ಆ್ಯಪ್ನಗರ

ಇಳಯರಾಜಗೆ 'ಪದ್ಮ' ಗರಿ; ಮೈಸೂರು ಬಾಬು ಸಂಭ್ರಮ ನೋಡಿ

ಭಾರತೀಯ ಚಲನಚಿತ್ರ ಸಂಗೀತಲೋಕದ ದಿಗ್ಗಜರಲ್ಲಿ ಒಬ್ಬರಾಗಿರುವ ಇಳಯರಾಜಾ ಅವರು ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ ಗೌರವಕ್ಕೆ ಪಾತ್ರರಾಗಿದ್ದಾರೆ.

Vijaya Karnataka Web 26 Jan 2018, 6:00 pm
ಭಾರತೀಯ ಚಲನಚಿತ್ರ ಸಂಗೀತಲೋಕದ ದಿಗ್ಗಜರಲ್ಲಿ ಒಬ್ಬರಾಗಿರುವ ಇಳಯರಾಜಾ ಅವರು ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಬಗ್ಗೆ ಸಹಜವಾಗಿ ಅವರು ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ.
Vijaya Karnataka Web tribute to padma vibhushan ilaiyaraaja from mysuru babu
ಇಳಯರಾಜಗೆ 'ಪದ್ಮ' ಗರಿ; ಮೈಸೂರು ಬಾಬು ಸಂಭ್ರಮ ನೋಡಿ


ಇಳಯರಾಜಾ ಅವರಿಗೆ 2010ನೇ ಸಾಲಿನಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಲಾಗಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ 6500ಕ್ಕೂ ಹೆಚ್ಚು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುಮಾರು ನಲವತ್ತು ವರ್ಷಗಳ ಕಾಲ ಮನರಂಜನಾ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ಖ್ಯಾತಿ ಅವರದು.

Here's a tribute to #PadmaVibhushan #Ilaiyaraaja all the way from Mysuru. This is Babu, who is often seen playing music in front of the Lalit Mahal Palace. @IlaiyaraajaFans @ilaiyaraajaoffl @ilaiyarajamusic pic.twitter.com/n0C7luH1zc — Bangalore Times (@BangaloreTimes1) January 26, 2018 ಇದೀಗ ಅವರ ಮುಡಿಗೆ ಪದ್ಮವಿಭೂಷಣದ ಗರಿ ಸೇರಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಕಿನ್ನರಿ ಬಾಬು ತಮ್ಮ ವಾದ್ಯದ ಮೂಲಕ ಇಳಯರಾಜಾ ಸಂಗೀತ ಸಂಯೋಜನೆ ಮಾಡಿರುವ ತಮಿಳಿನ 'ಚಿನ್ನತಂಬಿ' ಚಿತ್ರದ ಗೀತೆಯನ್ನು ನುಡಿಸಿ ಸಂಭ್ರಮಿಸಿದ್ದಾರೆ. ಅದರ ವೀಡಿಯೋವನ್ನು ನೋಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌