ಆ್ಯಪ್ನಗರ

ತರುಣ್ ಸುಧೀರ್ ಟ್ವೀಟ್‌‍ಗೆ ಸುದೀಪ್, ರಕ್ಷಿತ್ ಅಭಿಮಾನಿಗಳು ಗರಂ ಆಗಿದ್ಯಾಕೆ?

ಅವನೇ ಶ್ರೀಮನ್ನಾರಾಯಣ ಪೋಸ್ಟರ್ ನೋಡಿದ ಕೆಲವರು, ಇದು ಶಾಹಿದ್ ಕಪೂರ್ ಅಭಿನಯದ 'ಫಟಾ ಪೋಸ್ಟರ್ ನಿಕ್ಲಾ ಹೀರೋ' ಪೋಸ್ಟರ್ ಹೋಲುವಂತಿದೆ ಎಂದಿದ್ದರು. ಈಗ ತರುಣ್ ಸುಧೀರ್ ಅದೇ ರೀತಿ ಟ್ವೀಟ್ ಮಾಡಿ ವಿಶ್ ಮಾಡಿರುವುದು ರಕ್ಷಿತ್ ಶೆಟ್ಟಿ ಅಭಿಮಾನಿಗಳನ್ನು ಕೆರಳಿಸಿದೆ.

Vijaya Karnataka Web 7 Jun 2019, 11:51 am
ಕನ್ನಡ ಚಿತ್ರರಂಗದ ಯುವ ನಿರ್ದೇಶಕ ತರುಣ್ ಸುಧೀರ್ ಟ್ವೀಟ್ ಒಂದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಗುರುವಾರ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ನಿಮಿತ್ತ 'ಅವನೇ ಶ್ರೀಮನ್ನಾರಾಯಣ' ಪೋಸ್ಟರ್ ಹಾಗೂ ಟೀಸರ್ ರಿಲೀಸ್ ಆಗಿದ್ದು ಗೊತ್ತೇ ಇದೆ. ಈ ಬಗ್ಗೆ ರಕ್ಷಿತ್‌ಗೆ ತರುಣ್ ಸುಧೀರ್ ವಿಶ್ ಮಾಡಿದ್ದಾರೆ.
Vijaya Karnataka Web tharun-sudhir


"ಫಟಾ ಪೋಸ್ಟರ್ ನಿಕ್ಲಾ ಹೀರೋ, ಲವ್ಲಿ ಪೋಸ್ಟರ್ ರಕ್ಷಿತ್ ಶೆಟ್ಟಿ. ಹುಟ್ಟುಹಬ್ಬದ ಶುಭಾಶಯಗಳು ಬ್ರೋ. ಈ ವರ್ಷ ನಿಮಗೆ ಗ್ರ್ಯಾಂಡ್ ಸಕ್ಸಸ್ ಸಿಗಲಿ. ಹ್ಯಾಪಿ ಬರ್ತ್‌ಡೇ ರಕ್ಷಿತ್ ಶೆಟ್ಟಿ" ಎಂದು ಪೋಸ್ಟ್ ಮಾಡಿದ್ದಾರೆ. ಆದರೆ ಈ ಟ್ವೀಟ್ ಸುದೀಪ್ ಅಭಿಮಾನಿಗಳು ಹಾಗೂ ರಕ್ಷಿತ್ ಅಭಿಮಾನಿಗಳನ್ನು ಕೆಣಕಿದೆ.

ಅವನೇ ಶ್ರೀಮನ್ನಾರಾಯಣ ಪೋಸ್ಟರ್ ನೋಡಿದ ಕೆಲವರು, ಇದು ಶಾಹಿದ್ ಕಪೂರ್ ಅಭಿನಯದ 'ಫಟಾ ಪೋಸ್ಟರ್ ನಿಕ್ಲಾ ಹೀರೋ' ಪೋಸ್ಟರ್ ಹೋಲುವಂತಿದೆ ಎಂದಿದ್ದರು. ಈಗ ತರುಣ್ ಸುಧೀರ್ ಅದೇ ರೀತಿ ಟ್ವೀಟ್ ಮಾಡಿ ವಿಶ್ ಮಾಡಿರುವುದು ರಕ್ಷಿತ್ ಶೆಟ್ಟಿ ಅಭಿಮಾನಿಗಳನ್ನು ಕೆರಳಿಸಿದೆ.

ತರುಣ್ ಸುಧೀರ್ ನಿರ್ದೇಶನದ 'ರಾಬರ್ಟ್ಸ್' ಸಿನಿಮಾದ ಪೋಸ್ಟರ್ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಹಾಲಿವುಡ್‌ ಚಿತ್ರದ ಕಾಪಿ ಎಂದಿದ್ದಾರೆ. ಸುದೀಪ್ ಅಭಿನಯದ 'ಪೈಲ್ವಾನ್' ಪೋಸ್ಟರ್ ರಿಲೀಸ್ ಆದಾಗ ತರುಣ್ ಸುಧೀರ್ ಒಂದೇ ಒಂದು ವಿಶ್ ಮಾಡದಿರುವ ಬಗ್ಗೆಯೂ ಸುದೀಪ್ ಅಭಿಮಾನಿಗಳು ಗರಂ ಆಗಿದ್ದಾರೆ.

ದರ್ಶನ್ ಹಾಗೂ ಸುದೀಪ್ ನಡುವಿನ ಗೆಳೆತನ ಮುರಿದು ಬಿದ್ದಿದ್ದು ಗೊತ್ತೇ ಇದೆ. ಈಗ ದರ್ಶನ್ ಅಭಿನಯದ 'ರಾಬರ್ಟ್ಸ್' ಸಿನಿಮಾಗೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಗಾಗಿ ಸುದೀಪ್ ಪೋಸ್ಟರ್‌ ಬಗ್ಗೆ ತರುಣ್ ಯಾವುದೇ ಟ್ವೀಟ್ ಮಾಡಲು ಹೋಗಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಇಲ್ಲಿವೆ ನೋಡಿ ಕೆಲವು ಟ್ವೀಟ್‌ಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌