ್ರದಲ್ಲಿ ಅವರು ಜೋರಾಗಿ ಅಬ್ಬರಿಸುತ್ತಿದ್ದು, ಕನ್ನಡ ಸಿನಿ ಪ್ರೇಕ್ಷಕರು ಠಾಕೂರ್ ಅನೂಪ್ ಸಿಂಗ್ ಅವರನ್ನು ಮೆಚ್ಚಿ ತಲೆದೂಗುತ್ತಿದ್ದಾರೆ.


ಇತ್ತೀಚಿಗಷ್ಟೇ ಕಿಚ್ಚ ಸುದೀಪ್ ನಾಯಕತ್ವದ 'ಪೈಲ್ವಾನ್' ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. 'ಪೈಲ್ವಾನ್' ಚಿತ್ರದಲ್ಲಿ ಕೂಡ ಠಾಕೂರ್ ಅನೂಪ್ ಅವರು ವಿಲನ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌