ಒಂದೊಂದು ಮತದಲ್ಲಿಯೂ ಜವಬ್ದಾರಿ ಇರುತ್ತದೆ
ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದೆ. ಮತದಾನ ಕುರಿತಾದ ಜಾಗೃತಿ ಕೂಡ ಹೆಚ್ಚಾಗುತ್ತಿದೆ. ಈ ಕುರಿತು ನಟ ನೀನಾಸಂ ಸತೀಶ್ ಹೇಳುವುದು ಹೀಗೆ, 'ಮತದಾನ ಎನ್ನುವುದು ನಾಗರೀಕನ ಜೀವನದ ಬಹುಮುಖ್ಯ ಕರ್ತವ್ಯ. ಒಂದು ದೇಶ ಕಟ್ಟಲು ಪ್ರತಿಯೊಂದ ಮತವೂ ಬಹಳ ಮುಖ್ಯ' ಎನ್ನುತ್ತಾರೆ ಸತೀಶ್.
Vijaya Karnataka 20 Apr 2018, 11:30 am
ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದೆ. ಮತದಾನ ಕುರಿತಾದ ಜಾಗೃತಿ ಕೂಡ ಹೆಚ್ಚಾಗುತ್ತಿದೆ. ಈ ಕುರಿತು ನಟ ನೀನಾಸಂ ಸತೀಶ್ ಹೇಳುವುದು ಹೀಗೆ, 'ಮತದಾನ ಎನ್ನುವುದು ನಾಗರೀಕನ ಜೀವನದ ಬಹುಮುಖ್ಯ ಕರ್ತವ್ಯ. ಒಂದು ದೇಶ ಕಟ್ಟಲು ಪ್ರತಿಯೊಂದ ಮತವೂ ಬಹಳ ಮುಖ್ಯ' ಎನ್ನುತ್ತಾರೆ ಸತೀಶ್.
'ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಮತ ಹಾಕುವ ಮುನ್ನ ಯಾರಿಗೆ ಹಾಕುತ್ತೇವೆ ಎಂಬ ಸ್ಪಷ್ಟ ಕಲ್ಪನೆ ನಮಗಿರಬೇಕು. ಜಾತಿ ಆಧಾರದ ಮೇಲೆ ಮತದಾನ ಮಾಡಬಾರದು. ನಮಗೆ ಯಾರು ಕೆಲಸ ಮಾಡಿಕೊಡುತ್ತಾರೋ ಅವರನ್ನು ಗೆಲ್ಲಿಸಬೇಕು. ನಾವೆಲ್ಲ ತೆರಿಗೆ ಕಟ್ಟುತ್ತೇವೆ. ಅದಕ್ಕೆ ತಕ್ಕಂತೆ ರಾಜಕಾರಣಿಗಳು ಕೆಲಸ ಮಾಡಬೇಕು.
ಚುನಾವಣೆ ನಂತರ ಆ ವ್ಯಕ್ತಿ ಕೆಲಸ ಮಾಡಲಿಲ್ಲ ಎಂದರೆ ಕೊರಳು ಪಟ್ಟಿ ಹಿಡಿದು ಕೇಳುವಂತಿರಬೇಕು. ನಾವು ಗೆಲ್ಲಿಸಿ ಕಳುಹಿಸುವ ಜನಪ್ರತಿನಿಧಿ ನಮಗೆ ಯಾವಾಗಲೂ ಸಿಗುವಂತಿರಬೇಕು. ಮೂಲಭೂತ ಸೌಲಭ್ಯಗಳನ್ನು ನೀಡುವಂತಹ ವ್ಯಕ್ತಿಗೆ ಮತ ಹಾಕಿ' ಎನ್ನುವುದು ಸತೀಶ್ ಮಾತು. ತಾವು ಚಿತ್ರೀಕರಣದಲ್ಲಿ ಎಷ್ಟೇ ಬಿಝಿಯಾಗಿದ್ದರೂ ಪ್ರತಿ ಚುನಾವಣೆಯಲ್ಲೂ ತಪ್ಪದೇ ಅವರು ಮತ ಹಾಕುತ್ತಾರಂತೆ.
'ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಮತ ಹಾಕುವ ಮುನ್ನ ಯಾರಿಗೆ ಹಾಕುತ್ತೇವೆ ಎಂಬ ಸ್ಪಷ್ಟ ಕಲ್ಪನೆ ನಮಗಿರಬೇಕು. ಜಾತಿ ಆಧಾರದ ಮೇಲೆ ಮತದಾನ ಮಾಡಬಾರದು. ನಮಗೆ ಯಾರು ಕೆಲಸ ಮಾಡಿಕೊಡುತ್ತಾರೋ ಅವರನ್ನು ಗೆಲ್ಲಿಸಬೇಕು. ನಾವೆಲ್ಲ ತೆರಿಗೆ ಕಟ್ಟುತ್ತೇವೆ. ಅದಕ್ಕೆ ತಕ್ಕಂತೆ ರಾಜಕಾರಣಿಗಳು ಕೆಲಸ ಮಾಡಬೇಕು.
ಚುನಾವಣೆ ನಂತರ ಆ ವ್ಯಕ್ತಿ ಕೆಲಸ ಮಾಡಲಿಲ್ಲ ಎಂದರೆ ಕೊರಳು ಪಟ್ಟಿ ಹಿಡಿದು ಕೇಳುವಂತಿರಬೇಕು. ನಾವು ಗೆಲ್ಲಿಸಿ ಕಳುಹಿಸುವ ಜನಪ್ರತಿನಿಧಿ ನಮಗೆ ಯಾವಾಗಲೂ ಸಿಗುವಂತಿರಬೇಕು. ಮೂಲಭೂತ ಸೌಲಭ್ಯಗಳನ್ನು ನೀಡುವಂತಹ ವ್ಯಕ್ತಿಗೆ ಮತ ಹಾಕಿ' ಎನ್ನುವುದು ಸತೀಶ್ ಮಾತು. ತಾವು ಚಿತ್ರೀಕರಣದಲ್ಲಿ ಎಷ್ಟೇ ಬಿಝಿಯಾಗಿದ್ದರೂ ಪ್ರತಿ ಚುನಾವಣೆಯಲ್ಲೂ ತಪ್ಪದೇ ಅವರು ಮತ ಹಾಕುತ್ತಾರಂತೆ.