ಆ್ಯಪ್ನಗರ

ರಾಬರ್ಟ್ ನಿರ್ದೇಶಕನಿಗೆ ದೊಡ್ಡ ಸ್ಪರ್ಧೆ ಕೊಟ್ಟಿದ್ದ ಶ್ರೀಮುರಳಿ; ತರುಣ್ ಸುಧೀರ್ ಬಿಚ್ಚಿಟ್ಟ ಸತ್ಯವೇನು?

'ಭರಾಟೆ' ಚಿತ್ರದ ಇಂಟ್ರಡಕ್ಷನಲ್ ಹಾಡು ರಿಲೀಸ್ ಆಗಿದೆ. ಈ ಹಾಡನ್ನು ಚಂದನ್ ಶೆಟ್ಟಿ ಹಾಡಿದ್ದಾರೆ. ಅಷ್ಟೇ ಅಲ್ಲದೆ ತರುಣ್ ಸುಧೀರ್ ಶ್ರೀಮುರಳಿ ಬಗೆಗಿನ ಹಿಂದಿನ ಒಂದು ನೆನಪನ್ನು ಮೆಲುಕು ಹಾಕಿದ್ದಾರೆ. ಅದೇನು ಗೊತ್ತಾ?

Vijaya Karnataka Web 25 Sep 2019, 8:12 pm
'ಭರಾಟೆ' ಸಿನಿಮಾ ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ನಿರ್ದೇಶಕ ಚೇತನ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ. ಈ ಚಿತ್ರದ ಎರಡು ಹಾಡುಗಳು ಈಗಾಗಲೇ ಸಖತ್ ಸದ್ದು ಮಾಡಿವೆ. ಅತಿ ಹೆಚ್ಚು ಜನರು ಈ ಹಾಡಿಗೆ ಟಿಕ್‌ಟಾಕ್‌ ವಿಡಿಯೋ ಮಾಡಿದ್ದಾರೆ.
Vijaya Karnataka Web bhataate


ಭರಾಟೆ ಸಿನಿಮಾದಲ್ಲಿ ಶ್ರೀಮುರಳಿ ರಾಜಸ್ಥಾನದ ಪ್ರಸಿದ್ಧ ಸ್ಥಳಗಳನ್ನು ಪರಿಚಯಿಸುವ ಎನರ್ಜಿಟಿಕ್ ಯುವಕನಾಗಿ ಕಾಣಿಸಿಕೊಂಡಿದ್ದಾರೆ. 'ಇವ್ನು ಗೈಡ್, ರಾಜಸ್ಥಾನ್ ಪ್ರೈಡ್, ಸ್ವಲ್ಪ ರೂಡ್' ಎಂಬ ಸಾಹಿತ್ಯವು ಇಂಟ್ರಡಕ್ಷನಲ್ ಹಾಡಿನಲ್ಲಿದೆ. ಈ ಹಾಡು ಈ ಚಿತ್ರದ ಪ್ಲಸ್ ಪಾಯಿಂಟ್ ಅಂತೆ. ಈ ಹಾಡಿಗೆ ಅರ್ಜುನ್ ಜನ್ಯಾ ಸಂಗೀತ ಒದಗಿಸಿದ್ದಾರೆ. ಚಂದನ್ ಶೆಟ್ಟಿ ಈ ಹಾಡು ಹಾಡಿದ್ದಾರೆ. ಮುರಳಿ ಮಾಸ್ಟರ್ ಕೊರಿಯಾಗ್ರಫಿಯಲ್ಲಿ ಕಲರ್‌ಫುಲ್ ಬ್ಯಾಕ್‌ಡ್ರಾಪ್‌ನಲ್ಲಿ ಈ ಹಾಡು ಮೂಡಿಬಂದಿದೆ. ಶ್ರೀಮುರಳಿ ಪತ್ನಿ ವಿದ್ಯಾ ಅವರು ಈ ಹಾಡಿಗೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಈ ಹಾಡಿನಲ್ಲಿ ತುಂಬ ಕಾಸ್ಟ್ಯೂಮ್ ಬಳಸಲಾಗಿದೆ. ಈ ಹಾಡನ್ನು ನಿರ್ದೇಶಕರಾದ ತರುಣ್ ಸುಧೀರ್, ನರ್ತನ್, ಮಹೇಶ್ ಗೌಡ ಬಿಡುಗಡೆ ಮಾಡಿದ್ದಾರೆ.

ಶ್ರೀಮುರಳಿ ಫೈಟ್‌ ನೋಡಲು ಬಂದ ಪ್ರಶಾಂತ್‌ ನೀಲ್‌

" 'ಟಾಪ್ ಟೆನ್' ಸಿನಿಮಾಕ್ಕೆ ಹೀರೋ ಆಗಬೇಕು ಎಂದು ಆಡಿಷನ್ ಕೊಟ್ಟೆ. ಆದರೆ ಮುರಳಿ ಸೆಲೆಕ್ಟ್ ಆದರು. ವಿಜಯ್ ರಾಘವೇಂದ್ರ ಅವರ ತಮ್ಮ ಅಂತೆ, ನನಗೆ ಕಾಂಪಿಟೇಶನ್ ಕೊಡೋಕೆ ಬಂದುಬಿಟ್ಟನಲ್ಲ, ನಾನು ಹೀರೋ ಆಗೋಕೆ ಸಾಧ್ಯ ಇಲ್ಲ ಅಂತ ಹೇಳಿ ಹುಷಾರ್ ಆಗಿ ಶಿಫ್ಟ್ ಆಗಿ ಡೈರೆಕ್ಷನ್‌ಗೆ ಇಳಿದೆ. ಇವತ್ತು ಶ್ರೀಮುರಳಿ ಬದುಕಿನಲ್ಲಿ ಏರಿಳಿತ ಇದೆ. ಏಕೆಂದರೆ ನಾನು ಅವರನ್ನು ತೀರ ಹತ್ತಿರದಿಂದ ನೋಡಿದ್ದೇನೆ. ಬ್ಯೂಟಿಫುಲ್ ಆಗಿ ಅವರು ಎತ್ತರದ ಸ್ಥಾನಕ್ಕೆ ಬಂದಿದ್ದಾರೆ. ಇನ್ನೂ ಎತ್ತರದ ಸ್ಥಾನಕ್ಕೆ ಹೋಗುತ್ತೀರ ಎಂಬ ನಂಬಿಕೆಯಿದೆ. ಮುಂದಿನ ದಿನಗಳಲ್ಲಿ ನಮಗೂ ಡೇಟ್ಸ್ ಕೊಡಿ"ಎಂದು ತರುಣ್ ಸುಧೀರ್ ಶ್ರೀಮುರಳಿಯವರಿಗೆ ಕೇಳಿದ್ದಾರೆ.
ಆ್ಯಂಕರಿಂಗ್ ಕೆಲಸ ಶುರು ಮಾಡಿದ ರಚಿತಾ ಸಿನಿಮಾ ಬಿಟ್ಟುಬಿಟ್ರಾ? ; ರಚಿತಾ ಹೇಳಿದ್ದೇನು?


ಶ್ರೀಮುರಳಿ ಅವರ ಪಾತ್ರಕ್ಕೆ ತುಂಬ ವೇರಿಯೇಶನ್ ಇದೆ. ಅಯ್ಯಪ್ಪ, ಸಾಯಿಕುಮಾರ್, ರವಿಶಂಕರ್ ಸಹೋದರರು ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ. "ಹತ್ತನೇ ತರಗತಿಯಿಂದ ತರುಣ್ ಮತ್ತು ನಾವು ಒಳ್ಳೆಯ ಸ್ನೇಹಿತರು. ಟಾಪ್ ಟೆನ್ ವಿಚಾರ ನನಗೆ ಇವತ್ತಿನವರೆಗೂ ಗೊತ್ತಿರಲಿಲ್ಲ. ನಾನು ತರುಣ್ ಜೊತೆ ಸಿನಿಮಾ ಮಾಡಲು ರೆಡಿಯಿದ್ದೇನೆ" ಎಂದು ಶ್ರೀಮುರಳಿ ನಗುತ್ತ ಹೇಳಿದ್ದಾರೆ.
ಈ ಚಿತ್ರದಲ್ಲಿ ಶ್ರೀಲೀಲಾ ಅವರು ಶ್ರೀಮುರಳಿಗೆ ನಾಯಕಿಯಾಗಿ ನಟಿಸಿದ್ದಾರೆ. ರಚಿತಾ ರಾಮ್ ಕೂಡ ಈ ಚಿತ್ರದ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಡುಗಳಂತೂ ಸಿಕ್ಕಾಪಟ್ಟೆ ಸದ್ದು ಮಾಡಿವೆ. ಅಕ್ಟೋಬರ್ ತಿಂಗಳಲ್ಲಿ ಈ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಈ ಚಿತ್ರಕ್ಕೆ ಸುಪ್ರೀತ್ ಹಣ ಹೂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌