ಈ ವಾರ ಒಂಬತ್ತು ಕನ್ನಡ ಸಿನಿಮಾಗಳು ತೆರೆಕಾಣುತ್ತಿವೆ. ಚುನಾವಣೆ ಹಿನ್ನೆಲೆಯಲ್ಲಿ ಆದಷ್ಟು ಸಿನಿಮಾಗಳು ತೆರೆಗೆ ಅಪ್ಪಳಿಸುತ್ತಿವೆ. ಇದರ ಜತೆಗೆ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷಾ ಸಮಯ, ಬೇಸಿಗೆ ಝಳ ಬೇಳೆ. ಹಾಗಾಗಿ ಈ ವಾರ ಚಿತ್ರಮಂದಿರಗಳು ಖಾಲಿ ಇಲ್ಲ. ಎಲ್ಲವೂ ಸಿನಿಮಾಗಳಿಂದ ಭರ್ತಿ ಆಗಿವೆ.
ಯದಾ ಯದಾ ಧರ್ಮಸ್ಯ
ವಿಜಯ ರಾಘವೇಂದ್ರಮತ್ತು ಪ್ರಜ್ವಲ್ ದೇವರಾಜ್ ಮುಖ್ಯ ಭೂಮಿಕೆಯ ಮಲ್ಟಿಸ್ಟಾರ್ ಸಿನಿಮಾ 'ಯದಾ ಯದಾ ಧರ್ಮಸ್ಯ' ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಧರ್ಮ ಮತ್ತು ಅಧರ್ಮಗಳ ನಡುವಿನ ರೋಚಕ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲು ಹೊರಟಿದ್ದಾರಂತೆ ನಿರ್ದೇಶಕ ರಾಜ್. ಈ ಸಿನಿಮಾದ ವಿಶೇಷ ಅಂದರೆ, ಸಾಯಿಕುಮಾರ್, ಶ್ರಾವ್ಯ ಸೇರಿದಂತೆ ಹಲವು ಹೆಸರಾಂತ ಕಲಾವಿದರು ಚಿತ್ರದಲ್ಲಿ ಇದ್ದಾರೆ. ಜೂಡ ಸ್ಯಾಂಡಿ ಸಂಗೀತ, ಶಂಕರ್ ಛಾಯಾಗ್ರಹಣ ಈ ಸಿನಿಮಾ ಮೂಡಿ ಬಂದಿದೆ.
ಪಂಚತಂತ್ರ
ವಿಹಾನ್ ಗೌಡ ಮುಖ್ಯ ಭೂಮಿಕೆಯ ಪಂಚತಂತ್ರ ಸಿನಿಮಾ ಇಂದು ರಿಲೀಸ್ ಆಗುತ್ತಿದೆ. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ಎರಡು ತಲೆಮಾರಿನ ಕಥೆ ಹೇಳುತ್ತಿದ್ದಾರಂತೆ ನಿರ್ದೇಶಕರು. ಸುಜ್ಞಾನ್ ಛಾಯಾಗ್ರಹಣ, ಹರಿಕೃಷ್ಣ ಸಂಗೀತ ನಿರ್ದೇಶನ ಚಿತ್ರಕ್ಕಿದ್ದು, ಸೋನಾಲ್, ಅಕ್ಷರ, ರಂಗಾಯಣ ರಘು ಮುಂತಾದವರು ನಟಿಸಿದ್ದಾರೆ.
ರಣರಣಕ
ದಿವಾಕರ್ ನಿರ್ದೇಶನದ 'ರಣಕಣಕ' ಚಿತ್ರ ಇಂದು ಬಿಡುಗಡೆ ಆಗುತ್ತಿದೆ. ಯುವಕರ ಸುತ್ತ ಹೆಣೆದ ಕಥೆ ಸಿನಿಮಾದಲ್ಲಿದೆ. ತಾರಾಗಣದಲ್ಲಿ ಶಶಿರಾಜ್, ಸಂಭ್ರಮ, ಶೋಭ್ರಾಜ್, ಟೆನ್ನಿಸ್ ಕೃಷ್ಣ, ಬಿರಾದಾರ್ ಮೊದಲಾದವರು ತಾರಾಗಣದಲ್ಲಿ ಇದ್ದಾರೆ.
ಧರ್ಮಪುರ
ರಮೇಶ್ ಮತ್ತು ಅಮೃತಾ ರಾಜ್ ಮುಖ್ಯ ಭೂಮಿಕೆಯ 'ಧರ್ಮಪುರ' ಚಿತ್ರ ಇಂದು ಬಿಡುಗಡೆ ಆಗುತ್ತಿದೆ. ಇದೊಂದು ಕೌಟುಂಬಿ ಕಥೆಯನ್ನು ಆಧರಿಸಿದ ಚಿತ್ರ. ಹೇಮಂತ್ ನಾಯ್ಕ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದ್ದು, ರಾಣಿ ಪದ್ಮಜಾ ಚವ್ಹಾಣ್, ಯುವರಾಜ್ ರಾಥೋಡ್, ಮುರುಗೇಶ್ ಮುಂತಾದವರು ತಾರಾಗಣದಲ್ಲಿ ಇದ್ದಾರೆ.
ರವಿ ಹಿಸ್ಟರಿ
ಯುವಕ ಯುವತಿಯರ ಕಥೆಯನ್ನು ಹೊಂದಿರುವ 'ರವಿ ಹಿಸ್ಟರಿ' ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ಮಧುಚಂದ್ರ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಸೂರಜ್ ಸರ್ಜಾ ಸಂಗೀತ ಮತ್ತು ಅನಂತ್ ಅರಸ್ ಛಾಯಾಗ್ರಹಣ ಮಾಡಿದ್ದಾರೆ. ಕಾರ್ತಿಕ್ ಚಂದ್ರ, ಪಲ್ಲವಿ ರಾಜು, ಐಶ್ವರ್ಯ ಮುಂತಾದವರು ತಾರಾಗಣಲ್ಲಿ ಇದ್ದಾರೆ.
ಗಂಧದ ಕುಡಿ
ಮಕ್ಕಳ ಚಿತ್ರ 'ಗಂಧದ ಕುಡಿ' ಇಂದು ಬಿಡುಗಡೆ ಆಗುತ್ತಿದೆ. ಸಂತೋಷ್ ಶೆಟ್ಟಿ ಕಟೀಲ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಸಚಿನ್ ಶೆಟ್ಟಿ ಛಾಯಾಗ್ರಹಣ, ಪ್ರಸಾದ್ ಶೆಟ್ಟಿ ಸಂಗೀತ ನಿರ್ದೇಶನ ಮಾಡಿದ್ದಾರೆ. ತಾರಾಗಣದಲ್ಲಿ ರಮೇಶ್ ಭಟ್, ಶಿವಧ್ವಜ್, ಜ್ಯೋತಿ ರೈ, ಅರವಿಂದ್ ಶೆಟ್ಟಿ ಇದ್ದಾರೆ.
ಹನಿಗಳು
ನಾಗರಾಜ್ ನಿರ್ದೇಶನದ 'ಹನಿಗಳು' ಚಿತ್ರ ಇಂದು ಬಿಡುಗಡೆ ಆಗುತ್ತಿದೆ. ಹಳ್ಳಿ ಹುಡುಗನೊಬ್ಬನ ಲವ್ಸ್ಟೋರಿ ಈ ಸಿನಿಮಾದಲ್ಲಿದ್ದು, ನಾಗೇಶ್ ಮತ್ತು ಪಲ್ಲವಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ದಿನೇಶ್ ಕುಮಾರ್ ಸಂಗೀತ, ಅರುಣ್ ಗೂಳೂರು ಛಾಯಾಗ್ರಹಣ ಇರುವ ಸಿನಿಮಾದಲ್ಲಿ, ಮಧು, ಬಸವರಾಜ್, ಜೀವನ್ ಮುಂತಾದವರು ನಟಿಸಿದ್ದಾರೆ.
ಲಂಡನಲ್ಲಿ ಲಂಬೋದರ
ಹೊಸ ಹುಡುಗರ 'ಲಂಡನ್ನಲ್ಲಿ ಲಂಬೋದರ' ಚಿತ್ರ ಇಂದು ಬಿಡುಗಡೆ ಆಗುತ್ತಿದೆ. ಹಾಸ್ಯ ಮತ್ತು ದೇಶ ಪ್ರೇಮ ಕಥಾ ಹಂದರ ಹೊಂದಿರುವ ಸಿನಿಮಾವಿದು. ರಾಜ್ ಸೂರ್ಯ ನಿರ್ದೇಶನ ಚಿತ್ರಕ್ಕಿದ್ದು, ಸಂತು ಕಥಾ ನಾಯಕ. ಶ್ರುತಿ ಪ್ರಕಾಶ್ ನಾಯಕಿ. ಸಾಧು ಕೋಕಿಲ, ಅಚ್ಯುತ್ ಕುಮಾರ್, ಸಂಪತ್ ರಾಜ್ ಮೊದಲಾದವರ ತಾರಾಗಣವಿದೆ.
ರಗಡ್
ವಿನೋದ್ ಪ್ರಭಾಕರ್ ನಟನೆಯ ರಗಡ್ ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ಇದೊಂದು ಲವ್ ಮತ್ತು ಆ್ಯಕ್ಷನ್ ಕಥೆಯನ್ನು ಹೊಂದಿರುವ ಸಿನಿಮಾ. ಮಹೇಶ್ ಗೌಡ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಅಭಿಮನ್ ರಾಯ್ ಸಂಗೀತ ನೀಡಿದ್ದಾರೆ.
ಚೈತ್ರಾ ರೆಡ್ಡಿ ನಾಯಕಿಯಾಗಿ ನಟಿಸಿದ್ದರೆ, ರಾಜೇಶ್ ನಟರಂಗ, ದೀಪಕ್ ಶೆಟ್ಟಿ, ಡ್ಯಾನಿ ಕುಟ್ಟಪ್ಪ ಮುಂತಾದವರು ತಾರಾಗಣದಲ್ಲಿ ಇದ್ದಾರೆ.
ಯದಾ ಯದಾ ಧರ್ಮಸ್ಯ
ವಿಜಯ ರಾಘವೇಂದ್ರಮತ್ತು ಪ್ರಜ್ವಲ್ ದೇವರಾಜ್ ಮುಖ್ಯ ಭೂಮಿಕೆಯ ಮಲ್ಟಿಸ್ಟಾರ್ ಸಿನಿಮಾ 'ಯದಾ ಯದಾ ಧರ್ಮಸ್ಯ' ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಧರ್ಮ ಮತ್ತು ಅಧರ್ಮಗಳ ನಡುವಿನ ರೋಚಕ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲು ಹೊರಟಿದ್ದಾರಂತೆ ನಿರ್ದೇಶಕ ರಾಜ್. ಈ ಸಿನಿಮಾದ ವಿಶೇಷ ಅಂದರೆ, ಸಾಯಿಕುಮಾರ್, ಶ್ರಾವ್ಯ ಸೇರಿದಂತೆ ಹಲವು ಹೆಸರಾಂತ ಕಲಾವಿದರು ಚಿತ್ರದಲ್ಲಿ ಇದ್ದಾರೆ. ಜೂಡ ಸ್ಯಾಂಡಿ ಸಂಗೀತ, ಶಂಕರ್ ಛಾಯಾಗ್ರಹಣ ಈ ಸಿನಿಮಾ ಮೂಡಿ ಬಂದಿದೆ.
ಪಂಚತಂತ್ರ
ವಿಹಾನ್ ಗೌಡ ಮುಖ್ಯ ಭೂಮಿಕೆಯ ಪಂಚತಂತ್ರ ಸಿನಿಮಾ ಇಂದು ರಿಲೀಸ್ ಆಗುತ್ತಿದೆ. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ಎರಡು ತಲೆಮಾರಿನ ಕಥೆ ಹೇಳುತ್ತಿದ್ದಾರಂತೆ ನಿರ್ದೇಶಕರು. ಸುಜ್ಞಾನ್ ಛಾಯಾಗ್ರಹಣ, ಹರಿಕೃಷ್ಣ ಸಂಗೀತ ನಿರ್ದೇಶನ ಚಿತ್ರಕ್ಕಿದ್ದು, ಸೋನಾಲ್, ಅಕ್ಷರ, ರಂಗಾಯಣ ರಘು ಮುಂತಾದವರು ನಟಿಸಿದ್ದಾರೆ.
ರಣರಣಕ
ದಿವಾಕರ್ ನಿರ್ದೇಶನದ 'ರಣಕಣಕ' ಚಿತ್ರ ಇಂದು ಬಿಡುಗಡೆ ಆಗುತ್ತಿದೆ. ಯುವಕರ ಸುತ್ತ ಹೆಣೆದ ಕಥೆ ಸಿನಿಮಾದಲ್ಲಿದೆ. ತಾರಾಗಣದಲ್ಲಿ ಶಶಿರಾಜ್, ಸಂಭ್ರಮ, ಶೋಭ್ರಾಜ್, ಟೆನ್ನಿಸ್ ಕೃಷ್ಣ, ಬಿರಾದಾರ್ ಮೊದಲಾದವರು ತಾರಾಗಣದಲ್ಲಿ ಇದ್ದಾರೆ.
ಧರ್ಮಪುರ
ರಮೇಶ್ ಮತ್ತು ಅಮೃತಾ ರಾಜ್ ಮುಖ್ಯ ಭೂಮಿಕೆಯ 'ಧರ್ಮಪುರ' ಚಿತ್ರ ಇಂದು ಬಿಡುಗಡೆ ಆಗುತ್ತಿದೆ. ಇದೊಂದು ಕೌಟುಂಬಿ ಕಥೆಯನ್ನು ಆಧರಿಸಿದ ಚಿತ್ರ. ಹೇಮಂತ್ ನಾಯ್ಕ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದ್ದು, ರಾಣಿ ಪದ್ಮಜಾ ಚವ್ಹಾಣ್, ಯುವರಾಜ್ ರಾಥೋಡ್, ಮುರುಗೇಶ್ ಮುಂತಾದವರು ತಾರಾಗಣದಲ್ಲಿ ಇದ್ದಾರೆ.
ರವಿ ಹಿಸ್ಟರಿ
ಯುವಕ ಯುವತಿಯರ ಕಥೆಯನ್ನು ಹೊಂದಿರುವ 'ರವಿ ಹಿಸ್ಟರಿ' ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ಮಧುಚಂದ್ರ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಸೂರಜ್ ಸರ್ಜಾ ಸಂಗೀತ ಮತ್ತು ಅನಂತ್ ಅರಸ್ ಛಾಯಾಗ್ರಹಣ ಮಾಡಿದ್ದಾರೆ. ಕಾರ್ತಿಕ್ ಚಂದ್ರ, ಪಲ್ಲವಿ ರಾಜು, ಐಶ್ವರ್ಯ ಮುಂತಾದವರು ತಾರಾಗಣಲ್ಲಿ ಇದ್ದಾರೆ.
ಗಂಧದ ಕುಡಿ
ಮಕ್ಕಳ ಚಿತ್ರ 'ಗಂಧದ ಕುಡಿ' ಇಂದು ಬಿಡುಗಡೆ ಆಗುತ್ತಿದೆ. ಸಂತೋಷ್ ಶೆಟ್ಟಿ ಕಟೀಲ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಸಚಿನ್ ಶೆಟ್ಟಿ ಛಾಯಾಗ್ರಹಣ, ಪ್ರಸಾದ್ ಶೆಟ್ಟಿ ಸಂಗೀತ ನಿರ್ದೇಶನ ಮಾಡಿದ್ದಾರೆ. ತಾರಾಗಣದಲ್ಲಿ ರಮೇಶ್ ಭಟ್, ಶಿವಧ್ವಜ್, ಜ್ಯೋತಿ ರೈ, ಅರವಿಂದ್ ಶೆಟ್ಟಿ ಇದ್ದಾರೆ.
ಹನಿಗಳು
ನಾಗರಾಜ್ ನಿರ್ದೇಶನದ 'ಹನಿಗಳು' ಚಿತ್ರ ಇಂದು ಬಿಡುಗಡೆ ಆಗುತ್ತಿದೆ. ಹಳ್ಳಿ ಹುಡುಗನೊಬ್ಬನ ಲವ್ಸ್ಟೋರಿ ಈ ಸಿನಿಮಾದಲ್ಲಿದ್ದು, ನಾಗೇಶ್ ಮತ್ತು ಪಲ್ಲವಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ದಿನೇಶ್ ಕುಮಾರ್ ಸಂಗೀತ, ಅರುಣ್ ಗೂಳೂರು ಛಾಯಾಗ್ರಹಣ ಇರುವ ಸಿನಿಮಾದಲ್ಲಿ, ಮಧು, ಬಸವರಾಜ್, ಜೀವನ್ ಮುಂತಾದವರು ನಟಿಸಿದ್ದಾರೆ.
ಲಂಡನಲ್ಲಿ ಲಂಬೋದರ
ಹೊಸ ಹುಡುಗರ 'ಲಂಡನ್ನಲ್ಲಿ ಲಂಬೋದರ' ಚಿತ್ರ ಇಂದು ಬಿಡುಗಡೆ ಆಗುತ್ತಿದೆ. ಹಾಸ್ಯ ಮತ್ತು ದೇಶ ಪ್ರೇಮ ಕಥಾ ಹಂದರ ಹೊಂದಿರುವ ಸಿನಿಮಾವಿದು. ರಾಜ್ ಸೂರ್ಯ ನಿರ್ದೇಶನ ಚಿತ್ರಕ್ಕಿದ್ದು, ಸಂತು ಕಥಾ ನಾಯಕ. ಶ್ರುತಿ ಪ್ರಕಾಶ್ ನಾಯಕಿ. ಸಾಧು ಕೋಕಿಲ, ಅಚ್ಯುತ್ ಕುಮಾರ್, ಸಂಪತ್ ರಾಜ್ ಮೊದಲಾದವರ ತಾರಾಗಣವಿದೆ.
ರಗಡ್
ವಿನೋದ್ ಪ್ರಭಾಕರ್ ನಟನೆಯ ರಗಡ್ ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ಇದೊಂದು ಲವ್ ಮತ್ತು ಆ್ಯಕ್ಷನ್ ಕಥೆಯನ್ನು ಹೊಂದಿರುವ ಸಿನಿಮಾ. ಮಹೇಶ್ ಗೌಡ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಅಭಿಮನ್ ರಾಯ್ ಸಂಗೀತ ನೀಡಿದ್ದಾರೆ.
ಚೈತ್ರಾ ರೆಡ್ಡಿ ನಾಯಕಿಯಾಗಿ ನಟಿಸಿದ್ದರೆ, ರಾಜೇಶ್ ನಟರಂಗ, ದೀಪಕ್ ಶೆಟ್ಟಿ, ಡ್ಯಾನಿ ಕುಟ್ಟಪ್ಪ ಮುಂತಾದವರು ತಾರಾಗಣದಲ್ಲಿ ಇದ್ದಾರೆ.