ಆ್ಯಪ್ನಗರ

ಈ ವಾರ ಬಿಡುಗಡೆ: ಕಿರಿಕ್ ಪಾರ್ಟಿ, ಮಂಡ್ಯ ಟು ಮುಂಬೈ

ಕಿರಿಕ್‌ ಪಾರ್ಟಿ ರಕ್ಷಿತ್‌ ಶೆಟ್ಟಿ ಮುಖ್ಯ ಭೂಮಿಕೆಯ 'ಕಿರಿಕ್‌ ಪಾರ್ಟಿ' ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್‌ ಆಗುತ್ತಿದೆ...

Vijaya Karnataka Web 30 Dec 2016, 5:00 am

ಕಿರಿಕ್‌ ಪಾರ್ಟಿ

ರಕ್ಷಿತ್‌ ಶೆಟ್ಟಿ ಮುಖ್ಯ ಭೂಮಿಕೆಯ 'ಕಿರಿಕ್‌ ಪಾರ್ಟಿ' ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್‌ ಆಗುತ್ತಿದೆ. ಕಾಲೇಜು ಹುಡುಗರ ಜೀವನವನ್ನು ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರಿಷಭ್‌ ಶೆಟ್ಟಿ.

ಜಿ.ಎಸ್‌.ಗುಪ್ತ ಹಾಗೂ ರಕ್ಷಿತ್‌ ಶೆಟ್ಟಿ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸಿದ್ದು, ಅಜನೀಶ್‌ ಲೋಕನಾಥ್‌ ಸಂಗೀತ ನೀಡಿದ್ದಾರೆ. ಕರಮ್‌ ಚಾವ್ಲ ಅವರ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ರಶ್ಮಿಕಾ, ಸಂಯುಕ್ತ ಹೆಗ್ಡೆ, ಅರವಿಂದ್‌ ಅಯ್ಯರ್‌, ಧನಂಜಯ್‌ ರಂಜನ್‌, ಅಚ್ಯುತಕುಮಾರ್‌ ಮುಂತಾದವರ ತಾರಾಗಣದಲ್ಲಿ ಚಿತ್ರ ಮೂಡಿ ಬಂದಿದೆ.

Vijaya Karnataka Web this week kannada movie release
ಈ ವಾರ ಬಿಡುಗಡೆ: ಕಿರಿಕ್ ಪಾರ್ಟಿ, ಮಂಡ್ಯ ಟು ಮುಂಬೈ


ಬಳ್ಳಾರಿ ದರ್ಬಾರ್‌

ಬಳ್ಳಾರಿಯ ನೈಜ ಚಿತ್ರವನ್ನು ಹೊತ್ತು ತರುತ್ತಿರುವ 'ಬಳ್ಳಾರಿ ದರ್ಬಾರ್‌' ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಮೈನಿಂಗ್‌ ಮಾಫಿಯಾ ಸೇರಿದಂತೆ ಬಳ್ಳಾರಿಯಲ್ಲಿ ನಡೆದ ಅನೇಕ ಸಂಗತಿಗಳನ್ನು ಒಟ್ಟಾಗಿಸಿ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಸ್ಮೈಲ್‌ ಶ್ರೀನು. ನಿರ್ದೇಶಕರ ಎರಡನೇ ಚಿತ್ರವಿದು. ನಿರ್ದೇಶಕರೇ ಕತೆ, ಚಿತ್ರಕತೆ ಮತ್ತು ಸಂಭಾಷಣೆ ಬರೆದದ್ದು, ನಾನಿ ಮತ್ತು ಕಾರ್ತಿಕ್‌ ಸುಬ್ರಮಣ್ಯ ಅವರ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಚರಣ್‌ ಅರ್ಜುನ್‌ ಸಂಗೀತ ನೀಡಿದ್ದರೆ, ತಾರಾಗಣದಲ್ಲಿ ಪೊಲಾ ಶ್ರೀನಿವಾಸಬಾಬು, ಸಂಪತ್‌ಕುಮಾರ್‌, ಶು»ಶ್ರೀ, ಆಶಿನಿ, ಮಮತಾ ರಾವುತ್‌, ಆಜಿಬಾಬಾಖಾನ್‌ ಮುಂತಾದವರಿದ್ದಾರೆ.

ಮಂಡ್ಯ ಟು ಮುಂಬೈ

ನವೀನ್‌ ಕೃಷ್ಣ ಮತ್ತು ಅಮೃತಾ ಮುಖ್ಯಭೂಮಿಕೆಯ 'ಮಂಡ್ಯ ಟು ಮುಂಬೈ' ಈ ವಾರ ಬಿಡುಗಡೆ ಆಗುತ್ತಿದೆ. ಅಪರೂಪದ ಪ್ರೇಮಕತೆಯನ್ನು ಸಿನಿಮಾ ಮಾಡಿದ್ದಾರಂತೆ ನಿರ್ದೇಶಕರು. ಜ್ಯೋತಿರ್ಲಿಂಗಮ್‌ ಹಾಗೂ ಪ್ರಕಾಶ್‌ ಈ ಸಿನಿಮಾವನ್ನು ಜಂಟಿಯಾಗಿ ನಿರ್ಮಾಣ ಮಾಡಿದ್ದು, ವಾರ್ದಿಕ್‌ ಜೋಸೆಫ್‌ ಹಾಗೂ ರಾಜಶೇಖರ್‌ ಚಿತ್ರದ ನಿರ್ದೇಶಕರು. ಇದು ತಮಿಳಿನ ರೇಣುಗುಂಟ ಚಿತ್ರದ ರೀಮೇಕ್‌.

ಚಿತ್ರಕ್ಕೆ ದರ್ಶನ್‌ ಕನಕ ಅವರ ಛಾಯಾಗ್ರಾಹಣವಿದ್ದು, ಚರಣ್‌ ಸಂಗೀತ ನೀಡಿದ್ದಾರೆ. ಸಂಜನಾ, ರಾಕೇಶ್‌ ಅಡಿಗ, ತಿಲಕ್‌ ಶೇಖರ್‌, ಪೆಟ್ರೋಲ್‌ ಪ್ರಸನ್ನ, ಮೈಕೊ ನಾಗರಾಜ್‌, ಕಡ್ಡಿ ಪುಡಿ ಚಂದ್ರು ಮತ್ತಿತರರು ತಾರಾಗಣದಲ್ಲಿದ್ದಾರೆ.

ಶ್ರೀ ಓಂಕಾರ ಅಯ್ಯಪ್ಪನೇ

ದಿಶಾ ಪೂವಯ್ಯ ನಟನೆಯ 'ಶ್ರೀ ಓಂಕಾರ ಅಯ್ಯಪ್ಪನೇ' ಸಿನಿಮಾ ಇಂದು ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. ಟಿ.ಎ.ಸೆಂದಿಲ್‌ ನಿರ್ಮಾಣದಲ್ಲಿ ಮೂಡಿ ಬಂದಿರುವ ಚಿತ್ರಕ್ಕೆ ಓಂ ಸಾಯಿಪ್ರಕಾಶ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಅಯ್ಯಪ್ಪನ ಕುರಿತಾದ ಭಕ್ತಿ ಪ್ರಧಾನ ಚಿತ್ರವಿದು.

ಬಲರಾಮ್‌ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿದ್ದು, ಗಿರಿ ಅವರ ಛಾಯಾಗ್ರಹಣವಿದೆ. ರೋಜಾ, ರವಿಚೇತನ್‌, ನವೀನ್‌ ಕೃಷ್ಣ, ರಮೇಶ್‌ ಭಟ್‌, ಶಿವರಾಮ್‌, ಶ್ರೀನಿವಾಸಮೂರ್ತಿ ಸೇರಿದಂತೆ ಹಲವು ಹಿರಿಯ ಕಲಾವಿದರು ತಾರಾಗಣದಲ್ಲಿದ್ದಾರೆ.

ಹ್ಯಾಪಿ ಮ್ಯಾರೀಡ್‌ ಲೈಫ್‌

ಹೊಸ ಹುಡುಗರ ಹ್ಯಾಪಿ ಮ್ಯಾರೀಡ್‌ ಲೈಫ್‌ ಸಿನಿಮಾ ಇಂದು ರಿಲೀಸ್‌ ಆಗುತ್ತಿದೆ. ಆನಂದ್‌ ವಠಾರ್‌ ನಿರ್ದೇಶನದಲ್ಲಿ ತಯಾರಾಗಿರುವ ಚಿತ್ರಕ್ಕೆ ಮಲ್ಲೇಶ್‌ ಎನ್‌ ಕೆ ಹಣ ಹೂಡಿದ್ದಾರೆ. ವಿದ್ಯೆ ಮತ್ತು ಸಮಯಕ್ಕೆ ಬೆಲೆ ನೀಡದ ಓರ್ವ ವ್ಯಕ್ತಿಯ ಜೀವನ ಕುರಿತಾದ ಸಿನಿಮಾ ಇದಾಗಿದ್ದು, ಹತ್ತು ಹಲವು ಸಂದೇಶಗಳನ್ನು ಈ ಚಿತ್ರ ನೀಡಲಿದೆಯಂತೆ. ನಿರ್ದೇಶಕರೇ ಚಿತ್ರಕ್ಕೆ ಛಾಯಾಗ್ರಣ ಮಾಡಿದ್ದು, ಅನೀಲ್‌ ಸಿ ಜೆ ಸಂಗೀತ ನೀಡಿದ್ದಾರೆ. ತಾರಾಗಣದಲ್ಲಿ ಮಲ್ಲೇಶ್‌, ತ್ರಿಶಾ, ಸುಮನಾ ಸೇರಿದಂತೆ ಮತ್ತಿತರರು ಇದ್ದಾರೆ.

ಈ ವಾರ ಒಟ್ಟು ಎಂಟು ಚಿತ್ರಗಳು ರಿಲೀಸ್‌ ಆಗುತ್ತಿದ್ದು, ಹೊಸಬರ ಎನ್‌ಎಚ್‌ 37, ತಕೋತ್ಕರ್ಷ ಮತ್ತು ಜೀರೋ ಮೇಡ್‌ ಇನ್‌ ಇಂಡಿಯಾ ಸಿನಿಮಾಗಳು ಕೂಡ ಬಿಡುಗಡೆಯ ಪಟ್ಟಿಯಲ್ಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌