'ಸ್ಟೈಲಿಶ್ ಸ್ಟಾರ್' ಖ್ಯಾತಿಯ ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅವರು ಆಂಧ್ರವನ್ನೂ ಮೀರಿ ಇಡೀ ಇಂಡಿಯಾಗೇ ಫೇಮಸ್. ಅಲ್ಲು ಅರ್ಜುನ್ ಕೇವಲ ತೆಲುಗು ಚಿತ್ರಗಳಲ್ಲಿ ಮಾತ್ರ ನಟಿಸಿದರೂ ಅದು ಬೇರೆ ಭಾಷೆಗಳಲ್ಲಿ ಡಬ್ ಆಗಿ ಅವರಿಗೆ ಪರಭಾಷೆಗಳಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಅದರಲ್ಲೂ ಕೇರಳದಲ್ಲಿ ಗಣನೀಯ ಅಭಿಮಾನಿಗಳನ್ನು ಹೊಂದಿದ್ದಾರೆ. ಅಚ್ಚರಿ ಎಂಬಂತೆ, ಅಲ್ಲು ಅರ್ಜುನ್ ಅವರನ್ನು ಕೇರಳದ ಜನರು 'ಮಲ್ಲು ಅರ್ಜುನ್' ಎಂದು ಕರೆಯುತ್ತಾರೆ.
ಯೂಟ್ಯೂಬ್ನಲ್ಲಿ ಅಲ್ಲಿ ಅರ್ಜುನ್ ಡಬ್ ಮಾಡಲಾದ ಚಲನಚಿತ್ರಗಳೂಸೂಪರ್ ಹಿಟ್ ಆಗುತ್ತವೆ. ಇತ್ತೀಚೆಗೆ, ನಟ ಅಲ್ಲು ಅರ್ಜೂನ್ ಅವರು ತಾವು ಬಾಲಿವುಡ್ ಚಿತ್ರಗಳಲ್ಇ ನಟಿಸುವ ಬಯಕೆ ಹೊಂದಿರುವುದಾಗಿ ಹೇಳಿದ್ದಾರೆ. "ನಾನು ಇನ್ಮುಂದೆ ಬಾಲಿವುಡ್ ಚಿತ್ರಗಳನ್ನೂ ಮಾಡಲು ಬಯಸುತ್ತಿದ್ದೇನೆ. ನನ್ನ ವೃತ್ತಿಜೀವನದಲ್ಲಿ ನಾನು ಬಾಲಿವುಡ್ ಚಿತ್ರಗಳನ್ನು ಸಹ ಮಾಡಬೇಕು ಎಂದು ನನಗೆ ಬಲವಾಗಿ ಎನಿಸುತ್ತಿದೆ" ಎಂದಿದ್ದಾರೆ ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್.
16 ವರ್ಷಗಳ ಕಾಲದ ತಮ್ಮ ವೃತ್ತಿಜೀವನದ ಬಗ್ಗೆ ಮಾತನಾಡುತ್ತಾ ನಟ ಅಲ್ಲು ಅರ್ಜನ್ ಅವರು "ನನ್ನ ಬಗ್ಗೆ, ನನ್ನ ವೃತ್ತಿಜೀವನದ ಪ್ರಯಾಣದ ಬಗ್ಗೆ ನನಗೆ ತೃಪ್ತಿ ಇದೆ...ನಾನು ಮತ್ತೆ ತ್ರಿವಿಕ್ರಂ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ.. ಸುಕುಮಾರ್ ಜೊತೆ ನಾನು ಮಾಡುತ್ತಿರುವ ಮುಂಬರುವ ಚಿತ್ರವು ಒಂದು ಮನರಂಜನಾ ಚಿತ್ರ.." ಎಂದಿದ್ದಾರೆ ನಟ ಅಲ್ಲು ಅರ್ಜನ್.
ಇನ್ನು ನಿರ್ದೇಶಕ ಸುಕುಮಾರ್ ಬಗ್ಗೆ ಅವರು ಮಾತನಾಡುತ್ತಾ, "ಸುಕುಮಾರ್ ನನ್ನ ಅತ್ಯುತ್ತಮ ಸ್ನೇಹಿತ.. ಮೂರನೆಯ ಬಾರಿಗೆ ಸುಕುಮಾರ್ ಅವರೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ.. "ನಾನು ಯಾವಾಗಲೂ ಹೊಸ ಹೊಸ ರೀತಿಯ ಪಾತ್ರಗಳನ್ನು ಮಾಡಲು ಬಯಸುತ್ತೇನೆ.. ನನ್ನದೇ ಹಿಂದಿನ ಪಾತ್ರಗಳಂತೆಯೇ ಅಥವಾ ಬೇರೆಯವರು ಈಗಾಗಲೇ ಮಾಡಿದ್ದ ಪಾತ್ರವನ್ನು ಮತ್ತೆ ನಾನು ಪುನರಾವರ್ತಿಸಲು ಬಯಸುವುದಿಲ್ಲ" ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ. ಇದೀಗ ಅಲ್ಲು ಅರ್ಜುನ್ ಮಾತುಗಳು ಟಾಲಿವುಡ್ ಮೀರಿ ಚರ್ಚೆಗೆ ಗುರಿಯಾಗಿವೆ ಎನ್ನಲಾಗಿದೆ.
ಯೂಟ್ಯೂಬ್ನಲ್ಲಿ ಅಲ್ಲಿ ಅರ್ಜುನ್ ಡಬ್ ಮಾಡಲಾದ ಚಲನಚಿತ್ರಗಳೂಸೂಪರ್ ಹಿಟ್ ಆಗುತ್ತವೆ. ಇತ್ತೀಚೆಗೆ, ನಟ ಅಲ್ಲು ಅರ್ಜೂನ್ ಅವರು ತಾವು ಬಾಲಿವುಡ್ ಚಿತ್ರಗಳಲ್ಇ ನಟಿಸುವ ಬಯಕೆ ಹೊಂದಿರುವುದಾಗಿ ಹೇಳಿದ್ದಾರೆ. "ನಾನು ಇನ್ಮುಂದೆ ಬಾಲಿವುಡ್ ಚಿತ್ರಗಳನ್ನೂ ಮಾಡಲು ಬಯಸುತ್ತಿದ್ದೇನೆ. ನನ್ನ ವೃತ್ತಿಜೀವನದಲ್ಲಿ ನಾನು ಬಾಲಿವುಡ್ ಚಿತ್ರಗಳನ್ನು ಸಹ ಮಾಡಬೇಕು ಎಂದು ನನಗೆ ಬಲವಾಗಿ ಎನಿಸುತ್ತಿದೆ" ಎಂದಿದ್ದಾರೆ ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್.
16 ವರ್ಷಗಳ ಕಾಲದ ತಮ್ಮ ವೃತ್ತಿಜೀವನದ ಬಗ್ಗೆ ಮಾತನಾಡುತ್ತಾ ನಟ ಅಲ್ಲು ಅರ್ಜನ್ ಅವರು "ನನ್ನ ಬಗ್ಗೆ, ನನ್ನ ವೃತ್ತಿಜೀವನದ ಪ್ರಯಾಣದ ಬಗ್ಗೆ ನನಗೆ ತೃಪ್ತಿ ಇದೆ...ನಾನು ಮತ್ತೆ ತ್ರಿವಿಕ್ರಂ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ.. ಸುಕುಮಾರ್ ಜೊತೆ ನಾನು ಮಾಡುತ್ತಿರುವ ಮುಂಬರುವ ಚಿತ್ರವು ಒಂದು ಮನರಂಜನಾ ಚಿತ್ರ.." ಎಂದಿದ್ದಾರೆ ನಟ ಅಲ್ಲು ಅರ್ಜನ್.
ಇನ್ನು ನಿರ್ದೇಶಕ ಸುಕುಮಾರ್ ಬಗ್ಗೆ ಅವರು ಮಾತನಾಡುತ್ತಾ, "ಸುಕುಮಾರ್ ನನ್ನ ಅತ್ಯುತ್ತಮ ಸ್ನೇಹಿತ.. ಮೂರನೆಯ ಬಾರಿಗೆ ಸುಕುಮಾರ್ ಅವರೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ.. "ನಾನು ಯಾವಾಗಲೂ ಹೊಸ ಹೊಸ ರೀತಿಯ ಪಾತ್ರಗಳನ್ನು ಮಾಡಲು ಬಯಸುತ್ತೇನೆ.. ನನ್ನದೇ ಹಿಂದಿನ ಪಾತ್ರಗಳಂತೆಯೇ ಅಥವಾ ಬೇರೆಯವರು ಈಗಾಗಲೇ ಮಾಡಿದ್ದ ಪಾತ್ರವನ್ನು ಮತ್ತೆ ನಾನು ಪುನರಾವರ್ತಿಸಲು ಬಯಸುವುದಿಲ್ಲ" ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ. ಇದೀಗ ಅಲ್ಲು ಅರ್ಜುನ್ ಮಾತುಗಳು ಟಾಲಿವುಡ್ ಮೀರಿ ಚರ್ಚೆಗೆ ಗುರಿಯಾಗಿವೆ ಎನ್ನಲಾಗಿದೆ.