ಆ್ಯಪ್ನಗರ

ವರದಕ್ಷಿಣೆ ಕಿರುಕುಳ ಕೇಸ್‌: ನಟ ರಾಜೇಶ್ ಧ್ರುವ ಹೇಳಿದ್ದೇನು?

"ನನ್ನ ಪತ್ನಿ ಶ್ರುತಿಯಿಂದಲೇ ನನಗೆ ಮತ್ತು ನನ್ನ ತಾಯಿಗೆ ಮಾನಸಿಕ ಕಿರುಕುಳ ಆಗಿದೆ. ನಾನು ಯಾವತ್ತು ವರದಕ್ಷಿಣೆಗೆ ಬೇಡಿಕೆ ಇಟ್ಟವನೇ ಅಲ್ಲ. ನನ್ನ ಅಮ್ಮ ಮತ್ತು ನನ್ನ ಜೊತೆ ಹೆಂಡತಿ ಶ್ರುತಿಯೇ ಸಹನೆಯಿಂದ ವರ್ತಿಸುತ್ತಿರಲಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ ಇಲ್ಲಸಲ್ಲದ ಸುಳ್ಳು ಆರೋಪ ಮಾಡಿದ್ದಾರೆ" ಎಂಬ ವಿವರಣೆಯನ್ನು ನಟ ರಾಜೇಶ್ ಧ್ರುವ ನೀಡಿದ್ದಾರೆ.

Vijaya Karnataka Web 23 Feb 2019, 5:22 pm
ಕಿರುತೆರೆ ನಟ ರಾಜೇಶ್ ಧ್ರುವ ವಿರುದ್ಧ ಬಸವನಗುಡಿ ಮಹಿಳಾ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ಕೇಸ್ ದಾಖಲಾಗಿದೆ. ಈ ಸಂಬಂಧ ನಿನ್ನೆ ಶುಕ್ರವಾರ, 22 ಫೆಬ್ರವರಿ 2019ರಂದು ಎರಡು ಗಂಟೆಗೂ ಹೆಚ್ಚು ಕಾಲ ರಾಜೇಶ್ ಧ್ರುವ ಪೊಲೀಸ್ ಠಾಣೆಯಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗಿ ತಮ್ಮ ವಿರುದ್ಧ ಹಾಕಲಾಗಿರುವ ಕೇಸ್ ಬಗ್ಗೆ ವಿವರಣೆ ನೀಡಿದ್ದಾರೆ.
Vijaya Karnataka Web rajeshDhruva23


ಬಸವನಗುಡಿ ಮಹಿಳಾ ಠಾಣೆಯಲ್ಲಿ ತಮ್ಮ ವಿರುದ್ಧ 'ಎಫ್‌ಐಆರ್' ದಾಖಲಾಗುತ್ತಿದ್ದಂತೆ ನಟ ರಾಜೇಶ್ ಧ್ರುವ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದು ನೇರವಾಗಿ ಮಹಿಳಾ ಠಾಣೆಗೆ ಹೋಗಿದ್ದಾರೆ. ತಮ್ಮ ತಾಯಿ ಮತ್ತು ವಕೀಲರ ಜೊತೆ ಠಾಣೆಗೆ ಹೋಗಿದ್ದ ರಾಜೇಶ್ ಧ್ರುವ ಇನ್ಸ್‌ಪೆಕ್ಟರ್ ಸತ್ಯವತಿ ಅವರ ಎದುರು ಹಾಜರಾಗಿ ತಮ್ಮ ಮೇಲೆ ಹೊರಿಸಲಾಗಿರುವ ಆರೋಪವನ್ನು ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. ಅಷ್ಟೇ ಅಲ್ಲ, ದೂರು ಕೊಟ್ಟಿರುವ ತಮ್ಮ ಪತ್ನಿ ಶ್ರುತಿ ವಿರುದ್ಧ ತಿರುಗಿ ಬಿದ್ದಿದ್ದಾರೆ.

"ನನ್ನ ಪತ್ನಿ ಶ್ರುತಿಯಿಂದಲೇ ನನಗೆ ಮತ್ತು ನನ್ನ ತಾಯಿಗೆ ಮಾನಸಿಕ ಕಿರುಕುಳ ಆಗಿದೆ. ನಾನು ಯಾವತ್ತು ವರದಕ್ಷಿಣೆಗೆ ಬೇಡಿಕೆ ಇಟ್ಟವನೇ ಅಲ್ಲ. ನನ್ನ ಅಮ್ಮ ಮತ್ತು ನನ್ನ ಜೊತೆ ಹೆಂಡತಿ ಶ್ರುತಿಯೇ ಸಹನೆಯಿಂದ ವರ್ತಿಸುತ್ತಿರಲಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ ಇಲ್ಲಸಲ್ಲದ ಸುಳ್ಳು ಆರೋಪ ಮಾಡಿದ್ದಾರೆ" ಎಂಬ ವಿವರಣೆಯನ್ನು ನಟ ರಾಜೇಶ್ ಧ್ರುವ ನೀಡಿದ್ದಾರೆ.

ತನಿಖೆ ನಡೆದ ಬಳಿಕ, ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಿಂದ ಹೊರಬಂದ ರಾಜೇಶ್ ಧ್ರುವ ಮಾಧ್ಯಮಗಳೊಂದಿಗೆ ಮಾತನಾಡುತ್ತ "ನನಗೆ 3 ಲಕ್ಷ ರೂ. ವರದಕ್ಷಿಣೆ ಕೊಡಲಾಗಿದೆ ಎಂದು ದೂರು ನೀಡಲಾಗಿದೆ. ಆ ಬಗ್ಗೆ ಶ್ರುತಿ ಸಾಕ್ಷಿ ನೀಡಲಿ. ನನಗೆ ಬೇರೆ ಹೆಣ್ಣುಗಳ ಜತೆ ಸಂಬಂಧಗಳು ಇವೆ ಎಂದು ಅವರು ಮಾಡುವ ಆರೋಪದಲ್ಲೂ ಯಾವುದೇ ಹುರುಳಿಲ್ಲ. ಅವರು ಮಾಡುವ ಆರೋಪಕ್ಕೆ ಮೊದಲು ಸಾಕ್ಷಿ ನೀಡಲಿ. ಬಾಯಲ್ಲಿ ಏನು ಬೇಕಾದರೂ ಹೇಳಬಹುದು" ಎಂದಿದ್ದಾರೆ ರಾಜೇಶ್ ಧ್ರುವ.

ಮುಂದುವರಿದ ರಾಜೇಶ್ "ಕಳೆದ ಜುಲೈನಲ್ಲೇ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆಗ ಅವರು ವರದಕ್ಷಿಣೆ ಆರೋಪ ಮಾಡಿಲ್ಲ. ಆದ್ದರಿಂದ ಈಗ ಅವರ ಉದ್ದೇಶ ಬೇರೆಯೇ ಇದೆ ಎಂಬುದು ಸ್ಪಷ್ಟವಾಗಿದೆ. ನಾನು ಯಾವುದೇ ಕಾರಣಕ್ಕೂ ಸತ್ಯ ಹೊರಗೆ ಬರುವವರೆಗೆ ನನ್ನ ಹೋರಾಟ ಬಿಡುವುದಿಲ್ಲ" ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌