ಆ್ಯಪ್ನಗರ

ಸ್ಯಾಂಡಲ್‌ವುಡ್‌ನಲ್ಲಿ ಹೆಜ್ಜೆ ಹಾಕಲಿರುವ 'ಮಹಾನಟಿ' ಕೀರ್ತಿ ಸುರೇಶ್

ಮಹಾನಟಿ ಚಿತ್ರದಲ್ಲಿ ತೆಲುಗಿನ ಹಿರಿಯ ನಟಿ ಸಾವಿತ್ರಿ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕೀರ್ತಿ ಸುರೇಶ್, ದೇಶಾದ್ಯಂತ ಅಪಾರ ಜನಮನ್ನಣೆ ಗಳಿಸಿದ್ದಾರೆ. ಮಹಾನಟಿ ಬಯೋಪಿಕ್ ಚಿತ್ರದಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಸಿನಿ ಪ್ರೇಕ್ಷಕರನ್ನು ಮಂತ್ರಮುಗ್ಧ ಗೊಳಿಸಿರುವ ಕೀರ್ತಿ ಸುರೇಶ್ ಅವರ ಕೀರ್ತಿ ಆಂಧ್ರದಾಚೆಗೂ ವಿಸ್ತರಿಸಿದೆ.

Vijaya Karnataka Web 21 Feb 2019, 12:33 pm
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದಲ್ಲಿರುವ ಮೂಡಿ ಬರಲಿರುವ 'ಗಂಡುಗಲಿ ಮದಕರಿ ನಾಯಕ' ಚಿತ್ರಕ್ಕೆ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಟಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಬೆಳೆದಿರುವ ಕೀರ್ತಿ ಸುರೇಶ್ ಕನ್ನಡದಲ್ಲಿ ದರ್ಶನ್ ತೂಗುದೀಪ ಅವರ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ವೀರ ಮದಕರಿ ನಾಯಕ ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡಲಿದ್ದಾರೆ.
Vijaya Karnataka Web keerhty21


ಮಹಾನಟಿ ಚಿತ್ರದಲ್ಲಿ ತೆಲುಗಿನ ಹಿರಿಯ ನಟಿ ಸಾವಿತ್ರಿ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕೀರ್ತಿ ಸುರೇಶ್, ದೇಶಾದ್ಯಂತ ಅಪಾರ ಜನಮನ್ನಣೆ ಗಳಿಸಿದ್ದಾರೆ. ಮಹಾನಟಿ ಬಯೋಪಿಕ್ ಚಿತ್ರದಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಸಿನಿ ಪ್ರೇಕ್ಷಕರನ್ನು ಮಂತ್ರಮುಗ್ಧ ಗೊಳಿಸಿರುವ ಕೀರ್ತಿ ಸುರೇಶ್ ಅವರ ಕೀರ್ತಿ ಆಂಧ್ರದಾಚೆಗೂ ವಿಸ್ತರಿಸಿದೆ. ಇತ್ತೀಚಿಗೆ ತಮಿಳು ನಟ ವಿಜಯ್ ಜೊತೆ ಕೂಡ ಕೀರ್ತಿ ಸುರೇಶ್ ನಟಿಸಿದ್ದಾರೆ. ಇದೀಗ ಕನ್ನಡಕ್ಕೂ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ.

ದರ್ಶನ್ ನಾಯಕತ್ವದ ಯಜಮಾನ ಚಿತ್ರವು ಮುಂದಿನ ತಿಂಗಳು ಮಾರ್ಚ್ 01, 2019ರಂದು ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಸಂಗೀತ ನಿರ್ದೇಶಕರಾಗಿ ಖ್ಯಾತರಾಗಿರುವ ವಿ ಹರಿಕೃಷ್ಣ ಅವರು ಮೊದಲ ಬಾರಿಗೆ ನಿರ್ದೇಶಿಸಿದ್ದಾರೆ. ಚಿತ್ರವನ್ನು ಶೈಲಜಾ ನಾಗ್ ಮತ್ತು ಬಿ ಸುರೇಶ್ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಯಜಮಾನ ಟ್ರೇಲರ್ ಸೂಪರ್ ಹಿಟ್ ಆಗಿದ್ದು ಹಾಡುಗಳು ಕೂಡ ಸಖತ್ ಸದ್ದು ಮಾಡಿವೆ. ದರ್ಶನ್ ನಾಯಕತ್ವದ 51ನೇ ಚಿತ್ರವಾಗಿ ಯಜಮಾನ ಮೂಡಿ ಬರಲಿದೆ.

ತಮ್ಮ ವೃತ್ತಿ ಜೀವನದ 50ನೇ ಚಿತ್ರ ಕುರುಕ್ಷೇತ್ರ ಹಾಗೂ 51ನೇ ಚಿತ್ರ ಯಜಮಾನ ಎಂದು ಸ್ವತಃ ದರ್ಶನ್ ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ದರ್ಶನ್ ನಾಯಕತ್ವದಲ್ಲಿ ಯಜಮಾನಕ್ಕಿಂತ ಮೊದಲು ಸೆಟ್ಟೇರಿದ್ದ ಕುರುಕ್ಷೇತ್ರ ಚಿತ್ರವು ಇನ್ನೂ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ಆದರೆ ನಂತರ ಸೆಟ್ಟೇರಿದ್ದ ಯಜಮಾನ ಮಾರ್ಚ್ 01ರಂದು ಬಿಡುಗಡೆಗೆ ಸಜ್ಜಾಗಿದೆ. ಹೀಗಾಗಿ, ದರ್ಶನ್ ಅವರ 50ನೇ ಚಿತ್ರದ ವಿಷಯದಲ್ಲಿ ಮಾಧ್ಯಮ ಹಾಗೂ ಸಿನಿ ಪ್ರೇಕ್ಷಕರಲ್ಲಿ ಗೊಂದಲ ಉಂಟಾಗಿತ್ತು. ಈ ಎಲ್ಲ ಗೊಂದಲಕ್ಕೆ ಸ್ವತಃ ದರ್ಶನ್ ತೆರೆ ಎಳೆದಿದ್ದಾರೆ. ಕುರುಕ್ಷೇತ್ರ ಚಿತ್ರವೇ ತಮ್ಮ 50ನೇ ಚಿತ್ರ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌