ಆ್ಯಪ್ನಗರ

ಸ್ಲಂ ಹುಡುಗರಿಗೆ ಗೌತಮಿ ಪ್ರೀತಿ

ಕಿರುತೆರೆಯ ನಟಿ ಗೌತಮಿ, ಇದೇ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೊಸ ಹುಡುಗರ ಖಲೇಜಾ ಚಿತ್ರದಲ್ಲಿ ಅವರು ವಿಭಿನ್ನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

Vijaya Karnataka Web 18 Mar 2016, 4:00 am
ಕಿರುತೆರೆಯ ಸಾಕಷ್ಟು ನಟಿಯರು ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ. ಅವರ ಸಾಲಿಗೆ ಹೊಸದಾಗಿ ಸೇರ್ಪಡೆ ಆಗುತ್ತಿದ್ದಾರೆ ಗೌತಮಿ. ಬಿಗ್‌ಬಾಸ್ ಮನೆಯಿಂದ ಬಂದ ಮೇಲೆ ಇವರು ಸಿನಿಮಾ ರಂಗದಲ್ಲಿ ಬಿಝಿ ಆಗಿದ್ದಾರೆ. ಖಲೇಜಾ ಸೇರಿದಂತೆ ಹಲವು ಚಿತ್ರಗಳನ್ನೂ ಅವರು ಒಪ್ಪಿಕೊಂಡಿದ್ದಾರೆ.
Vijaya Karnataka Web tv actress gouthami
ಸ್ಲಂ ಹುಡುಗರಿಗೆ ಗೌತಮಿ ಪ್ರೀತಿ


ರಾಜು ಡಿ.ಪದ್ಮಶಾಲಿ ನಿರ್ದೇಶನದಲ್ಲಿ ಖಲೇಜಾ ಸಿನಿಮಾ ಮೂಡಿ ಬರುತ್ತಿದ್ದು, ಮೊನ್ನೆಯಷ್ಟೇ ಚಿತ್ರಕ್ಕೆ ಮುಹೂರ್ತವಾಗಿದೆ. ಈ ಚಿತ್ರದಲ್ಲಿ ಗೌತಮಿ ವಿಭಿನ್ನ ಪಾತ್ರ ನಿರ್ವಹಿಸುತ್ತಿದ್ದು, ಇಬ್ಬರು ಸ್ಲಂ ಹುಡುಗರನ್ನು ಸರಿ ದಾರಿಗೆ ತರುವ ಪಾತ್ರ ಇದಾಗಿದೆ.

‘ಅವರು ಸ್ಲಂನಲ್ಲಿ ಬೆಳೆದ ಹುಡುಗರು. ಐಷಾರಾಮಿ ಬದುಕೇ ನಿಜವಾದ ಜೀವನ ಎಂದು ತಿಳಿದುಕೊಂಡಿರುತ್ತಾರೆ. ಹೀಗಾಗಿ ಅವರು ಅಡ್ಡ ದಾರಿ ಹಿಡಿದು ಹಣ ಗಳಿಸಲು ಮುಂದಾಗುತ್ತಾರೆ. ಅದನ್ನು ತಡೆದು, ಅವರಿಗೆ ಹೊಸ ಜೀವನ ತೋರಿಸುವ ಕೆಲಸ ನನ್ನ ಪಾತ್ರದ್ದು. ಆ ಹುಡುಗರು ನನ್ನ ಮಾತು ಕೇಳುತ್ತಾರಾ ಅಥವಾ ತಮ್ಮದೇ ದಾರಿಯಲ್ಲಿ ಸಾಗುತ್ತಾರಾ ಅನ್ನುವ ಕತೆ ಸಿನಿಮಾದಲ್ಲಿದೆ’ ಅಂತಾರೆ ಗೌತಮಿ.

ಜೈ ಹಿಂದ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕರಾಗಿ ನಟಿಸಿರುವ ಸಂದೇಶ್ ಈ ಚಿತ್ರದಲ್ಲಿ ಸ್ಲಂ ಹುಡುಗನಾಗಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಸಂದೇಶ್ ಇಂಥದ್ದೊಂದು ಕತೆ ಒಪ್ಪಿಕೊಂಡಿದ್ದಾರೆ. ಎಸ್.ನಾಗು ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು, ಪ್ರಸಾದ್ ಅವರ ಸಿನಿಮಾಟೋಗ್ರಫಿ ಇದೆ. ಪಿ.ಸಾಯಿರಾಮ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌