ಆ್ಯಪ್ನಗರ

ರಕ್ತಸಿಕ್ತ ಕಾಲುಗಳ ಉದ್ಘರ್ಷ ಫಸ್ಟ್ ಲುಕ್; ಯಾರದು ಆ ಕಾಲುಗಳು?

ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಿಂದ ಖ್ಯಾತಿ ಗಳಿಸಿದ ಸುನೀಲ್‌ಕುಮಾರ್ ದೇಸಾಯಿ ಮತ್ತೆ ಬಂದಿದ್ದಾರೆ. ತಮ್ಮ ಹೊಸ ಚಿತ್ರದ ಪೋಸ್ಟರ್‌ನ್ನು ಬಿಟ್ಟು ಕುತೂಹಲ ಕೆರಳಿಸಿರುವ ಅವರು, ಈ ಬಗ್ಗೆ ಲವಲವಿಕೆ ಜತೆ ಮಾತನಾಡಿದ್ದಾರೆ.

Vijaya Karnataka 27 Aug 2018, 6:59 pm
* ಹರೀಶ್ ಬಸವರಾಜ್
Vijaya Karnataka Web udgarsha


ಕನ್ನಡದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಿಗೆ ಬೇರೆಯದ್ದೇ ಆಯಾಮ ನೀಡಿದ್ದ ನಿರ್ದೇಶಕ ಸುನೀಲ್‌ಕುಮಾರ್ ದೇಸಾಯಿ ಬಹಳ ವರ್ಷಗಳ ನಂತರ, ತಮ್ಮ ಹಳೇ ಜಾನರ್‌ಗೆ ಮರಳಿದ್ದು, ‘ಉದ್ಘರ್ಷ’ ಎಂಬ ಸಿನಿಮಾ ಮಾಡುತ್ತಿದ್ದಾರೆ. ಇದರ ಫಸ್ಟ್ ಲುಕ್‌ನ್ನು ಬಿಡುಗಡೆ ಮಾಡಿದ್ದಾರೆ.

‘ರೇ’ ಚಿತ್ರದ ನಂತರ ತಮ್ಮ ಶೈಲಿಗೆ ಮರಳಿರುವ ದೇಸಾಯಿ ಅವರು ಫಸ್ಟ್‌ ಲುಕ್‌ ಮೂಲಕವೇ ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಔಟ್ ಆ್ಯಂಡ್ ಔಟ್ ಸಸ್ಪೆನ್ಸ್ ಥ್ರಿಲ್ಲರ್ ಕಥೆಯುಳ್ಳ ಸಿನಿಮಾ ಮೂಲಕ ಅವರು ಕಮ್‌ಬ್ಯಾಕ್ ಆಗುತ್ತಿದ್ದಾರೆ.

ಸದ್ಯ ರಿಲೀಸ್ ಮಾಡಿರೋ ಉದ್ಘರ್ಷ ಚಿತ್ರದ ಪೋಸ್ಟರ್ ಮತ್ತು ಮತ್ತು ಮೋಷನ್ ಪೋಸ್ಟರ್ ಕುತೂಹಲ ಕೆರಳಿಸಿದೆ. ಅದರಲ್ಲಿ ಯುವತಿಯೊಬ್ಬಳ ರಕ್ತಸಿಕ್ತ ಕಾಲುಗಳನ್ನಷ್ಟೇ ತೋರಿಸಿದ್ದಾರೆ. ಇದು ಕ್ರೈಂ ಥ್ರಿಲ್ಲರ್, ಸಸ್ಪೆನ್ಸ್ ಅಂಶಗಳನ್ನು ಒಳಗೊಂಡಿದೆ.

‘ನಾನು ಇದುವರೆಗೂ ಮಾಡಿದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಿಗೂ ಉದ್ಘರ್ಷಕ್ಕೂ ಸಂಬಂಧವಿಲ್ಲ. ಸಿನಿಮಾ ನೋಡಿ ಹೊರ ಬಂದ ಜನ ನಿಜಕ್ಕೂ ಥ್ರಿಲ್‌ಗೆ ಒಳಗಾಗುತ್ತಾರೆ. ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವ ಸಲುವಾಗಿ ಈ ರೀತಿಯ ಪೋಸ್ಟರ್ ಬಿಡುಗಡೆ ಮಾಡಿದ್ದೇವೆ. ಈಗಾಗಲೇ ಸಾಕಷ್ಟು ಜನ ಆ ಕಾಲುಗಳು ಯಾರವು? ಅಲ್ಲಿ ಕೊಲೆಯಾಗಿದೆಯಾ? ಎಂಬಂತಹ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಎಲ್ಲಕ್ಕೂ ಸಿನಿಮಾದಲ್ಲಿ ಉತ್ತರ ನೀಡಲಿದ್ದೇನೆ’ ಎನ್ನುತ್ತಾರೆ ಸುನೀಲ್ ಕುಮಾರ್ ದೇಸಾಯಿ.

ಉದ್ಘರ್ಷ ಸಿನಿಮಾದ ಟಾಕಿ ಭಾಗ ಈಗಾಗಲೇ ಕಂಪ್ಲೀಟ್ ಆಗಿದೆ. ಒಂದೆರೆಡು ಫೈಟ್‌ಗಳು ಬಾಕಿ ಇವೆ. ಶೇ. 60ರಷ್ಟು ಚಿತ್ರೀಕರಣ ಮಡಿಕೇರಿಯಲ್ಲಿ ನಡೆದಿದ್ದು, ಸದ್ಯದಲ್ಲೇ ಆ್ಯಕ್ಷನ್ ದೃಶ್ಯಗಳನ್ನು ಚಿತ್ರೀಕರಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ತೊಡಗಿಕೊಳ್ಳಲಿದೆ. ಈ ಸಿನಿಮಾದಲ್ಲಿ ತಮಿಳಿನ ‘ಕಬಾಲಿ’ ಖ್ಯಾತಿಯ ಧನ್ಸಿಕಾ, ಅನೂಪ್‌ಸಿಂಗ್ ಠಾಕೂರ್, ತಾನ್ಯಾ ಹೋಪ್, ಶ್ರದ್ಧಾ ದಾಸ್ ಸೇರಿ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ಬಾಲಿವುಡ್‌ನ ಸಂಜಯ್ ಚೌಧರಿ ಸಂಗೀತ ಸಂಯೋಜಸುತ್ತಿದ್ದಾರೆ. ಡಿ ಕ್ರಿಯೇಶನ್ಸ್ ಬ್ಯಾನರ್‌ನಡಿ ದೇವರಾಜ್ ಮತ್ತು ರಾಜೇಂದ್ರ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಜನರಿಗೆ ಕುತೂಹಲ ಮೂಡಿಸುವ ಸಲುವಾಗಿ ಈ ರೀತಿಯ ಪೋಸ್ಟರ್ ಬಿಡುಗಡೆ ಮಾಡಿದ್ದೇವೆ. ಉಳಿದ ವಿವರಗಳನ್ನು ಸದ್ಯದಲ್ಲೇ ನೀಡುತ್ತೇವೆ. ಫಸ್ಟ್‌ ಲುಕ್‌ ಬರುತ್ತಿರುವ ಪ್ರತಿಕ್ರಿಯೆಗೆ ನಾನು ಬೆರಗಾಗಿದ್ದೇನೆ.
ಸುನೀಲ್ ಕುಮಾರ್ ದೇಸಾಯಿ, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌